ಅಧ್ಯಕ್ಷ ಬಿ ಎಂ ನಾಗೇಶ್ ರಿಂದ
ವಿವಿಧ ಸವಲತ್ತುಗಳ ವಿತರಣೆ :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಆಯೋಜಿಸಿದ್ದ 2023-24ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಬಿ.ಎಂ.ನಾಗೇಶ್ ಅರ್ಹ ಫಲಾನುಭವಿಗಳಿಗೆ 94ಸಿಸಿ ಅಡಿಯಲ್ಲಿ ನೀಡಲಾಗುವ ಹಕ್ಕುಪತ್ರ, ಇ-ಖಾತೆ, ಪಿಂಚಣಿ ಆದೇಶಪತ್ರ, ಭಾಗ್ಯಲಕ್ಷ್ಮಿ ಬಾಂಡ್, ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಹಾಯ ಧನದ ಚೆಕ್ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಬಿ.ಆರ್.ಪ್ರವೀಣ್, ರಾಮಮೂರ್ತಿ, ತಿಮ್ಮಸಂದ್ರದ ರಮ್ಯ ವೇಣುಗೋಪಾಲ್, ಬಿ.ಎಸ್.ಮೋಹನ್ ಸಿದ್ಧರಾಜು, ಬಾಲರಾಜ್, ಬಿ.ವೈ.ಮಂಜುನಾಥ್, ಟಿ.ಎಸ್.ನವೀನ್ ಕುಮಾರ್, ಅಮರ್, ರಾಜಣ್ಣ, ಆನಂದ್, ಸವಿತಾ ಕೃಷ್ಣಮೂರ್ತಿ, ಪ್ರೇಮ ಚಂದ್ರಪ್ಪ, ಸುಮಿತ್ರ ರಾಜಣ್ಣ, ನಾಗರತ್ನ ಸುಬ್ರಮಣಿ, ಮಾಜಿ ಗ್ರಾ.ಪಂ‌.ಅಧ್ಯಕ್ಷರಾದ ಶಿವಣ್ಣ, ಮುನೇಗೌಡ, ರವೀಂದ್ರನಾಥ ಗೌಡ, ದೇವನಾಥಗೌಡ, ನರೇಂದ್ರ, ಬಿ.ಎಸ್.ನಂಜೇಮರಿಯಪ್ಪ, ಮುನಿಕೃಷ್ಣಪ್ಪ, ನಾಗರಾಜ್, ಪಿಡಿಓ ಕವಿತಾ, ಕಾರ್ಯದರ್ಶಿ ಸುಬ್ರಮಣಿ ಸೇರಿದಂತೆ ಸರ್ವಸದಸ್ಯರಿದ್ದರು.

Leave a Reply

Your email address will not be published. Required fields are marked *