ಬಂಗಾರಪೇಟೆ: ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಬಡ ಜನರ ಆರೋಗ್ಯಕ್ಕೆ ಸಂಬAಧಪಟ್ಟAತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜೈ ಭುವನೇಶ್ವರಿ ಕರುನಾಡ ಸೇನೆ ಹಾಗೂ ವೈದೇಹಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ, ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಹಾಗೂ ಪಟ್ಟಣದ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿAದ ಪಾರು ಮಾಡಲು ಸಾಧ್ಯ, ನುರಿತ ವೈದ್ಯರಿಂದ ತಪಾಸಣೆ ನಡೆಯುತ್ತಿದೆ, ಹೃದಯ ರೋಗ, ನರ ರೋಗ, ಕಿಡ್ನಿಯಲ್ಲಿ ಕಲ್ಲು, ಮೂತ್ರಕೋಶ ಹಾಗೂ ಮೂತ್ರಪಿಂಡಕ್ಕೆ ಸಂಬAದಿಸಿದ ಸಮಸ್ಯೆಗಳು, ಕ್ಯಾನ್ಸರ್, ಮೂಳೆ ಶಾಸ್ತç, ಸ್ತಿçà ರೋಗ, ಕಿವಿ, ಮೂಗು ಗಂಟಲು ಖಾಯಿಲೆ, ಉಚಿತ ಎಕೋ ಮತ್ತು ಇಸಿಜಿಯನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.

Sep 22, 2023

ಪ್ರಸ್ತುತ ದಿನಗಳಲ್ಲಿ ಬಹುತೇಕ ಸ್ವಯಂ ಸೇವಾ ಸಂಘಟನೆಗಳು ರೋಲ್‌ಕಾಲ್ ಮಾಡಿ ಹಣ ಕೊಳ್ಳೆಯಲು ಮಗ್ನರಾಗಿದ್ದಾರೆ. ಇಂತಹ ಸಂದ್ಗಿದ ಸನ್ನಿವೇಶದಲ್ಲಿ ಸಮಾಜ ಸೇವೆಗೆ ಕಟ್ಟುಬದ್ದವಾಗಿ ಜನರ ಹಿತ ಕಾಯುವ ನಿಟ್ಟಿನಲ್ಲಿ ಜೈ ಭುವನೇಶ್ವರಿ ಕರುನಾಡ ಸೇನೆ ನಿಂತಿರುವುದು ಹೆಮ್ಮೆಯ ವಿಚಾರ. ಜೈ ಭುವನೇಶ್ವರಿ ಕರುನಾಡ ಸೇನೆ ಕನ್ನಡ ನಾಡು, ನುಡಿ, ಜಲ ಹಿತ ಕಾಯುವುದರೊಂದಿಗೆ ಸಾಮಾಜಿಕ ಸೇವಾ ಪ್ರವೃತ್ತಿಯನ್ನು ಕರಗತ ಮಾಡಿಕೊಂಡಿರುವುದು ಸಂತಸವಾಗಿದೆ. ಈ ಸಂಘಟನೆಯು ಮುಂದಿನ ದಿನಮಾನಗಳಲ್ಲಿ ಅತ್ಯುತ್ತನ ಸ್ಥಾನಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದಾಕಾಲ ಸಂಘದ ಕಾರ್ಯಚಟುವಟಿಗೆಕೆಗಳಿಗೆ ಬೆಂಬಲವಾಗಿ ನಿಲ್ಲುವುದು ಶಾಸಕನಾಗಿ ನನ್ನ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ಡಾ. ಭಾರತಿ, ಆರೋಗ್ಯ ನಿರೀಕ್ಷಕ ಆರ್. ರವಿಕುಮಾರ್, ಚಂದ್ರಕುಮಾರ್, ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ರಮೇಶ್, ಸಂಘದಪದಾಧಿಕಾರಿಗಳಾದ ರಾಮರೆಡ್ಡಿ, ಸಂದೀಪ್, ಹರೀಶ್‌ಕುಮಾರ್, ಕುಮರೇಶ್, ಮತ್ತು ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *