ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯದಲ್ಲಿ ‘ಶುದ್ಧ ಇಂಧನ ಮೂಲಗಳ ಉನ್ನತ ಸಂಶೋಧನಾ ಕೇಂದ್ರ’ ಉದ್ಘಾಟನೆ :
ಯಲಹಂಕ : ಕಚ್ಚಾ ತೈಲ ಆಮದು ತಪ್ಪಿಸಿ ದೇಶವನ್ನು ಸುಸ್ಥಿರ ಪ್ರಗತಿಯ ಹಾದಿಯಲ್ಲಿ ಸಾಗುವಂತೆ ಮಾಡುವ ನಿಟ್ಟಿನಲ್ಲಿ ವಿಜ್ಞಾನಿಗಳು, ಇಂಜಿನಿಯರ್ ಗಳು ಗ್ರೀನ್ ಹೈಡ್ರೊಜನ್ ಉತ್ಪಾಧನೆ ಕುರಿತು ಹೆಚ್ಚಿನ ಸಂಶೋಧನೆತಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲಾಟ್ ಕರೆ ನೀಡಿದರು.
ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ದಲ್ಲಿ ಭಾನುವಾರ ಆಯೋಜಿಸಿದ್ದ ‘ನ್ಯಾಷನಲ್ ಹೈಡ್ರೋಜನ್ ಅಂಡ್ ಪ್ಯುಯಲ್ ಸೆಲ್ ದಿನಾಚರಣೆ’ ಕಾರ್ಯಕ್ರಮ ಮತ್ತು ‘ಶುದ್ಧ ಇಂದನ ಮೂಲಗಳ ಕುರಿತ ಉನ್ನತ ಸಂಶೋಧನಾ ಕೇಂದ್ರ’ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರೀನ್ ಹೈಡ್ರೋಜನ್ ನ ಹೆಚ್ಚಿನ ಬಳಕೆ ಯಿಂದ ಇಂಗಾಲದ ಹೊರಸೂಸುವಿಕೆ ಯಿಂದ ನಮ್ಮ ಪರಿಸರದ ಮೇಲೆ ಉಂಟಾಗುತ್ತಿ ರುವ ದುಷ್ಪರಿಣಾಮ ಮತ್ತು ಹಾನಿಯನ್ನು ತಪ್ಪಿಸುವುದರ ಜತೆಗೆ ದೇಶವನ್ನು ಕಚ್ಚಾತೈಲ ಆಮದಿನ ಆರ್ಥಿಕ ಹೊರೆಯಿಂದ ಕಾಪಾಡ ಬಹುದಾಗಿದೆ. ಈ ಮಹತ್ವದ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ‘ನ್ಯಾಷನಲ್ ಹೈಡ್ರೋಜನ್ ಮಿಶನ್’ ಸ್ಥಾಪಿಸಿ ಗ್ರೀನ್ ಹೈಡ್ರೋಜನ್ ಉತ್ಪಾದನೆ ಕುರಿತ ಅಗತ್ಯ ಸಂಶೋಧನೆಗೆ ಸಹಕರಿಸಿದ್ದಾರೆ. ನಮ್ಮ ಯುವ ಇಂಜಿನಿಯರ್ ಗಳು, ವಿಜ್ಞಾನಿಗಳು ಗ್ರೀನ್ ಹೈಡ್ರೋಜನ್ ಉತ್ಪಾಧನೆಗೆ ತಗಲುವ ಹೆಚ್ಚಿನ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕಿದೆ. ಗ್ರೀನ್ ಹೈಡ್ರೋಜನ್ ಉತ್ಪಾಧನೆಗೆ ತಗಲುವ ಹೆಚ್ಚಿನ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯವು ಕೈಗೊಂಡಿರುವ ಮಹತ್ವದ ಸಂಶೋಧನೆ ನಿಜಕ್ಕೂ ಪ್ರಶಂಸಾರ್ಹವಾದುದು ಎಂದರು.
ಕಾರ್ಯಕ್ರಮದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಹೆಚ್.ಸಿ.ನಾಗರಾಜ್, ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್.ಠಾಕೂರ್, ಉಡ್ಜನ್ ಸಂಸ್ಥೆಯ ಡಾ.ಹೆಚ್.ಪಿ.ನಾಯಕ್, ನಿಟ್ಟೆ ಮೀನಾಕ್ಷಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ರೋಹಿತ್ ಪೂಂಜಾ, ಪ್ರಾಧ್ಯಾಪಕರಾದ ಪ್ರೊ.ಕೆ.ಬಿ.ರಾವ್ ಸೇರಿದಂತೆ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪ್ರಾದ್ಯಾಪಕರಿದ್ದರು.
ಬಾಕ್ಸ್ :
ಸಮುದ್ರದ ನೀರನ್ನು ವೈಜ್ಞಾನಿಕವಾಗಿ ವಿಭಜಿಸಿ ಗ್ರೀನ್ ಹೈಡ್ರೋಜನ್ ಉತ್ಪಾಧನೆ :
ಸಮುದ್ರದ ನೀರನ್ನು ವೈಜ್ಞಾನಿಕವಾಗಿ ವಿಭಜಿಸಿ ಗ್ರೀನ್ ಹೈಡ್ರೋಜನ್ ಉತ್ಪಾಧನೆ ಮಾಡಬಹುದೆಂಬ ಮಹತ್ವದ ಸಂಶೋಧನೆಯನ್ನು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಇಂಜಿನಿಯರ್ ಗಳು ಕೈಗೊಂಡಿದ್ದು, ಈ ಸಂಶೋಧನೆಯನ್ನು ಇನ್ನಷ್ಟು ಸುಧಾರಿಸಲು ಪ್ರಯತ್ನ ಮುಂದುವರಿಸಿದ್ದಾರೆ. ಭೂಮಿಯಲ್ಲಿದ್ದ ಸಿಹಿ ನೀರಿನ ಪ್ರಮಾಣದ ಬಹುತೇಕ ಭಾಗ ಸಮುದ್ರಕ್ಕೆ ಸೇರಿದೆ. ಇನ್ನು ಭೂಮಿಯ ಮೇಲೆ ಉಳಿದಿರುವ ಕೃಷಿ ಮತ್ತು ಕುಡಿಯುವ ನೀರಿನ ಉದ್ದೇಶಕ್ಕೆ ಲಭ್ಯವಿರುವ ಸಿಹಿ ನೀರಿನ ಪ್ರಮಾಣ ಅತ್ಯಲ್ಪವಿದ್ದು, ಸಮುದ್ರದ ನೀರನ್ನು ವೈಜ್ಞಾನಿಕವಾಗಿ ವಿಭಜಿಸಿ ಗ್ರೀನ್ ಹೈಡ್ರೋಜನ್ ಉತ್ಪಾಧನೆ ಮಾಡುವುದರಿಂದ ಭೂಮಿಯಲ್ಲಿನ ಸಿಹಿನೀರನ್ನು ಕಾಪಾಡುವುದರ ಜತೆಗೆ ಯಥೇಚ್ಛವಾಗಿ ಲಭ್ಯವಿರುವ ಸಮುದ್ರದ ನೀರನ್ನು ಗ್ರೀನ್ ಹೈಡ್ರೋಜನ್ ಉತ್ಪಾಧನೆಗೆ ಬಳಸಿಕೊಳ್ಳಬಹುದಾಗಿದೆ.
