ಬೆಂಗಳೂರಿನ ಎಸ್.ಎ.ಪಿ ಲ್ಯಾಬ್ ಕಂಪನಿಯ ಉದ್ಯೊಗಿಗಳು ಸಾಮಾಜಿಕ ಹೊಣೆಗಾರಿಕೆ(ಸಿ.ಎಸ್.ಆರ್) ಕಾರ್ಯಕ್ರಮದಡಿ ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಹಾಗೂ ನಲ್ಲೊಜನಹಳ್ಳಿಯ ಸರ್ಕಾರಿ ಶಾಲಾ ಮಕ್ಕಳಿಗೆ ದೇಣಿಗೆ ನೀಡಿದ ಬ್ಯಾಗ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆಯೋಜಕರಾದ ವಿಜಯ ಬಾವರೆಡ್ಡಿ ರವರು ಮಾತನಾಡಿ ಮುಂದಿನ ದಿನಗಳಲ್ಲಿ ಸಿ.ಎಸ್.ಆರ್ ಯೋಜನೆ ಅಡಿಯಲ್ಲಿ ಈ ಭಾಗದ ಶಾಲೆಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಶಾಲಾ ಮಕ್ಕಳು ದಾನಿಗಳಿಂದ ಪಡೆದಂತಹ ಶಾಲಾ ಪರಿಕರಗಳನ್ನು ಸದುಪಯೋಗ ಪಡಿಸಿಕೊಂಡು ಅವರಂತೆ ಉನ್ನತ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಪಡೆಯವ ಗುರಿಯೊಂದಿಗೆ ಶ್ರಮಿಸಬೇಕೆಂದು ಜೀವಿಕ ಮುನಿಯಪ್ಪ ರವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಪ್ರಭಾವತಮ್ಮ ಅನಿತಾ, ಇನಾಯಿತುಲ್ಲಾ , ರೇಷ್ಮಾ
ಹಾಗೂ ಮುಖಂಡರಾದ ಶಿವಕುಮಾರ್ ಬಿ, ಬಚ್ಚರೆಡ್ಡಿ , ಎಸ್.ಡಿ.ಎಂ.ಸಿ ಅಧ್ಯಕ್ಷ ನಾರಾಯಣಸ್ವಾಮಿ,
ವೆಂಕಟರಾಮಪ್ಪ ಉಪಸ್ಥಿತರಿದ್ದರು.
