ನಗರದ ಸೆಂಟ್ ಜಾನ್ಸ್ ಶಾಲೆಯಲ್ಲಿ ಅದ್ದೂರಿ ಕನ್ನಡೋತ್ಸವ
ಚಿಕ್ಕಬಳ್ಳಾಪುರ: ವರ್ಷಪೂರ್ತಿ ಇಂಗ್ಲೀಷ್ ಕಲಿಕೆ ಇಂಗ್ಲೀಷ್ ಕಲಿಯಲು ನಿಮ್ಮ ಮಕ್ಕಳನ್ನ ನಮ್ಮ ಶಾಲೆಗೆ ಸೇರಿಸಿ ಅನ್ನೋ ಆಂದೋಲನಗಳ ಮದ್ಯೆ ಮಿಷನ್ ಶಾಲೆಗಳಲ್ಲೂ ಕನ್ನಡದ ಕಂಪನ ಪಸರಿಸುತ್ತಿದೆ. ನಗರದ ಸಾದುಮಠ ರಸ್ತೆಯ ಸೆಂಟ್ ಜಾನ್ಸ್ ಇಂಗ್ಲೀಷ್ ಶಾಲೆಯಲ್ಲಿ ಅದ್ದೂರಿ ಕನ್ನಡೋತ್ಸವದಲ್ಲಿ ವೈಭವದ ದಸರಾ ಮೆರಗು ಬಂದಿತ್ತು ಗತವೈಭವ ಕೃಷಿ ಆಚಾರ ವಿಚಾರ ಪ್ರದರ್ಶನ ನಡೆದಿತ್ತು.
ನಗರದಲ್ಲಿ ಇತ್ತೀಚೆಗೆ ಇಂಗ್ಲೀಷ್ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ ಬರೀ ಇಂಗ್ಲೀಷನ್ನೆ ಮೈಗೂಡಿಸಿಕೊಂಡಿರುವ ಶಾಲೆಗಳಲ್ಲೂ ಕನ್ನಡ ರಾಜ್ಯೋತ್ಸವ ಮನಸ್ಪೂರ್ತಿಯಾಗಿ ಆಚರಿಸಲಾಗುತ್ತಿದೆ ನಗರದ ಸಾದುಮಠ ರಸ್ತೆಯಲ್ಲಿರುವ ಸೆಂಟ್ ಜಾನ್ಸ್ ಇಂಗ್ಲೀಷ್ ಶಾಲೆಯಲ್ಲಿಂದು ಅದ್ದೂರಿ ಕನ್ನಡೋತ್ಸವ ಹಮ್ಮಿಕೊಳ್ಳಲಾಗಿತ್ತು ಇದೆ ಈವೆಂಟಲ್ಲಿ ಶಾಲಾ ಮಕ್ಕಳಿಂದ ವಿಶ್ವ ಪ್ರಸಿದ್ದ ದಸರಾ ವೈಭವ ಅರಮನೆ ಅಂಬಾರಿ ಕಲಾಕೃತಿಗಳ ಪ್ರದರ್ಶನ ಗೊಂಬೆಗಳ ಪ್ರದರ್ಶನ ಆಕರ್ಷಕವಾಗಿತ್ತು ದೇಶದ ಕೃಷಿ ಪದ್ದತಿ ಸಂಸ್ಕತಿ ಆಚಾರ ವಿಚಾರಗಳನ್ನು ಬಿಂಬಿಸುವ ಕಲಾಕೃತಿ,ಬೇಬಿ ಬೊಂಬೆ, ದೆವ್ವದ ಮನೆ ಆಕರ್ಷಕವಾಗಿತ್ತು ಪೋಷಕರು ತುಂಬಿ ತುಳುಕಿದ್ದರೂ ಮಕ್ಕಳಿಂದಲೇ ಆಹಾರ ಮೇಳ ನಡೆದಿದತ್ತು ವೇಷಬೂಷಣಗಳ ಬರಾಟೆ ಚೆನ್ನಾಗಿತ್ತು ಹೃದಯ ದಗಬಡಿಸುವ ಬೂತದ ಮನೆ ಪೋಷಕರಿಗೆ ಸಂತೋಷವನ್ನು ನೀಡಿತ್ತು ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾದಿಕಾರಿ ಡಾ.ಮಂಜುಳ, ಎಲ್ ಐ ಸಿ ಹಿರಿಯ ಶಾಖಾ ಪ್ರಬಂದಕರು ರಾಜ್ ಶೇಖರ್ ಶಾಲೆ ಅಢಳಿತ ಮಂಡಳಿಯ ಅಧ್ಯಕ್ಷ ಹೆನ್ರಿ ಪ್ರಸನ್ನ ,ಡಾ.ಜಾಯ್, ಮುಖ್ಯೋಪಾದ್ಯಾಯನಿ ತೇಜಶ್ವಿನಿ ಹಾಜರಿದ್ರು.ವೇದಿಕೆ ಕಾರ್ಯಕ್ರಮ ಶುರುವಾಗುತಿದ್ದಂತೆ ಜೋರಾಗಿ ಮಳೆ ಸುರಿಯಿತು ಒಂದು ಕ್ಷಣ ಬೇಸರ ಮೂಡಿಸಿತು ಆದರೂ ಅದು ಶುಭಸಂಕೇತ ಎಂದು ಮುಖ್ಯ ಅಥಿತಿಗಳು ಮುಗಳ್ನಕ್ಕರು.
