ಕೆಜಿಎಫ್ ನಗರಸಭೆ ವ್ಯಾಪ್ತಿಯ ಚರಂಡಿಯಲ್ಲಿ ಗಿಡಗಂಟುಗಳು: ಕನ್ನಡ ಹೋರಾಟಗಾರರು ವಿ ಎಸ್ ಪ್ರಕಾಶ್ ಆಗ್ರಹ: ಕೆಜಿಎಫ್: ನಗರಸಭೆ ಮುಂಭಾಗದಲ್ಲಿರುವ ಪುಟ್ ಪಾತ್ ಹಾಗೂ ಚರಂಡಿಯನ್ನು ನಗರಸಭೆಯಿಂದ ಸ್ವರಾಜ್ ಮುಲ್ ವೃತ್ತದ ವರೆಗೆ ಕಳೆದ ಆರು ತಿಂಗಳ ಹಿಂದೆ ಅಷ್ಟೇ ಲಕ್ಷಾಂತರ ಅನುದಾನವನ್ನು ವೆಚ್ಚ ಮಾಡಿ ನಿರ್ಮಿಸಿದ್ದ, ಪುಟ್ ಪಾತ್ ನ್ನು
ಗಿಡಗಳು ಅಕ್ರಮಿಸಿಕೊಳ್ಳುತ್ತಿದ್ದರು. ಹೇಳುವರು ಕೇಳುವರು ಯಾರು ಇಲ್ಲದಂತೆ ಆಗಿದೆ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಲಾಗಿರುವ ಫುಟ್ಪಾತ್ ಹಾಗೂ ಚರಂಡಿಯನ್ನು ನಿರ್ಮಿಸಲಾಗಿದ್ದು. ಮಳೆ ಬಂದರೆ ಮಳೆ ನೀರು ಚರಂಡಿಯಲ್ಲಿ ಹರಿಯುವುದೇ ಇಲ್ಲ ಚರಂಡಿಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಪಾದ ಚಾರಿಗಳು ನಡೆದಾಡಲು ನಿರ್ಮಿಸಿರುವ ಫುಟ್ಬಾತ್ ನಲ್ಲಿ ಪಾರ್ಥೇನಿಯಂ ಗಿಡಗಳು ಬೆಳೆದು ನಿಂತಿದೆ ಆದ್ದರಿಂದ ಸಾರ್ವಜನಿಕರು ಫುಟ್ಪಾತ್ ನಲ್ಲಿ ಮೇಲೆ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳು ಬರುತ್ತದೆ. ನಗರ ಸಭೆ ಪಕ್ಕದಲ್ಲಿ ಇಷ್ಟೊಂದು ಆವ್ಯವಸ್ಥೆ ಇದ್ದರು ಅಧಿಕಾರಿಗಳು ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಬೆಳಗ್ಗೆದ್ದರೆ ನಡೆಸುವವರು ಆದರೆ ಯಾರು ಇದರ ಬಗ್ಗೆ ಕೇರ್ ಮಾಡುತ್ತಿಲ್ಲ ಇನ್ನು ಸ್ವಲ್ಪ ದಿನಗಳು ಕಳೆದರೆ ರಸ್ತೆ ಯಾವುದೋ ಪುಟ್ ಪಾತ್ ಯಾವುದು ಎಂದು ತಿಳಿಯದಂತಾಗಿದೆ ಆಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಗಡಿ ನಾಡು ಕನ್ನಡ ಪರ ಹೋರಾಟಗಾರರು ವಿ .ಎಸ್.ಪ್ರಕಾಶ್ ನಗರಸಭೆ ಪಕ್ಕದಲ್ಲಿ ಇಂತಹ ಪರಿಸ್ಥಿತಿ ಏರ್ಪಟ್ಟಿದ್ದರು ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ದುರಾದೃಷ್ಟಕರ ಸಂಗತಿ ತಕ್ಷಣ ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕ ಹಣ ಪೋಲಾಗದಂತೆ ಎಚ್ಚರ ವಹಿಸಬೇಕೆಂದು ಆಗ್ರಹ ಪಡಿಸಿದರು.

Sep 22, 2023

Leave a Reply

Your email address will not be published. Required fields are marked *