ಇಂಟರ್ನ್ಯಾಷನಲ್ ಬುಧ್ದಿಷ್ಟ್ ಮಿಷನ್ ಟ್ರಸ್ಟ್ ಜಾಲಂದರ್ ಪಂಜಾಬ್ ವತಿಯಿಂದ ದೇಶದ 22 ಸ್ಥಳದಲ್ಲಿ ಬೌದ್ಧ ಸಂಸ್ಕಾರದ ಶಿಕ್ಷಣ ಸಂಸ್ಥೆ ಪ್ರಾರಂಭಿಸುತ್ತಿದ್ದು ಅದರ ಒಂದು ಶಾಖೆಯು ಬೀದರ ತಾಲೂಕಿನ ಬಸಂತಪೂರನಲ್ಲಿ ಪ್ರಾರಂಭ ಮಾಡಲಾಗುತ್ತಿದ್ದೆ
ಈ ಮಹತ್ವದ ಕಾರ್ಯಕ್ಕೆ ಇಂಟರ್ನ್ಯಾಷನಲ್ ಬುಧ್ದಿಷ್ಟ್ ಮಿಷನ್ ಅಧಿನದ ಬೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರ್ ಶಿಕ್ಷಣ ಸಂಸ್ಥೆಗೆ ಬಸಂತಪೂರ ಗ್ರಾಮದ ಉಪಾಸಕರಾದ ತಿಪ್ಪಣ್ಣಾ ಬಸಪ್ಪಾ ಗೊಂಡೆ,ಮಲ್ಲಪ್ಪ ಬಸಪ್ಪಾ ಗೊಂಡೆ ಹಾಗೂ ಉಪಾಸಕಿ ಸಂಗಮ್ಮಾ ತಿಪ್ಪಣ್ಣಾ ಗೊಂಡೆ ಬಸಂತಪೂರ ಪರಿವಾರದವರು ಸರ್ವೆ ನಂಬರ್ 17 ಮಿರ್ಜಾಪೂರ (ಕೆ) ನಲ್ಲಿ 2 ಎಕರೆ ಭೂಮಿ ಧಾನ ಮಾಡಿದಾರೆ
ಅದರ ಪ್ರಯುಕ್ತ ದಿನಾಂಕ 6-10-2023 ರಂದು ಮುಂಜಾನೆ 10 ಗಂಟೆಗೆ ಮಿರ್ಜಾಪೂರ- ಬಸಂತಪೂರ ಮುಖ್ಯ ರಸ್ತೆ ಯಲ್ಲಿರುವ ಜಮೀನಿನಲ್ಲಿ ಪೂಜ್ಯ ಭಂತೆ ಧಮ್ಮ ದೀಪ ರವರ ಸಾನಿಧ್ಯದಲ್ಲಿ ಭೂಮಿ ಪೂಜ್ಯ ಜರುಗಲಿದೆ
ಈ ಶುಭ ಸಮಾರಂಭಕ್ಕೆ ಬೀದರ ಜಿಲ್ಲೆಯ ಬೌದ್ಧ ಉಪಾಸಕ ಉಪಾಸಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಬೋಧಿಸತ್ವ ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ವತಿಯಿಂದ ಬೀದರ ಶಾಖೆಯ ಸಂಚಾಲಕ ಡಾ.ನಿಲಕಂಠ ಶಿಂದೆ ಕೋರಿದಾರೆ
