ಯಲಹಂಕ : ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಐಕ್ಯತಾ ದಿವಸದ ಪ್ರಯುಕ್ತ ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪರಿಷತ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಸಿಂಗನಾಯಕನಹಳ್ಳಿ ಗ್ರಾ. ಪಂ. ಸಹಯೋಗದೊಂದಿಗೆ ಆಯೋಜಿ ಸಿದ್ದ ಐಕ್ಯತೆಗಾಗಿ ಓಟ ಕಾರ್ಯಕ್ರಮ ದಲ್ಲಿ ನೂರಾರು ವಿದ್ಯಾರ್ಥಿಗಳು ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಬಳಿಯಿಂದ ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ವರೆಗೆ ಐಕ್ಯತಾ ಓಟ ನಡೆಸಿ ರಾಷ್ಟ್ರೀಯ ಐಕ್ಯತೆ, ಸಮಗ್ರತೆಯ ಸಂದೇಶ ಸಾರಿದರು.

ಮಂಗಳವಾರ ಬೆಳಿಗ್ಗೆ ಸಿಂಗನಾಯಕ ನಹಳ್ಳಿ ಗ್ರಾಮ ಪಂಚಾಯತಿ ಬಳಿ ನೆರೆದ ನೂರಾರು ವಿದ್ಯಾರ್ಥಿಗಳು ಮತ್ತು ಡಾ.ಎನ್ ಎಸ್ ಎ ಎಮ್ ಕಾಲೇಜಿನ ಸಿಬ್ಬಂದಿಗಳು ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮ ಉದ್ದೇಶಿಸಿ ಡಾ.ಎನ್ ಎಸ್ ಎ ಎಮ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಆರ್ ರಾಘವೇಂದ್ರ ಮಾತ ನಾಡಿ ‘ಭಾರತ ಹಳ್ಳಿಗಳ ದೇಶ, ಹಳ್ಳಿಗಳು ಬೆಳೆದರೆ ದೇಶ ಬೆಳೆಯು ತ್ತದೆ. ದೇಶದ ಪ್ರಗತಿಯ ನಿಟ್ಟಿನಲ್ಲಿ ಐಕ್ಯತೆ ಮತ್ತು ಸಮಗ್ರತೆ ಕಾಪಾಡು ವುದು ಇಂದಿನ ಅಗತ್ಯವಾಗಿದ್ದು, ಈ ದಿಸೆಯಲ್ಲಿ ಗ್ರಾ.ಪಂ.ಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಗ್ರಾ.ಪಂ.ಉಪಾಧ್ಯಕ್ಷ ಎಸ್ ಜಿ ಪ್ರಶಾಂತ್ ರೆಡ್ಡಿ ಮಾತನಾಡಿ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆ ಗ್ರಾಮಾ ಭಿವೃದ್ಧಿಯ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳು ತ್ತಿದ್ದು ಅಗತ್ಯ ಸಹಕಾರ ನೀಡುತ್ತಿ ರುವ ಬಗ್ಗೆ ಸಂತೋಷವಿದೆ. ಮುಂದಿನ ದಿನಗಳಲ್ಲಿ ಸಿಂಗನಾಯಕನಹಳ್ಳಿ ಗ್ರಾ.ಪಂ. ಮತ್ತು ಡಾ.ಎನ್ ಎಸ್ ಎ ಎಮ್ ಪ್ರಥಮ ದರ್ಜೆ ಕಾಲೇಜು ಸಹಯೋಗ ದೊಂದಿಗೆ ಹಳ್ಳಿಗಳ ಸ್ವಚ್ಛತೆ, ಸಂಚಾರ ನಿಯಮಗಳ ಪಾಲನೆ, ಪರಿಸರ ಜಾಗೃತಿ ಸೇರಿ ದಂತೆ ವಿವಿಧ ಸೇವಾ ಕಾರ್ಯಕ್ರಮ ಗಳನ್ನು ಏರ್ಪಡಿಸುವ ಮೂಲಕ ಗ್ರಾಮಾಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ದೇಶದ ಐಕ್ಯತೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು

ಇದೇ ಸಂದರ್ಭದಲ್ಲಿ ಸಿಂಗನಾಯಕನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಅಮರಾವತಮ್ಮ, ಉಪಾಧ್ಯಕ್ಷ ಎಸ್ ಜಿ ಪ್ರಶಾಂತ್ ರೆಡ್ಡಿ, ನಿಟ್ಟೆ ಸಮೂಹ  ಶಿಕ್ಷಣ ಸಂಸ್ಥೆಗಳ ಸಲಹೆ ಗಾರರಾದ ಡಾ.ಆರ್.ಶಾಂತಿ ಅಯ್ಯರ್, ವಿದ್ಯಾರ್ಥಿ ಪರಿಷತ್ ಸಂಯೋಜಕ ರಾದ ಪುನೀತ್ ಕುಮಾರ್ ಹೆಚ್ ಎಸ್, ಭಾಷಾ ವಿಭಾಗದ ಮುಖ್ಯಸ್ಥ ಡಾ.ಜೆ.ಬಿ.ಜನಾರ್ಧನ್,ದೈಹಿಕ ಶಿಕ್ಷಣ,ಎನ್ ಸಿಸಿ ವಿಭಾಗದ ಮುಖ್ಯಸ್ಥ ತಿರುಮಲೇಶ್, ಗ್ರಾ.ಪಂ.ಸದಸ್ಯ ರಾದ ಕೆ.ಬಾಬು, ಹರೀಶ್ ಎನ್, ಕಾರ್ಯ ದರ್ಶಿ ಕುಮಾರಸ್ವಾಮಿ ಪಿ ಸೇರಿದಂತೆ ಗ್ರಾ.ಪಂ‌.ಸಿಬ್ಬಂದಿ ಗಳಿದ್ದರು.

Leave a Reply

Your email address will not be published. Required fields are marked *