ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮುರುಘಮಲ್ಲ ಗ್ರಾಮದ ಹಜ್ರತ್ ಅಮ್ಮಾ ಜಾನ್ ಬಾವಾಜಾನ್ ದರ್ಗಾ ವಕ್ಪ್ ಆಸ್ತಿಯಲ್ಲಿ ತಲೆಯೆತ್ತಿರುವ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಲು ಜಿಲ್ಲಾ ಮಾಜಿ ವಕ್ಪ್ ಅಧ್ಯಕ್ಷ ಬಿ.ಎಸ್.ರಫಿ ಉಲ್ಲಾ ರವರು ಜಿಲ್ಲಾಧಿಕಾರಿ ರವರಿಗೆ ಮನವಿ ಸಲ್ಲಿಸಿದರು.
ಅಂದಿನ ಚಿಕ್ಕಬಳ್ಳಾಪುರ ಜಿಲ್ಲಾ ವಕ್ಫ್ ಅಧ್ಯಕ್ಷರಾಗಿದ್ದ ಬಿ.ಎಸ್.ರಫೀ ಉಲ್ಲಾ ರವರ ಅವಧಿಯಲ್ಲಿ ದಕ್ಷಿಣ ಭಾರತದಲ್ಲೇ ಸುಪ್ರಸಿದ್ದ ಹಾಗೂ ಐತಿಹಾಸಿಕ ಧಾರ್ಮಿಕ ಯಾತ್ರಾಸ್ಥಳವಾದ ಹಜ್ರತ್ ಅಮ್ಮಾ ಜಾನ್ ಬಾವಾ ಜಾನ್ ದರ್ಗಾ ವಕ್ಫ್ ಸ್ವತ್ತಿನಲ್ಲಿ ಸುಮಾರು 75ವರ್ಷಗಳಿಂದ ವಕ್ಫ್ ಆಸ್ತಿಯನ್ನು ಕಬಳಿಸಿಕೊಂಡು ಅನಧಿಕೃತ ಕಟ್ಟಡ ಮಳಿಗೆಗಳನ್ನು ನಿರ್ಮಾಣ ಮಾಡಿಕೊಂಡು ವ್ಯಾಪಾರ ಹಾಗೂ ಇನ್ನಿತರೆ ಚಟುವಟಿಕೆಗಳನ್ನು ನಡೆಸುತ್ತಿದ್ದವರ ವಿರುದ್ದ ಕ್ರಮಕ್ಕೆ ಮುಂದಾದ ಬಿ.ಎಸ್.ರಫೀ ಉಲ್ಲಾ ರವರು ಅಂದಿನ ಜಿಲ್ಲಾಧಿಕಾರಗಳ ನೇತೃತ್ವದಲ್ಲಿ ಹಾಗೂ ಜಿಲ್ಲಾ ಪೋಲೀಸ್ ಇಲಾಖೆಯ ಸಹಯೋಗದೊಂದಿಗೆ 2016ರಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದ ಕಾರ್ಯಚರಣೆಯು ರಾಜ್ಯದಲ್ಲೇ ಅಂದು ಐತಿಹಾಸಿಕ ಕಾರ್ಯವಾಗಿತ್ತು ಮುಂದುವರೆದು ಸದರಿ ವಕ್ಫ್ ಆಸ್ತಿಯನ್ನು ಸಂರಕ್ಷಣೆ ಹಾಗೂ ಅಭಿವೃದ್ಧಿ ಪಡೆಸುವ ನಿಟ್ಟಿನಲ್ಲಿ ರಾಜ್ಯ ವಕ್ಫ್ ಮಂಡಳಿ ವತಿಯಿಂದ ಅನುದಾನವನ್ನು ಮಂಜೂರು ಮಾಡಿಸಿ ದರ್ಗಾದ ಸುತ್ತಮುತ್ತಲು ಕಾಂಪೌಂಡ್ ಗೋಡೆ ನಿರ್ಮಾಣ ಮಾಡಿಸಲಾಗಿತ್ತು.
ಆದರೆ ಪ್ರಸ್ತುತ ದರ್ಗಾ ಸಂರಕ್ಷಣೆಗಾಗಿ ನಿರ್ಮಾಣ ಮಾಡಲಾಗಿರುವ ಕಾಂಪೌಂಡ್ ಗೋಡೆ ಹೊರಭಾಗದಲ್ಲಿ ಹಾಗೂ ದರ್ಗಾಗೆ ಆಗಮಿಸುವ ಮುಖ್ಯ ರಸ್ತೆ ಹಾಗೂ ಮುಖ್ಯದ್ವಾರದ ಹತ್ತಿರ ಅನಧಿಕೃತವಾಗಿ ಮರು ಅಂಗಡಿ ಮುಂಗಟ್ಟುಗಳನ್ನು ನಿರ್ಮಾಣ ಮಾಡಿಕೊಂಡಿರುತ್ತಾರೆ ಇದರಿಂದ ದೇಶದ ನಾನಾ ಭಾಗಗಳಿಂದ ದರ್ಗಾಗೆ ದಿನನಿತ್ಯ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಹಾಗೂ ತಿಂಗಳಿಗೊಮ್ಮೆ ಅಮಾವಸ್ಯೆ ದಿನದಂದು ಆಗಮಿಸುವ ಸುಮಾರು 25ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು ಹಾಗೂ ಇದೇ ತಿಂಗಳ ದಿನಾಂಕ 29&30 ರಂದು ದರ್ಗಾದ ಗಂಧ & ಉರುಸ್ ಕಾರ್ಯಕ್ರಮ ನಡೆಯಲಿದ್ದು ಸದರಿ ಗಂಧ ಮತ್ತು ಉರುಸ್ ಕಾರ್ಯಕ್ರಮಕ್ಕೆ ಸುಮಾರು 70 ರಿಂದ 80 ಸಾವಿರ ಭಕ್ತಾದಿಗಳು ಆಗಮಿಸುವರು ಆದ ಕಾರಣ ದರ್ಗಾಗೆ ಆಗಮಿಸುವ ಭಕ್ತಾದಿಗಳ ಹಿತದೃಷ್ಟಿಯಿಂದ ಸದರಿ ಅನಧಿಕೃತ ಕಟ್ಟಡಗಳು ಹಾಗೂ ಮಳಿಗೆಗಳನ್ನು ತೆರವುಗೊಳಿಸಲು ಚಿಕ್ಕಬಳ್ಳಾಪುರ ಜಿಲ್ಲಾ ಮಾಜಿ ವಕ್ಫ್ ಅಧ್ಯಕ್ಷರಾದ ಬಿ.ಎಸ್.ರಫೀ ಉಲ್ಲಾ ರವರು ಜಿಲ್ಲಾಧಿಕಾರಿಗಳಿಗೆ ಮಾನವಿಯನ್ನು ಸಲ್ಲಿಸಿದ್ದಾರೆ.

Sep 20, 2023

Leave a Reply

Your email address will not be published. Required fields are marked *