ಬೆಂಗಳೂರು : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಭಾರತದ ಸಂವಿಧಾನ ಪೀಠಿಕೆ ಓದುವ ಮೂಲಕ ಭಾರತ ಸಂವಿಧಾನದ ಆಶೋತ್ತರಗಳನ್ನು ಹಾಗೂ ಆಶಯಗಳನ್ನು ತಮ್ಮ ಜೀವನ ಮತ್ತು ಕರ್ತವ್ಯಗಳಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆಗೈದರು. ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವದ ಅರ್ಥ ಹಿನ್ನೆಲೆ ಮಹತ್ವ ಹಾಗೂ ಭಾರತದ ಸಂವಿಧಾನ ರಚನೆಯ ಹಿನ್ನೆಲೆ ರಚನಾ ಸಭೆಯಲ್ಲಿ ಭಾಗವಹಿಸಿದ ಮಹನೀಯರು ಅಧಿವೇಶನಗಳು ಪೀಠಿಕೆಯಲ್ಲಿರುವ ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣರಾಜ್ಯ, ಸ್ವಾತಂತ್ರ್ಯ, ನ್ಯಾಯ, ಸಮಾನತೆ, ಭ್ರಾತೃತ್ವ ಈ ಮಹತ್ವದ ಅಂಶಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಸುಖೀರಾಜ್ಯ ಕಲ್ಪನೆಗಳು, ಸಂವಿಧಾನ ಅಂಗೀಕಾರಗೊಂಡ ದಿನ ಪೂರ್ಣ ಸ್ವರಾಜ್ಯದ ಐತಿಹಾಸಿಕ ಸವಿ ನೆನೆಪಿಗಾಗಿ ಸಂವಿಧಾನವನ್ನು ಜಾರಿಗೊಳಿಸಿದ ದಿನಾಂಕಗಳನ್ನು ಹೀಗೆ ಭಾರತ ಸಂವಿಧಾನದ ಸಮಸ್ತ ಅಂಶಗಳನ್ನು ಒಳಗೊಂಡ ಪೀಠಿಕೆಯು ಸಂವಿಧಾನದ ದಿಕ್ಸೂಚಿಯಾಗಿದೆ ಎಂದು ಶಾಲಾ ಶಿಕ್ಷಕರು ಮಕ್ಕಳಿಗೆ ತಿಳಿಸಿದರು.
