ಪಟ್ಟಣದ ಎಸ್. ಎನ್. ರೆಸಾರ್ಟ್ ನಲ್ಲಿ ಬಂಗಾರಪೇಟೆ ಮತ್ತು ಕೆಜಿಎಫ್ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ 83 ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಆಟೋ ಓಡಿಸಿಕೊಂಡು ಯೂನಿಯನ್ ಮಾಡಿಕೊಂಡು ಹೇಗೆ ವಸೂಲು ಮಾಡುತ್ತಿದ್ದನು ಹಾಗೆ ಮಾಡುತ್ತಿದ್ದಾನೆ ಆ ದಂದೆ ಇನ್ನೂ ಬಿಟ್ಟಿಲ್ಲ ಪುಣ್ಯಾತ್ಮ ಎಂದರು.
ಯಾರೋ ಮಾಡಿದ ತಪ್ಪಿಗೆ ಜನರು ಕೋಪಗೊಂಡು ನಿನ್ನನ್ನು ಸಂಸದರಾಗಿ ಆಯ್ಕೆ ಮಾಡಿದ್ದಾರೆ ಅಷ್ಟೇ, ನಿನ್ನನ್ನು ಎಂಪಿ ಮಾಡಿದ ಮೇಲೆ ಕನಿಷ್ಠ ಪಕ್ಷ ಐದು ಜನಕ್ಕಾದರೂ ಸಹಾಯ ಮಾಡಬೇಕು , ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಚರಂಡಿ ವ್ಯವಸ್ಥೆ ಮಾಡಬೇಕು ಆದರೆ ಇದುವರೆಗೂ ಎಂ.ಪಿ ಯಾಗಿ ನಾಲ್ಕುವರೆ ವರ್ಷ ಆಗಿದೆ ಏನಾದರೂ ಮಾಡಿದ್ದೀಯಾ ಎಂದು ಪ್ರಶ್ನೆ ಮಾಡಿದರು.
ಆದರೆ ಪ್ರತಿ ಸಲ ಯಾವುದಾದರೂ ಸಭೆಗಳಿಗೆ ಬಂದಾಗ ಒಂದು ಜೋಬಿನಲ್ಲಿ ಬೆಂಕಿ ಪೆಟ್ಟಿಗೆ ಇನ್ನೊಂದು ಜೊಬ್ನಲ್ಲಿ ಪೆಟ್ರೋಲ್ ತಂದು ಸುರಿದು ಬೆಂಕಿ ಹಚ್ಚಿ ಹೋಗುತ್ತೀಯಾ ಎಂದು ಟೀಕಿಸಿದರು.
ಶ್ರೀನಿವಾಸಪುರದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸುವ ಮೂಲಕ ತಮ್ಮ ರೌಡಿಸಂ ಮಾಡಿ ಅಮಾಯಕ ರೈತರ ಮೇಲೆ ಕೇಸು ಹಾಕಿಸಿ ಬಡ ರೈತರನ್ನು ಜೈಲು ಪಾಲು ಮಾಡಿದ್ದೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಯೋಗ್ಯತೆಗೆ ತಾಲ್ಲೂಕಿನ ಯಾವ ಗ್ರಾಮದಲ್ಲೂ ಸಹ ಒಂದು ಟೇಬಲ್ ಹಾಕಲು ಆಗಲಿಲ್ಲ,ಒಂದು ಏಜೆಂಟ್ ಇರಲಿಲ್ಲ, ಒಂದು ಕಡೆ ಬೂತಿಲ್ಲ, ಒಬ್ಬ ವ್ಯಕ್ತಿಯು ಬಂದು ಒಂದು ವೋಟು ಸಹ ಕೇಳಲಿಲ್ಲ, ನಿಮ್ಮದು ಒಂದು ಜನ್ಮನಾ, ನೀನೊಬ್ಬ ಸಂಸದನಾ, ನಿನ್ನ ಯೋಗ್ಯತೆಗೆ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದರು.
ತಾಲ್ಲೂಕಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂ. ನಾರಾಯಣಸ್ವಾಮಿ ಮೂರು ಬಾರಿ ಶಾಸಕರಾಗಿದ್ದರು ಆದರೆ ವಿಧಾನಸಭಾ ಚುನಾವಣೆಯ ಕೊನೆಯ ದಿನದಲ್ಲಿ ಹಣಕಾಸಿನ ವ್ಯವಸ್ಥೆಯಾಗಿಲ್ಲ ಎಂದು ತಟಸ್ಥರಾಗುತ್ತಿರಲ್ಲ ಇದೇನಾ ನಿಮ್ಮ ಮೋದಿ ಕಲಿಸಿರುವ ಪಾಠ ಎಂದು ಪ್ರಶ್ನೆ ಮಾಡಿದರು.
ಬಂಗಾರಪೇಟೆತಾಲ್ಲೂಕಿನಲ್ಲಿ ಬಂದು ಏನೆಂದರೆ ಅದು ಮಾತನಾಡುತ್ತೀಯ ನಿನಗೆ ಏನಾದರೂ ಬದ್ಧತೆ ಇದೆಯಾ ಮುನಿಸ್ವಾಮಿ ನೀನು ಮಾಡಿರುವುದೇನೆಂದರೆ ನಿನ್ನ ಹೆಂಡತಿ ಹೆಸರಿಗೆ ಕ್ರಷರ್ ಮಾಡಿದ್ದೀಯಾ, ಪೆಟ್ರೋಲ್ ಬಂಕ್ ಮಾಡಿಕೊಂಡಿದ್ದೀಯ ನಿನ್ನ ಹೆಂಡತಿ ಹೆಸರಿಗೆ ಗ್ಯಾಸ್ ಮಾಡಿಕೊಂಡಿದ್ದೀಯ, ಹಾಗೂ ಅಮಾಯಕ ರೈತರನ್ನು ಪಿ. ನಂಬರ್ಗೆ ಹಾಕಿಸಿಕೊಂಡು ಅಲೆದಾಡಿಸುತ್ತಿದ್ದೀಯ ನೀನು ಸಂಸದನಾದ ಮೇಲೆ ನಮ್ಮ ರೈತರಿಗೆ ಏನು ಸಹಾಯವಾಗಲಿಲ್ಲ, ಕೇವಲ ಎರಡು ಬಸ್ ನಿಲ್ದಾಣಗಳು, ಎರಡು ಐ ಮಾಸ್ಟ ದೀಪಗಳು ಅಳವಡಿಸಿದ್ದೀಯಾ ಅಷ್ಟು ಬಿಟ್ಟರೆ ಏನು ಇಲ್ಲ ಎಂದರು.
ಆದರೆ ನಾನು ಶಾಸಕನಾದ ಮೇಲೆ ತಾಲ್ಲೂಕಿನ ಅಭಿವೃದ್ಧಿಗಾಗಿ 1,800 ಕೋಟಿ ಅನುದಾನವನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಆದರೆ ನಿನ್ನ ಸಾಧನೆ ಬರೀ ಬರುವುದು ಭಾಷಣ ಮಾಡುವುದು ಹೋಗುವುದು ಅಷ್ಟೇ ಎಂದರು.
ಪ್ರತಿ ಸಲ ಬಂಗಾರಪೇಟೆ ಕ್ಷೇತ್ರಕ್ಕೆ ಬಂದಾಗ ಇಲ್ಲಿನ ಶಾಸಕರು ಅಲ್ಲಿ ಜಮೀನ್ ಮಾಡಿಕೊಂಡಿದ್ದಾರೆ, ಇಲ್ಲಿ ಜಮೀನು ಮಾಡಿಕೊಂಡಿದ್ದಾರೆ ಎಂದು ನನ್ನ ಮೇಲೆ ಆರೋಪ ಮಾಡುತ್ತೀಯ ಆದರೆ ಇದುವರೆಗೂ ಯಾವುದಾದರೂ ಒಂದು ರುಜು ಮಾಡಿದ್ದೀಯಾ, ನಿನಗೆ ತಾಕತ್ತಿದ್ದರೆ ನೀನು ಒಬ್ಬರಿಗೆ ಹುಟ್ಟಿದ್ದರೆ ನೀನು ಮನುಷ್ಯನಾಗಿದ್ದರೆ ಒಂದು ತಪ್ಪನ್ನು ರುಜು ಮಾಡಿಸು ಎಂದು ಸವಾಲು ಹಾಕಿದರು.
ಲೇ ಸಂಸದ ಎಸ್.ಎನ್. ಮೇಲೆ ಕೇಸುಗಳು ಇದೆ ಅಂತ ಹೇಳುತ್ತೀಯಲ್ಲ, ರೌಡಿ ನಾನಲ್ಲ, ರೌಡಿ ನೀನು, ನಿನ್ನ ಮೇಲೆ ಕೇಸುಗಳಿರುವುದು,ನನ್ನ ಮೇಲೆ ಯಾವುದೇ ರೌಡಿಶೀಟರ್ ಇಲ್ಲ, ನೀನು ರೌಡಿಶೀಟರ್, ನೀನೊಬ್ಬ ರೌಡಿ, ನಿನ್ನ ಮೇಲೆ ಕೇಸುಗಳಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಚ್. ಕೆ. ನಾರಾಯಣಸ್ವಾಮಿ, ಉಪಾಧ್ಯಕ್ಷ ಪ್ರಭಾಕರ್, ನಿರ್ದೇಶಕರಾದ ವೆಂಕಟಾಚಲಪತಿ, ಮಹದೇವಪ್ಪ,ಮುನಿವೆಂಕಟಪ್ಪ, ಅ.ಮು.ಲಕ್ಷ್ಮೀನಾರಾಯಣ ಕರ್ಣ ಕುಮಾರ್, ವೆಂಕಟಪ್ಪ,ಜಗದೀಶ್ವರಿ ರಾಮೇಗೌಡ, ಮುನಿ ಲಕ್ಷ್ಮಮ್ಮ,ಕುಪ್ಪಯ್ಯ, ಸದಾನಂದ,ನಾರಾಯಣಗೌಡ, ಮಾಜಿ ಅಧ್ಯಕ್ಷ ಮಂಜುನಾಥ್, ವ್ಯವಸ್ಥಾಪಕ ಜಿ. ಪುರುಷೋತ್ತಮ್ , ಬಿ ಸುರೇಶ್ ಬಾಬು, ಎ. ಎನ್. ಸುಕನ್ಯ ಎಸ್. ಎನ್. ಶಾಂತ ಡಿ. ಸುರೇಶ್ ಬಾಬು ಎಚ್.ಎನ್. ಸಂತೋಷ್ ಕುಮಾರ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
