ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾಮದ ‘ಹಸಿರೇ ಉಸಿರು ಟ್ರಸ್ಟ್’ ಪರಿಸರವಾದಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಶ್ರೀನಿವಾಸಮೂರ್ತಿ ಮತ್ತು ಸಂಘದ ಪದಾಧಿಕಾರಿಗಳು ಗ್ರಾಮದ ಅಂಗನವಾಡಿ, ಉದ್ಯಾನವನ ಮತ್ತು ಟ್ರಸ್ಟ್ ನ ಕಚೇರಿ ಸೇರಿದಂತೆ 3 ಕಡೆಗಳಲ್ಲಿ ನೂತನ ಧ್ವಜ ಲೋಕಾರ್ಪಣೆ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವ ವನ್ನು ಶುಕ್ರವಾರ ವಿಶೇಷವಾಗಿ ಆಚರಿಸಿದರು. ಇದೇ ಸಂದರ್ಭದಲ್ಲಿ ಬೆಟ್ಟಹಲಸೂರು ಗ್ರಾ.ಪಂ.ಅಧ್ಯಕ್ಷ ಬಿ.ಎಂ‌.ನಾಗೇಶ್, ತಾ.ಪಂ.ಮಾಜಿ ಅಧ್ಯಕ್ಷ ಬಿ.ನಾಗರಾಜ್(ಬಾಬು), ಟ್ರಸ್ಟಿನ ಪದಾಧಿಕಾರಿಗಳಾದ ಎಸ್.ಚಂದ್ರಶೇಖರ್, ವೆಂಕಟೇಶ್, ಹೆಚ್ ಓ ನಂಜುಂಡಪ್ಪ, ರಾಜೇಂದ್ರ ಸಿಂಗ್ ಕೆ, ಲಕ್ಷ್ಮಿ ವಿಜಯ್, ಕೆ ಎಸ್ ರವಿ, ನಳಿನಾ, ಕೆ ಎಸ್ ಚಂದ್ರಕಲಾ, ಕುಮಾರವೇಲು, ಲಕ್ಷ್ಮಿ, ಮುಖಂಡರಾದ ಬಿ.ಎಸ್.ಅನಿಲ್ ಕುಮಾರ್, ಬಿ.ಆರ್.ಪ್ರವೀಣ್, ಕೆ ಮಮತಾ ಪ್ರಶಾಂತ್, ತುಳಸಮ್ಮ, ಬಾಲರಾಜ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *