ಅಭಯ ಮಹಾಗಣಪತಿ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಪರಿಷೆ ಆಯೋಜನೆ :

ಯಲಹಂಕ : ಯಲಹಂಕ ನಗರದ ಕೆಂಪೇಗೌಡ ವಾರ್ಡ್ 1ರ ವ್ಯಾಪ್ತಿಯ ವೆಂಕಟಾಲದಲ್ಲಿ ನೆಲೆಸಿರುವ ಶ್ರೀ ಅಭಯ ಮಹಾಗಣಪತಿ ದೇವಾಲಯದ 10ನೇ ವಾರ್ಷಿಕೋತ್ಸವ ಸಮಾರಂಭವು ನವೆಂಬರ್ 3ರ ಶುಕ್ರವಾರದಂದು ನಡೆಯಲಿದ್ದು, ವಾರ್ಷಿಕೋತ್ಸವದ ಅಂಗವಾಗಿ ನ.4 ಮತ್ತು5 ಶನಿವಾರ ಮತ್ತು ಭಾನುವಾರ ಭಾರಿ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ.

ಬಿಬಿಎಂಪಿ ಮಾಜಿ ಸದಸ್ಯರು, ಯಲಹಂಕ ನಗರಸಭೆ ಮಾಜಿ ಅಧ್ಯಕ್ಷರಾದ ಕೆಂಪೇಗೌಡರ ನೇತೃತ್ವದಲ್ಲಿ, ಭಕ್ತಾದಿಗಳ ಸಹಯೋಗದೊಂದಿಗೆ ಕಳೆದ 9 ವರ್ಷಗಳಿಂದ ನಡೆಯುತ್ತಿರುವ ಈ ಕಡಲೆಕಾಯಿ ಪರಿಷೆ ಬೆಂಗಳೂರು ಉತ್ತರ ಭಾಗದಲ್ಲಿ ಬಸವನಗುಡಿಯ ಕಡಲೆಕಾಯಿ ಪರಿಷೆಯಷ್ಟೇ ಮಹತ್ವ ಪಡೆದುಕೊಂಡಿದೆ.

ಎರಡು ದಿನಗಳ ಕಾಲ ನಡೆಯುವ ವೆಂಕಟಾಲ ಕಡಲೆಕಾಯಿ ಪರಿಷೆ ವಿಭಿನ್ನ ರೀತಿಯ ಹಲವು ತಳಿಗಳ ಕಡಲೆಕಾಯಿಗಳ ಮಾರಾಟ, ಸಹಸ್ರಾರು ಜನರ ಪಾಲ್ಗೊಳ್ಳುವಿಕೆ, ವಿಭಿನ್ನ ರೀತಿಯ ಆಟೋಪಕರಣ ಗಳ ಅಸಂಖ್ಯಾತ ಮಳಿಗೆಗಳು, ಮಕ್ಕಳ ಮನರಂಜನೆಗೆ ಅಗತ್ಯವಿರುವ ಆಟೋಟಗಳ ಹಲವು ಯಂತ್ರೋಪಕರಣಗಳ ಅಳವಡಿಕೆ ಹೀಗ ಹಲವು ವಿಶೇಷತೆಗಳಿಂದಾಗಿ ವೆಂಕಟಾಚಲ ಕಡಲೆಕಾಯಿ ಪರಿಷೆ ಬೆಂಗಳೂರು ಉತ್ತರ ಭಾಗದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದು, ಯಲಹಂಕ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತದೆ.

ಕಡಲೆಕಾಯಿ ಪರಿಷೆ ಕುರಿತು ಪರಿಷೆಯ ಮುಖ್ಯ ಆಯೋಜಕರಾದ ಕೆಂಪೇಗೌಡ ರವರು ಮಾತನಾಡಿ ‘ಭಗತ್ಪ್ರೇರಣೆ ಮತ್ತು ಜನರ ಸಹಕಾರದಿಂದ ಕಳೆದ 9 ವರ್ಷಗಳಿಂದ ಕಡಲೆಕಾಯಿ ಪರಿಷೆ ಸಾಂಗೋಪಾಂಗವಾಗಿ ನೆರವೇರುತ್ತಾ ಬಂದಿದ್ದು, ಆರಂಭದಲ್ಲಿ ಸಾಮಾನ್ಯ ರೀತಿಯಲ್ಲಿ ನೆರವೇರಿದ ಪರಿಷೆ ವರ್ಷ ಕಳೆದಂತೆ ತನ್ನ ಮೆರಗನ್ನು ಹೆಚ್ಚಿಸಿಕೊಳ್ಳುತ್ತಾ ಬರುತ್ತಿದೆ ಈ ವರ್ಷ ಹಿಂದಿಗಿಂತಲೂ ಹೆಚ್ಚು ವಿಜೃಂಭಣೆಯಿಂದ ನೆರವೇರುತ್ತದೆ ಎಂಬ ವಿಶ್ವಾಸವಿದೆ. ಶಾಸಕರಾದ ಎಸ್ ಆರ್ ವಿಶ್ವನಾಥ್ ರವರು ಕಳೆದ 9 ವರ್ಷವೂ ಸಹ ಕಡಲೆಕಾಯಿ ಪರಿಷೆ ಯಲ್ಲಿ ಪಾಲ್ಗೊಳ್ಳುವ ಮೂಲಕ ಪರಿಷೆಗೆ ವಿಜೃಂಭಣೆಯ ಸ್ಪರ್ಷ ನೀಡಿದ್ದು, ಅಭಯ ಆಂಜನೇಯನ ಕೃಪೆಗೆ ಪಾತ್ರರಾಗಿದ್ದಾರೆ. ಈ ಬಾರಿಯೂ ಸಹ ಅವರು ತಮ್ಮ ಉಪಸ್ಥಿತಿಯ ಮೂಲಕ ಯಶಸ್ವಿಗೊಳಿಸಲಿದ್ದಾರೆ ಎಂದರು.

Leave a Reply

Your email address will not be published. Required fields are marked *