ಬೆಂಗಳೂರು ದಕ್ಷಿಣ ಸುದ್ದಿ .
ಜಿಗಣಿ ಪುರಸಭೆ ವತಿಯಿಂದ ಪೌರಕಾರ್ಮಿಕರ ದಿನಾಚರಣೆ
ಬೆಂಗಳೂರು ನಗರ ಜಿಲ್ಲೆ ದಕ್ಷಿಣ ತಾಲ್ಲೂಕು ಜಿಗಣಿ ಜಿಗಣಿ ಪುರಸಭೆ ವತಿಯಿಂದ ಇಂಡ್ಲವಾಡಿ ಕ್ರಾಸ್ ಬಗ್ಗನದೊಡ್ಡಿ ಸುಗ್ಗಿ ರೆಸಾರ್ಟ್ ನಲ್ಲಿ ಪೌರ ಕಾರ್ಮಿಕರ ದಿನಾಚರಣೆ ನಡೆಯಿತು
ಕಾರ್ಯಕ್ರಮದ ಉದ್ಘಾಟನೆಯನ್ನು ಯೋಜನಾ ನಿರ್ದೇಶಕರಾದ ರಂಗಸ್ವಾಮಿ ಮುಖ್ಯ ಅಧಿಕಾರಿ ರಾಜೇಶ್ ಪರಿಸರ ಅಭಿಯಂತರರಾದ ರಾಜಶ್ರೀ ನೆರವೇರಿಸಿದರು ಹಾಗೂ ಪೌರಕಾರ್ಮಿಕರಿಗೆ ಕ್ರೀಡಾಕೂಟವನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ನೀಡಿ ಅಭಿನಂದನೆ ಸಲ್ಲಿಸಿ ಸನ್ಮಾನ ಮಾಡಲಾಯಿತು ಹಾಗೂ ಪೌರಕಾರ್ಮಿಕರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು ಪೌರಕಾರ್ಮಿಕರಿಗೆ ಮೂಲಭೂತ ಸೌಕರ್ಯ ಹಾಗೂ ಆರೋಗ್ಯ ವಿಮೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಪಾರದರ್ಶಕವಾಗಿ ನೀಡಲಾಗುವುದು ಎಂದು ಯೋಜನಾ ನಿರ್ದೇಶಕರಾದ ರಂಗಸ್ವಾಮಿ ಮಾಧ್ಯಮಕ್ಕೆ ತಿಳಿಸಿದರು
ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯರುಗಳಾದ ಸವಿತಾ ಮುರಳಿ ಜಿಗಣಿ ವಿನೋದ್ ಫ್ಯಾನ್ಸಿ ರಮೇಶ್ ಆನಂದ್ ಗೌಡ ಮಧು ಮಂಜುನಾಥ್ ಪ್ರಹ್ಲಾದ್ ರೆಡ್ಡಿ ವೆಂಕಟೇಶ್ ಮಮತಾ ಕೃಷ್ಣ ರೆಡ್ಡಿ ಚಂದ್ರಶೇಖರ್ . ಪುರಸಭೆಯ ಇಂಜಿನಿಯರ್ ರಾದ ಚಂದ್ರಶೇಖರ್ ಬಿ ಎಲ್. ಆರೋಗ್ಯ ನಿರೀಕ್ಷಕರದ ವಿರೂಪಾಕ್ಷ ಕಂದಾಧಿಕಾರಿ ಮುನಿರಾಜು ಎಂ. ಹಾಗೂ ಪುರಸಭೆಯ ಆಡಳಿತ ವರ್ಗ ಅಧಿಕಾರಿಗಳು ಸಿಬ್ಬಂದಿಗಳು ಪೌರ ಕಾರ್ಮಿಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *