ಬಂಗಾರಪೇಟೆ: ತಾಲ್ಲೂಕಿನ ಬಲ ಮಂದೆ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ವತಿಯಿಂದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದ ಅಧ್ಯಕ್ಷ ಜಿ. ವೆಂಕಟೇಶ್ ಗೌಡ ಮಾತನಾಡಿ ಸಂಘದಲ್ಲಿ ಒಟ್ಟು 933 ಸದಸ್ಯರ ಸಂಖ್ಯೆ ಇದ್ದು, ಸಂಘವು ಬ್ಯಾಂಕಿನಲ್ಲಿ ಹೊಂದಿರುವ ಷೇರು ಮೊತ್ತ 3688847 ರೂ ಹೊಂದಿದ್ದು 2022-23ನೇ ಸಾಲಿಗೆ ಸಂಘವು ಗಳಿಸಿರುವ ಲಾಭ- 50157 ರೂ ಆಗಿದ್ದು ನಾವು ನಮ್ಮ ಸಂಘದಿಂದ 465 ಸದಸ್ಯರಿಗೆ 82031391 ರೂ ಸಾಲ ವಿತರಿಸಲಾಗಿದೆ. ಈ ಮೊತ್ತದಲ್ಲಿ ಕೆಸಿಸಿ ಅಡಿಯಲ್ಲಿ 368 ಸದಸ್ಯರಿಗೆ- 44277000 ರೂ, ಎಸ್ ಎಚ್ ಜಿ 84 ಸದಸ್ಯರಿಗೆ- 33867440 ರೂ, ರೇಷ್ಮೆ ಮನೆ 5 ಸದಸ್ಯರಿಗೆ- 1316581 ರೂ, ಮಿನಿ ಡೈರಿ 6 ಸದಸ್ಯರಿಗೆ- 1971207 ರೂ ಕೋಳಿ ಫಾರಂ 2 ಸದಸ್ಯರಿಗೆ- 599163 ರೂ ಕೊಡಲಾಗಿದೆ. ಹಾಗೂ ಮಹಿಳಾ ಸಂಘಗಳಿಂದ- 12019640 ರೂ ಸಾಲ ವಸೂಲಿ ಮತ್ತು ಸದಸ್ಯರಿಂದ ಕೆಸಿಸಿ ಸಾಲ ವಸೂಲಿ- 39024000 ರೂ, ಮಿನಿ ಡೈರಿ ಸಾಲ ವಸೂಲಿ-512793 ರೂ, ರೇಷ್ಮೆ ಮನೆ ಸಾಲವಸೂಲಿ-671956 ರೂ, ಕೋಳಿ ಫಾರಂ ಸಾಲ ವಸೂಲಿ- 95954 ರೂ ಜಮಾ ಆಗಿದೆ, ಹಾಗೂ ಜಿಲ್ಲಾ ಬ್ಯಾಂಕ್ ಮಹಿಳಾ ಸಂಘಗಳ ಖಾತೆಗೆ -12220050 ರೂ, ಜಿಲ್ಲಾ ಬ್ಯಾಂಕ್ ಕೆಸಿಸಿ ಸಾಲದ ಖಾತೆಗೆ -40286158 ರೂ, ಜಿಲ್ಲಾ ಬ್ಯಾಂಕ್ ಮಿನಿ ಡೈರಿ ಸಾಲದ ಖಾತೆಗೆ- 648569 ರೂ, ಜಿಲ್ಲಾ ಬ್ಯಾಂಕ್ ರೇಷ್ಮೆ ಮನೆ ಸಾಲದ ಖಾತೆಗೆ- 593078 ರೂ, ಜಿಲ್ಲಾ ಬ್ಯಾಂಕ್ ಕೋಳಿ ಫಾರಂ ಸಾಲದ ಖಾತೆಗೆ- 225195 ರೂ ಹಾಕಲಾಗಿದೆ. ಮತ್ತು ಸರ್ಕಾರದಿಂದ ಬಡ್ಡಿ ಮತ್ತು ಇತರೆ ಹಣ- 4565813 ರೂ, ಜಿಲ್ಲಾ ಬ್ಯಾಂಕಿಗೆ ಬಡ್ಡಿ ಮತ್ತು ಇತರೆ ಖರ್ಚುಗಳು- 4515656 ರೂ, ಮರಣ ಹೊಂದಿರುವವರ ಸಾಲ ಬರಬೇಕಾದದ್ದು -1354000 ಹಾಗೂ ಸದಸ್ಯರಿಂದ ಸಾಲ ವಸೂಲಿ -52324343 ರೂ, ಜಿಲ್ಲಾ ಬ್ಯಾಂಕಿಗೆ ಸಾಲದ ಅಸಲು -53973050 ರೂ, ಮತ್ತು ಜಿಲ್ಲಾ ಬ್ಯಾಂಕಿಗೆ -1648707 ರೂ ಹೆಚ್ಚು ಹಣ ಪಾವತಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ನಮ್ಮ ಸಂಘದ ವತಿಯಿಂದ ಸದಸ್ಯರಿಗೆ ಸಾಲವನ್ನು ವಿತರಣೆ ಮಾಡುತ್ತೇವೆ, ಹೊಸದಾಗಿ ಸಂಘದ ಸದಸ್ಯತ್ವ ನೋಂದಣಿ ಮಾಡಲು ರೂ.1000 ನಿಗದಿಪಡಿಸಲಾಗಿದೆ. ಇದರಲ್ಲಿ ಎಸ್ ಸಿ. ಎಸ್ ಟಿ. ಸಮುದಾಯದವರು ಸಂಘದ ಸದಸ್ಯತ್ವ ಪಡೆಯಲು ಯಾವದೇ ಶುಲ್ಕ ಇರುವುದಿಲ್ಲ ಸರ್ಕಾರ ಕೇಳಿರುವ ದಾಖಲೆ ಸಲ್ಲಿಸಿದರೆ ಸಾಕು, ಉಚಿತ ಸದಸ್ಯತ್ವ ನೀಡಲಾಗುತ್ತದೆ. ನಮ್ಮ ವ್ಯವಸಾಯ ಸೇವಾ ಸಂಘವನ್ನು ಜಿಲ್ಲೆಯಲ್ಲಿಯೇ ಉನ್ನತ ಸ್ಥಾನ ಅಲಂಕರಿಸಲು ಶ್ರಮಿಸಿವೆ ಆದ್ದರಿಂದ ನಮ್ಮ ಸಂಘದ ಸದಸ್ಯರು ಸಹಕಾರ ಸಂಘದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳ ಬೇಕೆಂದು ತಿಳಿಸಿದರು.

Sep 22, 2023

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎಂ. ಶ್ರೀನಿವಾಸಪ್ಪ , ನಿರ್ದೇಶಕರಾದ ಎಂ. ನಾಗರಾಜ್. ಅಂಕಿ ರೆಡ್ಡಿ. ಎಂ. ಪೆದ್ದನ್ನ. ಆರ್. ಸಂಪಂಗಿ. ಗೋಪಾಲಪ್ಪ. ಶ್ರೀ ರಾಮಪ್ಪ. ಚೌಡಮ್ಮ. ಶ್ರೀರಾಮಪ್ಪ. ನಾರಾಯಣಮ್ಮ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ವೇಣುಗೋಪಾಲ್. ವಿನೋದ್ ಕುಮಾರ್. ಸಿಬ್ಬಂದಿ ವರ್ಗ ರಾಜಪ್ಪ. ಸಂತೋಷ್. ಕೆ. ಮುನಿಯಪ್ಪ ನವೀನ್. ರಾಜು ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *