ಬೀದರ ತಾಲೂಕಿನ ಹೋನ್ನಿಕೇರಿ ಸಿದ್ದೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಪಂಚಾಯತ ಬೀದರ, ಸ್ವಚ್ಛ ಭಾರತ ಮಿಷನ್, ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ಮತ್ತು ಗುರುನಾನಕ ಪದವಿ ಮಹಾವಿದ್ಯಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಸ್ಚಚ್ಛತಾ ಹೀ ಸೇವಾ ಶ್ರಮದಾನ ಆಯೋಜಿಸಲಾಯಿತು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಶಿಲ್ಪಾ ಎಂ ಅವರು ಮಾತನಾಡಿ ಸ್ವಚ್ಛತೆ ಕಾಪಾಡುವುದು ನಮ್ಮ ನಮ್ಮ ಮನೆಯಿಂದ ಶುರುವಾಗಬೇಕು ಸಾರ್ವಜನಿಕ ಸ್ಥಳಗಳು ಬರಿ ಸರ್ಕಾರದ ಆಸ್ತೀಯೆಂದು ಜನರು ಭಾವಿಸದೆ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು ನಮ್ಮೆಲರ ಕರ್ತವ್ಯವಾಗಿದೆ ಎಂದು ನುಡಿದರು.
ಪ್ರಸುತ್ತ ಎಲ್ಲ ಸೇವೆಗಳಿಗಿಂತ ಸ್ವಚ್ಛಾತ ಹೀ ಸೇವಾ ಅತ್ಯಂತ ಅನಿವಾರ್ಯ ಮತ್ತು ಪ್ರಸುತ್ತತೆಯಿದೆ ಎಂದು ನುಡಿದು ಶಾಂತೀಶ್ವರಿ ಸಂಸ್ಥೆಯ ಸ್ಚಚ್ಛ ಬೀದರನ ಅಭೀಯಾನ ಮಾದರಿಯಾಗಿದೆ ಎಂದು ತಿಳಿಸಿದರು. ನಂತರ ಸ್ವಚ್ಛತೆಯ ಪ್ರತಿಜ್ಞೆ ವಿಧಿ ಎಲ್ಲರಿಗೂ ಭೋದಿಸಿ ಸೂಮಾರು ಎರಡು ಗಂಟೆಗಳ ಕಾಲ ಮಂದಿರದ ಆವರಣದಲ್ಲಿ ಸ್ವತಃ ಅವರು ಶ್ರಮದಾನ ಮಾಡಿದರು ಅವರೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಶಾಂತೀಶ್ವರಿ ಸಂಸ್ಥೆಯ ಸಿಬ್ಬಂದಿ ವರ್ಗ, ಕಾಲೇಜ ವಿದ್ಯಾರ್ಥಿಗಳು, ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶ ಸಮಿತಿ ಸದಸ್ಯರು ಶ್ರಮದಾನಕ್ಕೆ ಸಿ.ಇ.ಓ ಅವರಿಗೆ ಸಾಥ ನೀಡಿದರು.
ರಾಜ್ಯ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ ಹೊನ್ನಿಕೇರಿ ಸಿದ್ದೇಶ್ವರ ದೇವಲಾಯದಲ್ಲಿ ಸ್ವಚ್ಛತಾ ಹೀ ಸೇವಾ ಶ್ರಮದಾನದ ಮೂಲಕ ದೇವಸ್ಥಾನದ ಆವರಣ, ಗೋಶಾಲೆ ಮತ್ತು ನೀರಿನ ಕೊಳವನ್ನು ಸ್ಚಚ್ಛಗೊಳಿವುವ ಮೂಲಕ ಸ್ವಚ್ಛತಾ ಹೀ ಸೇವಾ ಸಾಕಾರಗೊಳಿಸಲಾಗಿದೆ ಎಂದು ತಿಳಿಸಿದರು. ಸ್ವಚ್ಛತಾ ಹೀ ಸೇವಾ ಅಭಿಯಾನದ ಜಿಲ್ಲಾ ನೋಡಲ್ ಅಧಿಕಾರಿ ರಾಜಕುಮಾರ ಪಾಟೀಲ ಅವರು ಸ್ವಚ್ಛ ಬೀದರ ಅಭಿಯಾನ, ಸ್ವಚ್ಛತಾ ಹೀ ಸೇವಾದ ಬಗ್ಗೆ ಮಾಹಿತಿ ನೀಡಿದರು.
