ಯಲಹಂಕ : ಕೇಂದ್ರ ಸರ್ಕಾರದ ನಾರಿಶಕ್ತಿ, ಬೇಟಿ ಬಚಾವೋ ಬೇಟಿ ಪಡಾವೋ, ಮಹಿಳಾ ಸಬಲೀಕರಣ ಕುರಿತು ಜಾಗೃತಿ ಮೂಡಿಸಲು ಕನ್ಯಾಕುಮಾರಿಯಿಂದ ಗುಜರಾತ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಏಕ್ತಾ ಪ್ರತಿಮೆವರೆಗೆ ಬೈಕ್ ಯಾತ್ರೆ ಹೊರಟಿರುವ ಸಿಆರ್ ಪಿಎಫ್ ಮಹಿಳಾ ಪೋಲೀಸ್ ಯಾತ್ರಿಗಳ ತಂಡಕ್ಕೆ ಯಲಹಂಕದ ಸಿಆರ್ ಪಿಎಫ್ ಕೇಂದ್ರದಲ್ಲಿ ಶನಿವಾರ ಗೌರವಾದರಗಳೊಂದಿಗೆ ಶುಭ ಹಾರೈಸಿ ಬೀಳ್ಕೊಡಲಾಯಿತು.

ಇದೇ ವೇಳೆ ಬೆಂಗಳೂರು ನಗರ ಪೋಲಿಸ್ ಆಯುಕ್ತ ಭಿ.ದಯಾನಂದ, ಸಿಆರ್ ಪಿಎಫ್ ಕರ್ನಾಟಕ ಕೇರಳ ವಿಭಾಗದ ಐಜಿಪಿ ಟಿ.ವಿಕ್ರಮ್, ಬೆಂಗಳೂರು ನಗರ ಸಿಆರ್ ಪಿಎಫ್ ಕೇಂದ್ರದ ಡಿಐಜಿ ಇಮಾನ್ಷು ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *