ಬೀದರ ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ಸೆ. 30 ರಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಬೀದರ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ಯ ಗಡಿ ಬೀದರ ಹಾಗೂ ಕಲ್ಯಾಣ ಕರ್ನಾಟಕ ರಚನಾತ್ಮಕ ಪ್ರಗತಿಯ ಕುರಿತು ಬೃಹತ್ ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿರುವ ಗೌತಮ ವಾಗರಾಜ, ಹಿರಿಯ ನ್ಯಾಯವಾದಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಶಕೀಲ ಐ.ಎಸ್. ಚಿಂತಕರು ಇವರು ಮಾತನಾಡಿ, ಸರ್ಕಾರ ಈ ಭಾಗಕ್ಕೆ 371(ಜೆ) ಜಾರಿ ಮಾಡಿದೆ, ಇದಕ್ಕೆ ಕಾರಣ ಸನ್ಮಾನ್ಯ ಶ್ರೀ ವೈಜಿನಾಥ ಪಾಟೀಲ ಅವರ ಹೋರಾಟವೇ ಕಾರಣ. ಅವರ ಹೋರಾಟದ ಫಲವೇ 371(ಜೆ) ಇದನ್ನೆಲ್ಲಾ ನಮ್ಮ ಭಾಗದ ಜನಪ್ರತಿನಿಧಿಯ ಇಚ್ಛಾ ಶಕ್ತಿ ನಾಯಕರುಗಳು ಸದುಪಯೋಗಪಡಿಸಿಕೊಂಡು, ಈ ಭಾಗದ ಸರ್ವೋತ್ತಮ ಅಭಿವೃದ್ಧಿಗೆ ನಾಂದಿ ಹಾಡಬೇಕಾಗಿದೆ ಎಂದು ನುಡಿದರು. ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಗೌತಮ ಪಾಟೀಲ ಜಿಲ್ಲಾ ಪಂಚಾಯತ್ ಸದಸ್ಯರು ಚಿಂಚೋಳಿ ಹಾಗೂ ಚಿಂತಕರು ಅವರು ಮಾತನಾಡುತ್ತಾ, ನಮ್ಮ ಭಾಗದ ಹೋರಾಟಗಾರರು ಈ ಭಾಗದ ನ್ಯೂನ್ಯತೆಗಳನ್ನು ಸರಿಪಡಿಸಲು ಶ್ರಮಿಸಬೇಕು, ಸಂವಿಧಾನದ 371(ಜೆ) ಕಲಂ ಜಾರಿ ಇದೆ, ಅದನ್ನು ಅನುಷ್ಠಾನಕ್ಕೆ ಜಾಗೃತರಾಗಿ ಹೋರಾಡಬೇಕಾಗಿದೆ ಎಂದು ನುಡಿದರು.
ಅತಿಥಿಗಳಾಗಿ ಆಗಮಿಸಿದ ಸೈಬಣ್ಣಾ ಜಮಾದಾರ ಸಂಸ್ಥಾಪಕ ರಾಜ್ಯಾಧ್ಯಕ್ಷರು ಅಹಿಂದ್ ಚಿಂತಕರ ವೇದಿಕೆ ಇವರು ಮಾತನಾಡುತ್ತಾ, ಕಲ್ಯಾಣ ಕರ್ನಾಟಕ ಪ್ರಾಧಿಕಾರಕ್ಕೆ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಈ ಭಾಗದ ಅಭಿವೃದ್ಧಿಗೆ ನೀಡುತ್ತಿದೆ. ಇದನ್ನು ಎಲ್ಲರು ಕೂಡ ಸದುಪಯೋಗ ಪಡಿಸಿಕೊಳ್ಳಬೇಕು, ಇಂತಹ ವಿಚಾರ ಸಂಕಿರಣದಲ್ಲಿ ಜಿಲ್ಲೆಯ ಎಲ್ಲಾ ಯುವಕರು ಪಾಲ್ಗೊಂಡು, ವಿಚಾರ ಸಂಕಿರಣದ ವೇದಿಕೆ ಸದುಪಯೋಗ ಪಡಿಸಿಕೊಂಡು, ಲಾಭ ಪಡೆದುಕೊಳ್ಳಬೇಕೆಂದು ನುಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ಸ್ವಾಮಿದಾಸ ಕೆಂಪೆನೊರ್ ವಹಿಸಿದರು, ಅತಿಥಿಗಳಾಗಿ ಸಂಜಯ ಜಾಗಿರದಾರ ಮಾಜಿ ಅಧ್ಯಕ್ಷರು, ಬೀದರ ನಗರಾಭಿವೃದ್ಧಿ ಪ್ರಾಧಿಕಾರ ಬೀದರ, ಸಂಜುಕುಮಾರ ಟೊಳ್ಳೆ, ಧನರಾಜ ಕರಕನಳ್ಳಿ, ಮೋಜಸ್ ನಿರ್ಣಾಕರ್, ಪೀಟರ್ ಶ್ರೀಮಂಡಲ, ಅವಿನಾಶ ಬೂದರಕರ್, ದಿಲಿಪಕುಮಾರ ವರ್ಮಾ, ಸೇನೆಯ ಸಂಸ್ಥಾಪಕ ಉಪಾಧ್ಯಕ್ಷರಾದ ಸಂಗಮೇಶ ಹಡಪದ, ಮಸ್ತಾನ ಮುಲ್ಲಾ, ಸುರೇಶ ಎನ್. ದೊಡ್ಡಿ, ಜಿಲ್ಲಾಧ್ಯಕ್ಷರಾದ ನವೀನ್ ಅಲ್ಲಾಪುರೆ,ಜಿಲ್ಲಾ ಉಪಾಧ್ಯಕ್ಷರಾದ ಸುಧಾಕರ ಢೋಣೆ, ಶಿವರಾಜ ಹಮಿಲಾಪೂರಕರ್, ಸಂಜುಕುಮಾರ ಶ್ರೀಮಂಡಲ, ಅಂಬಾದಾಸ ಬೇಲೂರ್, ರಿಚರ್ಡ್ ಹಮಿಲಪೂರ, ಅನೀಲಕುಮಾರ ಸಿಂಧೆ, ಸಂಜುಕುಮಾರ ಗೋರನಳ್ಳಿ, ಕಮಲಹಸನ ಬಾವಿದೊಡ್ಡಿ, ಡಾ. ಜೇಮ್ಸ್, ಸುಶೀಲ ಕೆಂಪೆನೊರ್ ಹಾಗೂ ಸೇನೆಯ ನೂರಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ಸುನೀತಾ ಕಣಜೆ ಹಾಗೂ ಘಾಳೆಪ್ಪಾ ಅಂತಿ ನೆರವೇರಿಸಿಕೊಟ್ಟರು.