ಶ್ರಮದಾನದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿದೇರ್ಶಕರಾದ ಜಗನಾಥ ಮೂರ್ತಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಗರಾಜ ಮಠ, ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೊರ್ಮ, ಜಿಲ್ಲಾ ಪಂಚಾಯತ ಸಹಾಯಕ ಯೋಜನಾಧಿಕಾರಿ ಶಿವಕುಮಾರ ಎಲ್ಲಾಳ, ತಾಲ್ಲೂಕ ಪಂಚಾಯತ ಸಹಾಯಕ ನಿರ್ದೇಶಕರಾದ ಲಕ್ಷಿö್ಮÃ ಬಿರಾದರ, ಜಿಲ್ಲಾ ಪಂಚಾಯತ ಲೆಕ್ಕ ಸಹಾಯಕ ಪ್ರವೀಣ ಸ್ವಾಮಿ, ಆರೋಗ್ಯ ಇಲಾಖೆಯ ಜಿಲ್ಲಾ ಸಯೋಜಕರಾದ ಶಿವಶಂಕರ ಬೆಮಳಗಿ, ಗುರುನಾನಕ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್ ಅಧಿಕಾರಿಗಳಾದ ಜಿ.ಎನ್ ಮಠಪತಿ, ಕಪಲಾಪೂರ ಗ್ರಾಮ ಪಂಚಾಯತ ಅಧ್ಯಕ್ಷರಾದ ಪರಶುರಾಮ ಉಪಾಧ್ಯಕ್ಷರಾದ ಸಂಜುಕುಮಾರ ಮಾಶಟ್ಟಿ, ಪಂಚಾಯತ ಅಭೀವೃದ್ಧಿ ಅಧಿಕಾರಿ ಶಶಿಕಪೂರ, ಹೊನ್ನಿಕೇರಿ ಸಿದ್ದೇಶ್ವರ ದೇವಾಲಯದ ಕಾರ್ಯನಿರ್ವಹಕ ಅಧಿಕಾರಿ ಅನಂತ ಕುಲಕರ್ಣಿ, ಅರ್ಚಕ ಶಿವಾನಂದ ಸ್ವಾಮಿ ಬಾಳೂರ,ಪ್ರಮುಖರಾದ ಪ್ರಕಾಶ ಪಾಟೀಲ ಮಳಚಾಪೂರ, ಸಂಜುಕುಮಾರ ಸ್ವಾಮಿ, ರೇವಣಯ್ಯ ಸ್ವಾಮಿ, ಶ್ರಿಕಾಂತ ಸ್ವಾಮಿ ಉಪಸ್ಥಿತರಿದ್ದರು.
ಶ್ರಮದಾನದ ನಂತರ ಹೊನ್ನಿಕೇರಿ ಗ್ರಾಮದ ಓಣೆಗಳಲ್ಲಿ ಜಾಥ ಮೂಲಕ ಸ್ವಚ್ಛಾ ಹೀ ಸೇವಾ ಕುರಿತು ಗ್ರಾಮಸ್ಥರಲ್ಲಿ ಜಾಗೃಥಿ ಮೂಡಿಸಲಾಯಿತು. ವಿವಿಧ ಗ್ರಾಮ ಪಂಚಾತಯ ಸದಸ್ಯರು, ಕಾಲೇಜ ವಿಧ್ಯಾರ್ಥಿಗಳು ಆಶಾ ಅಂಗವಾಡಿ ಕಾರ್ಯಕರ್ತರು, ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯ ಪದಾದಿಕಾರಿಗಳು, ಸಿಬ್ಬಂದಿ ವರ್ಗ, ಎನ್.ಆರ್.ಎಲ್.ಎಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಸಚ್ಚಿದಾನಂದ ಬಿರಾದರ ಸ್ವಾಗತಿಸಿದರು ವೀರಶೇಟ್ಟಿ ಕಾಮಣ್ಣಾ ನಿರೂಪಿಸಿದರು ನಾಗಯ್ಯ ಸ್ವಾಮಿ ವಂದಿಸಿದರು.
