ಚಿಕ್ಕಬಳ್ಳಾಪುರ: 2024 ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಅಲಿಯೆನ್ಸ್ ಅಧಿಕಾರಕ್ಕೆ ಬರುತ್ತೆ,ಎನ್ ಡಿ ಎ ಮತ್ತು ಮೋದಿ ತಂಡಕ್ಕೆ ಸೋಲು ಖಚಿತ,ಇಂಡಿಯಾ ಅಥವಾ ಭಾರತ ಹೆಸರು ಬದಲಾವಣೆ ಅವಶ್ಯಕತೆ ಇಲ್ಲಾ ಸಂವಿಧಾನದಲ್ಲಿಯೇ ಇಂಡಿಯಾ ಅಥವಾ ಭಾರತ ಎಂದೆ ನಮೂದಾಗಿದೆ ಹೆಸರು ಬದಲಾವಣೆಯಿಂದ ದೇಶ ಅಭಿವೃದ್ದಿಯಾಗಲ್ಲ,ಆಸ್ಪತ್ರೆಗಳು,ವಿಶ್ವ ವಿದ್ಯಾಲಯಗಳು ಕಟ್ಟಿ ಅಭಿವೃದ್ದಿ ಪಡಿಸಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಹೇಳಿದರು.ಚಿಕ್ಕಬಳ್ಳಾಪುರ ನಗರದಲ್ಲಿ ಸಾರ್ವಜನಿಕ ಗಣೇಶಗಳ ಪ್ರತಿಷ್ಟಾಪನೆ ಮಂಟಪಗಳನ್ನ ಕಾಂಗ್ರೇಸ್ ಯುವ ಮುಖಂಡ ರಕ್ಷಾ ರಾಮಯ್ಯ ವೀಕ್ಷಣೆ ಮಾಡಿದರು ನಗರದ ವಾಪಸಂದ್ರ ವಿದ್ಯಾಗಣಪತಿ ಗೆಳೆಯರ ಬಳಗ ವರಸಿದ್ದಿ ವಿನಾಯಕ ಸ್ನೇಹ ಕೂಟ ಪ್ರತಿಷ್ಟಾಪಿಸಿದ್ದ ಗಣೇಶ ವೀಕ್ಷಣೆ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ವಿಜ್ಞ ನಿವಾರಕ ಗಣೇಶ ಜನರ ಸಂಕಷ್ಟ ಪರಿಹರಿಸಲಿ,ಯುವಕರು ಮುಂದೆ ಬಂದು ಗಣೇಶ ಪ್ರತಿಷ್ಟಾಪನೆ ಮಾಡಿದ ಭಕ್ತಿ ಮೆರೆದಿದ್ದಾರೆ ಚಿಕ್ಕಬಳ್ಳಾಪುರ,ಮಲ್ಲೇಶ್ವರಂ ಹಾಗು ಗೊಕುಲ ಯುವಕರಿಗೆ ಗಣೇಶ ಸ್ಥಾಪನೆಗೆ ಸಹಾಯ ಮಾಡಿದ್ದೇನೆ ಎಂದ ಅವರು ಜಿಲ್ಲೆಯಲ್ಲಿ ಯುವ ಮತದಾರರ ಅಭಿಯಾನ ಕುರಿತು ಮಾತನಾಡಿ ಮೋದಲ ಮತದಾರರಿಂದ ಉತ್ತಮ ರೆಸ್ಪಾನ್ಸ್ ಬರ್ತಿದೆ.ರಾಜ್ಯದಲ್ಲಿ 2ಲಕ್ಷ ಮೊದಲ ಮತದಾರರ ನೊಂದಣೆಯಾಗಿದೆ ಎಂದರು. ಇಂಡಿಯಾ ಅಲಿಯೆನ್ಸ್ ಮುಂದಿನ 2024 ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಭವಿಷ್ಯ ನುಡಿದರು ಇಂಡಿಯಾ ಹೆಸರು ಬದಲಾವಣೆ ಬಗ್ಗೆಯೂಮಾತನಾಡಿ ಇಂಡಿಯಾ ಅಥವಾ ಭಾರತ ಅನ್ನೋ ಎರಡು ಹೆಸರುಗಳು ಸಂವಿಧಾನದಲ್ಲಿಯೇ ಅಡಕವಾಗಿವೆ ಹಸರು ಬದಲಾವಣೆಯಿಂದ ಧೇಶದ ಅಭಿವೃದ್ದಿಯಾಗೊಲ್ಲ ಆಸ್ಪತ್ರೆ,ಕೈಗಾರಿಕೆ ಶಿಕ್ಷಣ ಸಂಸ್ಥೆಗಳಹೆಚ್ಚಳ ಮಾಡಬೇಕು ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದವೂ ಮಾತನಾಡಿದರು.ಈ ವೇಳೆ ತಾಲೂಕ್ ಯುವ ಕಾಂಗ್ರೇಸ್ ಅಧ್ಯಕ್ಷ ಕುಬೇರ ಅಚ್ಚು,ಶಂಕರ್,
ಡ್ಯಾನ್ಸ್ ಸೀನು, ಮಂಡಿಕಲ್ ಕುಪೇಂದ್ರ,ಸುನಿಲ್,ಕೋಡೇಸ್ ವೆಂಕಟೇಶ್,ಶಾಹಿದ್ ಅಬ್ಬಾಸ್,ಪೇರೇಸಂದ್ರ ದಯಾನಂದ್,ರಾಜ್ ಶೇಖರ್ ಮತ್ತು
ಇತರರು ಇದ್ದರು.
