ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳೆಲ್ಲರೂ ಇಂದು ವೇಷ ಭೂಷಣಗಳನ್ನು ಧರಿಸಿ ಬಹಳ ಉತ್ಸಾಹದಿಂದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದು. ನಾವು ಏನು ಬೇಕಾದರೂ ಕೊಂಡುಕೊಳ್ಳಬಹುದು ಆದರೆ ವಿದ್ಯೆ ಮತ್ತು ಕಲೆಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ, ಕಲೆ ಮತ್ತು ವಿದ್ಯೆ ಕದಿಯಲಾಗದ ವಸ್ತುಗಳು, ಸರ್ಕಾರಿ ಶಾಲೆಯ ಮಕ್ಕಳು ಬಹಳ ಬುದ್ಧಿವಂತರು ಎಂದರು.

ಸರ್ಕಾರಿ ಶಾಲೆಯ ಮಕ್ಕಳಿಗೆ ಎಲ್ಲಾ ವಿಷಯಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿರುತ್ತದೆ ಅದರಲ್ಲೂ ಹಳ್ಳಿಯ ಮಕ್ಕಳಂತೂ ಮೊದಲು ಸುತ್ತಮುತ್ತಲು ಬೆಳೆಯುವ ಎಲ್ಲಾ ತರಕಾರಿಗಳ ಬಗ್ಗೆ ತಿಳಿದಿರುತ್ತಾರೆ ಮಕ್ಕಳಿಗೆರಾಗಿ ಬೆಳೆಯ ಬಗ್ಗೆ ಗೊತ್ತು, ವ್ಯವಸಾಯ ಯಾವ ರೀತಿ ಮಾಡಬೇಕೆಂಬುದು ಮಕ್ಕಳಿಗೆ ಗೊತ್ತಿರುತ್ತದೆ, ಖಾಸಗಿ ಶಾಲೆಗಳ ಮಕ್ಕಳ ಸಮನಾಗಿ ಸರ್ಕಾರಿ ಶಾಲೆ ಮಕ್ಕಳು ಎಲ್ಲಾ ರೀತಿಯಲ್ಲಿ ಮುಂದಿದ್ದಾರೆ.

ಸರ್ಕಾರಿ ಶಾಲೆಗೆ ಎಲ್ಲ ಬಡಮಕ್ಕಳು ಬರುವುದರಿಂದ ಅವರಿಗೆ ಮಧ್ಯಾಹ್ನ ಬಿಸಿಯೂಟ, ವಾರದಲ್ಲಿ ಎರಡು ಬಾರಿ ಕೋಳಿ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು, ನೀಡುತ್ತೇವೆ ಹಾಗೂ ಶೂ,ಪಠ್ಯಪುಸ್ತಕ ವಿಶೇಷವಾಗಿ ಪಾಠ ಭೋದಿಸಲು ಉನ್ನತ ಶಿಕ್ಷಕರನ್ನು ನೀಡುತ್ತೇವೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮಕ್ಕಳು ಸಮಾಜ ಕಟ್ಟುವಂತವರಾಗಬೇಕು. ಸರ್ಕಾರಿ ಶಾಲೆಯಲ್ಲಿ ಓದಿದಂತಹ ಮಕ್ಕಳು ಐಎಎಸ್, ಐಪಿಎಸ್,ಕೆ ಎ ಎಸ್, ಇಂಜಿನಿಯರ್, ವಿಜ್ಞಾನಿಗಳು ಸಹ ಆಗಿದ್ದಾರೆ.

ಪ್ರತಿಭಾ ಕಾರಂಜಿಯಲ್ಲಿ ಗೆದ್ದರೂ, ಸೋತರು ಸಹ ಕಲೆಯನ್ನು ಕಲೆಯಾಗಿಯೇ ಸ್ವೀಕರಿಸಿ ಸೋಲು, ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ, ಸೋತವರು ಮುಂದಿನ ದಿನಗಳಲ್ಲಿ ತಮ್ಮ ಕಲೆಯನ್ನು ಇನ್ನೂ ಹೆಚ್ಚಿಗೆ ಪ್ರದರ್ಶಿಸಲು ಪ್ರಯತ್ನಿಸಿ ಎಂದು ಕಿವಿಮಾತು ಹೇಳಿದರು.

ತಮ್ಮ ಕಲೆಯನ್ನು ಪ್ರದರ್ಶಿಸಿ ಜಿಲ್ಲಾ ಹಾಗೂ ರಾಜ್ಯ ರಾಷ್ಟ್ರಮಟ್ಟಕ್ಕೆ ಹೋಗಬೇಕು ಹಾಗೂ ರಾಷ್ಟ್ರಮಟ್ಟಕ್ಕೆ ಹೋಗುವ ಮಕ್ಕಳ ಖರ್ಚು ವೆಚ್ಚವನ್ನು ನಾನೇ ಬರಿಸುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಪುರಸಭೆ ಮುಖ್ಯ ಅಧಿಕಾರಿ ಮೀನಾಕ್ಷಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ, ಬಿ. ಆರ್.ಸಿ.ಶಶಿಕಲಾ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯ ಗೌಡ, ಪ್ರಾಥಮಿಕ ಎಸ್ಸಿ ಎಸ್ಟಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ನಾಗರಾಜ್, ಎಸ್‌ಸಿ/ಎಸ್‌ಟಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಕಾರ್ಯದರ್ಶಿ ಬಿ.ನಾರಾಯಣಸ್ವಾಮಿ, ಕಾಂತರಾಜ್, ರಾಜಪ್ಪ, ಅಶ್ವಥ್,ಶ್ಯಾಮೂರ್ತಿ, ನಂಜುಂಡಪ್ಪ, ನಾಗೇಂದ್ರ, ವೆಂಕಟೇಶ್, ಸುಜಾತಾ, ನಾಗರಾಜ್ ಜಿ.ಟಿ. ರಾಮಚಂದ್ರಪ್ಪ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *