ಪ್ರಸ್ತುತ ದಿನಗಳಲ್ಲಿ ಬಹುತೇಕ ಸ್ವಯಂ ಸೇವಾ ಸಂಘಟನೆಗಳು ರೋಲ್ಕಾಲ್ ಮಾಡಿ ಹಣ ಕೊಳ್ಳೆಯಲು ಮಗ್ನರಾಗಿದ್ದಾರೆ. ಇಂತಹ ಸಂದ್ಗಿದ ಸನ್ನಿವೇಶದಲ್ಲಿ ಸಮಾಜ ಸೇವೆಗೆ ಕಟ್ಟುಬದ್ದವಾಗಿ ಜನರ ಹಿತ ಕಾಯುವ ನಿಟ್ಟಿನಲ್ಲಿ ಜೈ ಭುವನೇಶ್ವರಿ ಕರುನಾಡ ಸೇನೆ ನಿಂತಿರುವುದು ಹೆಮ್ಮೆಯ ವಿಚಾರ. ಜೈ ಭುವನೇಶ್ವರಿ ಕರುನಾಡ ಸೇನೆ ಕನ್ನಡ ನಾಡು, ನುಡಿ, ಜಲ ಹಿತ ಕಾಯುವುದರೊಂದಿಗೆ ಸಾಮಾಜಿಕ ಸೇವಾ ಪ್ರವೃತ್ತಿಯನ್ನು ಕರಗತ ಮಾಡಿಕೊಂಡಿರುವುದು ಸಂತಸವಾಗಿದೆ. ಈ ಸಂಘಟನೆಯು ಮುಂದಿನ ದಿನಮಾನಗಳಲ್ಲಿ ಅತ್ಯುತ್ತನ ಸ್ಥಾನಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದಾಕಾಲ ಸಂಘದ ಕಾರ್ಯಚಟುವಟಿಗೆಕೆಗಳಿಗೆ ಬೆಂಬಲವಾಗಿ ನಿಲ್ಲುವುದು ಶಾಸಕನಾಗಿ ನನ್ನ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ಡಾ. ಭಾರತಿ, ಆರೋಗ್ಯ ನಿರೀಕ್ಷಕ ಆರ್. ರವಿಕುಮಾರ್, ಚಂದ್ರಕುಮಾರ್, ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ರಮೇಶ್, ಸಂಘದಪದಾಧಿಕಾರಿಗಳಾದ ರಾಮರೆಡ್ಡಿ, ಸಂದೀಪ್, ಹರೀಶ್ಕುಮಾರ್, ಕುಮರೇಶ್, ಮತ್ತು ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
