


ಯಲಹಂಕ ಬಿಜೆಪಿ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ :
ಯಲಹಂಕ : ಕಾಡಿನಲ್ಲಿ ಹುಟ್ಟಿ, ಬೆಳದರೂ ಸಹ ಮಹರ್ಷಿ ವಾಲ್ಮೀಕಿ ಯವರು ಅಪರಿಮಿತ ಜ್ಞಾನ ಗಳಿಸಿ, ಮಹಾನ್ ಕೃತಿ ರಚಿಸಿ ದೇಶಕ್ಕೆ ಆದರ್ಶದ ನೀತಿಯನ್ನು ಬೋಧಿಸುವ ಮೂಲಕ ಸರ್ವಕಾಲಕ್ಕೂ ಸ್ಮರಣೀಯ ರೆನಿಸಿದ್ದಾರೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ವಾಲ್ಮೀಕಿ ಮಹರ್ಷಿಯ ಜ್ಞಾನ ಸಾಧನೆ ಕುರಿತು ಗುಣಗಾನ ಮಾಡಿದರು.
ಯಲಹಂಕ ಉಪನಗರ ದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು ‘ಜ್ಞಾನ ಮತ್ತು ಆದರ್ಶ ಗಳನ್ನು ಬೆಳೆಸಿಕೊಳ್ಳುವ ಎಲ್ಲರಿಗೂ ಶ್ರೇಷ್ಠ ರೆನಿಸಿಕೊಳ್ಳಲು ಅವಕಾಶ ವಿದೆ. ಇದಕ್ಕೆ ನಿದರ್ಶನವಾಗಿ ಮಹರ್ಷಿ ವಾಲ್ಮೀಕಿಯವರು ನಮ್ಮ ದೇಶದಲ್ಲಿ ಜನಜನಿತರಾಗಿದ್ದಾರೆ.
ವಾಲ್ಮೀಕಿ ಮಹರ್ಷಿ ಸಹಸ್ರಾರು ವರ್ಷಗಳ ಹಿಂದೆ ಬರೆದ ರಾಮಾಯಣ ಕೃತಿಯಲ್ಲಿ ಸರ್ವಕಾಲದಲ್ಲೂ ಸ್ಮರಿಸುವಂತಹ ಆದರ್ಶವಿದೆ. ರಾಮಾಯಣ ದಂತಹ ಸರ್ವ ಶ್ರೇಷ್ಟ ಕೃತಿಯನ್ನು ರಚಿಸುವ ಮೂಲಕ ಶ್ರೀ ರಾಮಚಂದ್ರನ ಉನ್ನತ ಆದರ್ಶ ಗಳನ್ನು ನಮಗೆ ಪರಿಚಯಿಸಿದ ಆದಿಕವಿ, ಜಗದಕವಿ ಮಹರ್ಷಿ ವಾಲ್ಮೀಕಿಯವರು.
ಸರ್ವಕಾಲಕ್ಕೂ ಆದರ್ಶವಾಗಿ ನಿಲ್ಲಬಲ್ಲ ಶ್ರೀರಾಮನ ಗುಣವನ್ನು ತಮ್ಮ ರಾಮಾಯಣ ಕೃತಿಯ ಮೂಲಕ ಸಾರಿರುವ ವಾಲ್ಮೀಕಿ ಯವರ ದೂರದರ್ಶಿತ್ವ ನಿಜಕ್ಕೂ ಪ್ರಶಂಸನೀಯ. ಜಾತಿಯಿಂದ ಅಥವಾ ಶ್ರೀಮಂತಿಕೆಯಿಂದ ಯಾರೂ ಶ್ರೇಷ್ಟರಾಗಲು ಸಾಧ್ಯವಿಲ್ಲ, ನಾವು ಗಳಿಸುವ ಜ್ಞಾನ ಮತ್ತು ಆದರ್ಶಗಳಿಂದ ಮಾತ್ರ ಶ್ರೇಷ್ಟರಾಗಲು ಸಾಧ್ಯ ಎಂಬುದಕ್ಕೆ ವಾಲ್ಮೀಕಿ ಮಹರ್ಷಿಗಿಂತ ಬೇರೆ ನಿದರ್ಶನ ಬೇಕಿಲ್ಲ.
ಆದರೆ ದೇಶಕ್ಕೆ ಆದರ್ಶ ಪುರುಷ ಎನಿಸಿರುವ ಶ್ರೀರಾಮನ ಬಗ್ಗೆ, ರಾಮಾಯಣದ ಕರ್ತೃವಾದ ವಾಲ್ಮೀಕಿ ಮಹರ್ಷಿಗಳ ಬಗ್ಗೆ ತುಚ್ಛವಾಗಿ ನಿಂದಿಸುತ್ತಿರುವ, ಅವರ ಬಗ್ಗೆ ಅವಹೇಳನದ ಮಾತುಗಳನ್ನಾ ಡುವ ನಕಲಿ ಚಿಂತಕ ಭಗವಾನ್ ವಿರುದ್ಧ ಗಟ್ಟಿಧ್ವನಿಯಲ್ಲಿ ಪ್ರತಿಭಟಿಸುವ ಮನಸ್ಸುಗಳು ನಮ್ಮಲ್ಲಿಲ್ಲದಿರುವ ಬಗ್ಗೆ ಬೇಸರವಿದೆ. ಭಗವಾನ್ ರವರಿಗೆ ಅಂತಹ ಕೆಚ್ಚೆದೆಯೇ ಇದ್ದರೆ ಇತರ ಧರ್ಮಗಳ ಧರ್ಮಗುರುಗಳ ಲೋಪದೋಷಗಳ ಬಗ್ಗೆ ಒಮ್ಮೆ ಮಾತನಾಡಲಿ ನೋಡೋಣ ಎಂದು ಸವಾಲೆಸೆದರು.
ಇದೇ ಸಂದರ್ಭದಲ್ಲಿ ಬೆಂ.ಉತ್ತರ ಜಿಲ್ಲಾ ಬಿಜೆಪಿ ಎಸ್ ಟಿ ಮೋರ್ಚಾ ಉಪಾಧ್ಯಕ್ಷ ಎ.ಸಿ.ಮುನಿಕೃಷ್ಣಪ್ಪ, ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಸತೀಶ್, ನಗರ ಮಂಡಲ ಎಸ್ ಟಿ ಮೋರ್ಚಾ ಅಧ್ಯಕ್ಷ ಬಿ.ಆರ್.ಮೋಹನ್, ಪ್ರಧಾನ ಕಾರ್ಯದರ್ಶಿ ಹರೀಶ್, ಪದಾಧಿಕಾರಿಗಳಾದ ಪ್ರದೀಪ್, ರಮೇಶ್, ಗಂಗಾಧರ್, ರಾಮಾಂಜಿ, ಅಟ್ಟೂರು ವಾರ್ಡ್ ಬಿಜೆಪಿ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ನಟರಾಜ್ ಇನ್ನಿತರರಿದ್ದರು.