Post navigation ಶೈಕ್ಷಣಿಕ ಬೆಂಗಳೂರು ವಿಷಯದ ಬಗ್ಗೆ ವಿಚಾರ. ಸಂಕಿರಣ ಅನುಗೊಂಡನಹಳ್ಳಿ ಯಲ್ಲಿ ಸಪ್ಟೆಂಬರ್ ಮಾಹೆಯ ಪೋಶಣ್ ಮಾಸಾಚರಣೆ ಪೌಷ್ಟಿಕ ಸಪ್ತಾಹ ಕಾರ್ಯಕ್ರಮ ಹೊಸಕೋಟೆ : ಅನುಗೊಂಡನಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಅನುಗೊಂಡನಹಳ್ಳಿ ಸರ್ಕಲ್ ಅಂಗನವಾಡಿ ಕಾರ್ಯಕರ್ತೆಯರು ಸಪ್ಟೆಂಬರ್ ಮಾಹೆಯ ಪೋಶಣ್ ಮಾಸಾಚರಣೆ ಪೌಷ್ಟಿಕ ಸಪ್ತಾಹ ಕಾರ್ಯಕ್ರಮವನ್ನು ಮಾಡಲಾಯಿತು. ಮೇಲ್ವಿಚಾರಕರಾದ ಶ್ರೀಮತಿ ಕಲ್ಪನಾ ರವರು ಮಾತನಾಡಿ ಮಹಿಳೆಯರಲ್ಲಿ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಬೇಕು ಹೆಚ್ಚಿನ ರೀತಿಯಲ್ಲಿ ಸೊಪ್ಪು ತರಕಾರಿಗಳನ್ನು ತಿನ್ನಬೇಕು ಅವುಗಳಲ್ಲಿರುವ ಅಂತಹ ಪೋಷಕಾಂಶಗಳು ನಮ್ಮ ದೇಹಕ್ಕೆ ಆರೋಗ್ಯಕರವಾಗಿರುತ್ತದೆ ಗರ್ಭಿಣಿಯರು ಮತ್ತು ಬಾಣಂತಿಯರು ಮತ್ತು ಮಕ್ಕಳು ಪೌಷ್ಟಿಕಾಂಶ ಇರುವಂತಹ ಆಹಾರ ಪದಾರ್ಥಗಳನ್ನು ತಿನ್ನಬೇಕು ನಮ್ಮಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮುಖ್ಯೋಪಾಧ್ಯಯರಾದ ಲಲಿತ ಮತ್ತು ಸಿಬ್ಬಂದಿಯವರು, ಸಿಆರ್ಪಿ ಸುಕುಮಾರ್ ,ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತರು, ಹಾಗೂ ಪೋಷಕರು ,ಗ್ರಾಮದ ಮಹಿಳೆಯರು ಗರ್ಭಿಣಿ ಬಾಣಂತಿಯರು ಹಾಜರಿದ್ದರು.