ದಿನಾಂಕ 26-10- 2023ರ ಗುರುವಾರ ದಂದು ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ NSS ಘಟಕವು ವಾರ್ಷಿಕ ಶಿಬಿರದ ಪೂರ್ವಭಾವಿ ಚಟುವಟಿಕೆ ಯತರಬೇತಿಯನ್ನು ಆಯೋಜಿಸಲಾಗಿತ್ತು.12-00 ಗಂಟೆಗೆ ಎನ್ಎಸ್ಎಸ್ ಸ್ವಯಂಸೇವಕರಿಗೆ ವಾರ್ಷಿಕ ಶಿಬಿರದ ಪೂರ್ವಭಾವಿ ಚಟುವಟಿಕೆಯಾಗಿ ತರಬೇತಿ ನೀಡಲಾಯ್ತು. ಹಿರಿಯ ವಿದ್ಯಾರ್ಥಿಗಳು ಹಾಗೂ ಅನುಭವಸ್ಥ ಸ್ವಯಂ ಸೇವಕರು ವಿದ್ಯಾರ್ಥಿಗಳಿಗೆ NSS ಗೀತೆ ಶಿಬಿರದ ಶಿಸ್ತು-ಸೇವಾಮನೋಭಾವವನ್ನು ತಿಳಿಸಿಕೊಟ್ಟರು. ಶ್ರೀ ವನಕಲ್ಲುಮಲ್ಲೇಶ್ವರ ಮಠದ ಅವರಣದಲ್ಲಿ ಕೈಗೊಳ್ಳಬೇಕಾದ ಸೇವಾ ಕಾರ್ಯಗಳನ್ನು ಪರಿಚಯ ಮಾಡಿಕೊಡಲಾಯ್ತು – ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳಿಮಠ ಅವರು ಸ್ವಯಂಸೇವಕರಿಗೆ ಶಿಬಿರದಲ್ಲಿ ಹೇಗಿರಬೇಕು? ಹಾಗೂ ಸ್ವಚ್ಛತೆ ಪರಿಸರ ಕಾಳಜಿ- ಆರೋಗ್ಯ ವನ್ಯಜೀವಿಗಳು ಪಶುಪಕ್ಷಿ ಸಂವೇದನೆ – ಚಾರಣದ ಬಗ್ಗೆ ಮನ ಮುಟ್ಟುವಂತೆ ಅರ್ಥ ಮಾಡಿಸಿದರು. NSS ಅಧಿಕಾರಿ ಗಿರೀಶ್ ವೈ ಅವರು ಉಪಸ್ಥಿತರಿದ್ದು ಶಿಬಿರದ ನಿಯಮಗಳನ್ನು ತಿಳಿಸಿದರು. ವಿದ್ಯಾರ್ಥಿಗಳಿಗೆ ಶಿಬಿರದಿಂದ ವ್ಯಕ್ತಿತ್ವ ವಿಕಸನವಾಗುವುದರ ಬಗ್ಗೆ ಅರಿವು ಮಾಡಿದ್ದರ ಫಲಿತ ಯಶಸ್ವಿಯಾಯ್ತು.

Leave a Reply

Your email address will not be published. Required fields are marked *