
ಶಿಕ್ಷಕಿಯರು ಮಂಗಳಕರ ನವಮಾತೆ ಬಣ್ಣಗಳ ಸೀರೆ ಧರಿಸುವುದರ ಮೂಲಕ ಹಬ್ಬವನ್ನು ಪ್ರತಿನಿಧಿಸಿದರು. ಕಿತ್ತಲೆಯ ಬಣ್ಣವು ಸಮೃದ್ಧಿಯ ಸಂಕೇತವಾಗಿಯೂ, ಬಿಳಿ ಸಂತೋಷದ ಸಂಕೇತವಾಗಿ,ಕೆಂಪು ಕೀರ್ತಿಯ ಸಂಕೇತವಾಗಿ ,ನೀಲಿ ಏಕಾಗ್ರತೆ ಸಂಕೇತವಾಗಿ,ಹಳದಿ ಸಂತೋಷದ ಸಮೃದ್ಧಿಯ ಸಂಕೇತವಾಗಿ,ಹಸಿರು ಶ್ರೇಯಸ್ಸು ಸಂಕೇತವಾಗಿ,ಬೂದು ವಿಶಾಲತೆ ಸಂಕೇತವಾಗಿ,ನೆರಳೆಶಾಂತಿ ಸಂಕೇತವಾಗಿ,ನವಿಲು ಹಸಿರು ಅಭಿಲಾಷೆ
ಸಂಕೇತವಾಗಿದೆ.ಸ್ತ್ರೀ (ಮಹಿಳೆ ) ಶಿಕ್ಷಕಿಯರು ಸವ೯ಶ್ರೇಷ್ಠ ಕಾಯ೯ ಸಾಧನ ನಿಮಾ೯ಪಕರು ಇವರು ಶಾಂತಿ ಪ್ರೀತಿ ತ್ಯಾಗದ ಮೂರ್ತಿಗಳಾಗಿದ್ದಾರೆ. ಶಿಕ್ಷಕಿಯರಾಗಿ ಮಕ್ಕಳಲ್ಲಿ ಜ್ಞಾನದ ದೀಪ ಬೆಳಗುವಲ್ಲಿ ಮಹಿಳೆಯರ ಸಾಧನೆ ಅಪಾರ ಅರಿತ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ಅವರು ಶಿಕ್ಷಕಿಯರಿಗೆ ಅಭಿನಂದಿಸಿ ಶಿಕ್ಷಕಿಯರಿಗೆ ದಸರಾ ಹಬ್ಬದ ಉಡುಗೊರೆ ಕೊಡುವುದರ ಮೂಲಕ ಕೀರ್ತಿಗೆ ಪಾತ್ರರಾದರು.