ಶಿಡ್ಲಘಟ್ಟ,
ಇತ್ತೀಚಿಗೆ ತಾಲ್ಲೂಕಿನ ಬೈರಗಾನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ನಾರಾಯಣಸ್ವಾಮಿ ಎಂಬುವವರನ್ನು ದುಷ್ಕರ್ಮಿಗಳು ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಮಾಡಿದೆ, ಇದನ್ನು ಖಂಡಿಸಿ ದಲಿತ ಮುಖಂಡರಿಂದ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಬಹಿರಂಗ ಸಭೆ ಮಾಡಲಾಯಿತು.

ದಲಿತ ಮುಖಂಡರೆಲ್ಲಾ ಸೇರಿ ನಗರದ ಬೆಂಗಳೂರು ರಸ್ತೆಯಿಂದ ಕೋಟೆ ಸರ್ಕಲ್ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆಯ ಮೂಲಕ ಕೊಲೆ ಮಾಡಿರುವವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಸರ್ಕಾರಗಳ ನೀತಿಯನ್ನು ಖಂಡಿಸುತ್ತಾ ತಾಲ್ಲೂಕು ಕಛೇರಿಯ ಮುಂದೆ ಬಹಿರಂಗ ಸಭೆ ಮಾಡಲಾಯಿತು.
ವೇದಿಕೆಯಲ್ಲಿ ಚಿಕ್ಕ ಬಳ್ಳಾಪುರ ಸಾಂಸ್ಕೃತಿಕ ಕಲಾ ತಂಡದಿಂದ ಜೈ ಭೀಮ್ ಅಂಬೇಡ್ಕರ್ ರವರ ಹಾಡುಗಳು ಹಾಗೂ ಆಂಧ್ರಪ್ರದೇಶದ ಹೋರಾಟಗಾರರಾದ ಗದ್ಧರ್ ರವರ ಹಾಡುಗಳನ್ನು ಹಾಡುವುದರ ಮೂಲಕ ಸಾರ್ವಜನಿಕ ಗಮನ ಸೆಳೆದರು ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ನಮ್ಮ ದೇಶದಲ್ಲಿ ನಮಗೆ ರಕ್ಷಣೆ ಇಲ್ಲ, ದಿನೇ ದಿನೇ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದಲಾದರೂ ನಮ್ಮ ಬದುಕುಗಳು ಮಾತ್ರ ಬದಲಾಗುತ್ತಿಲ್ಲ ಎಂದು ಅಸಹನೆ ವ್ಯಕ್ತಪಡಿಸಿದರು. ದಿನಾಂಕ 24-08-2023ರಂದು ಸಂಜೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬೈರಗಾನಹಳ್ಳಿ ಗ್ರಾಮದ ದಲಿತ ಮುಖಂಡ ನಾರಾಯಣಸ್ವಾಮಿ ರವರನ್ನು ಅಮಾನುಷವಾಗಿ ಕೊಲೆ ಮಾಡಿರುವುದರಿಂದ ಸ್ಥಳೀಯ ನಾಗರೀಕರು ಮತ್ತು ದಲಿತ ಸಮುದಾಯದವರು ಭಯಭೀತರಾಗಿದ್ದಾರೆ. ಇದರಿಂದ ಸಮಾಜವೇ‌ ತಲೆ ತಗ್ಗಿಸುವಂತೆ ಆಗಿದ್ದು, ಇಂತಹ ಕೊಲೆಗಡುಕ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು, ಕೊಲೆಯಾಗಿರುವ ಕುಟುಂಬಕ್ಕೆ ಸೂಕ್ತ ರಕ್ಷಣೆ ಸರ್ಕಾರಿ ಉದ್ಯೋಗ ಐವತ್ತು ಲಕ್ಷ ಪರಿಹಾರ ಇನ್ನು ಮುಂದೆ ಆದರೂ ದಲಿತರ ಮೇಲೆ ದೌರ್ಜನ್ಯಗಳು ನಡೆಯದಂತೆ ಕ್ರಮ ಜರುಗಿಸಬೇಕೆಂದು ತಮ್ಮ ಹಕ್ಕೊತ್ತಾಯಗಳನ್ನು ತಿಳಿಯಪಡಿಸಿದರು. ಈ ಸಮ್ಮುಖದಲ್ಲಿ ತಾಲ್ಲೂಕಿನ ದಲಿತ ಸಮುದಾಯದವರೆಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *