
ದಿನಾಂಕ 5 – 11 – 2023ರ ಭಾನುವಾರದಂದು ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ರಾಷ್ಟ್ರೀಯ ಸೇವಾಯೋಜನೆ ಘಟಕವು ವರ್ಷದಿಸಿದ್ದ ಏಳು ದಿವಸದ ವಾರ್ಧಿಕ ಶಿಬಿರವು ಶಿಬಿರ ಜ್ಯೋತಿಯನ್ನು ಬೆಳಗುವುದರ ಮೂಲಕ ಸಮಾರೋಪಗೊಂಡಿತು – 11, 30 ಗಂಟೆಗೆ ಶೀಡಾ ಬಸವ ರಮಾನಂದ ಸ್ವಾಮಿಗಳ ಘನ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವು ಸಂಪನ್ನಗೊಂಡಿತು. ದಾರ್ಜಸ್ ಪೇಟೆಯ ಆರಕ್ಷಕರ ಉಪಸ್ಥಿತಿಯಲ್ಲಿ ಒಟ್ಟು 50 ಸ್ವಯಂ ಸೇವಕರಿಗೆ ಪ್ರಶಸ್ತಿ ಪ್ರಮಾಣ ಪತ್ರವನ್ನು ನೀಡುವುದರ ಮೂಲಕ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸ್ವಯಂ ಸೇವಕರ ಪಾತ್ರ ಮುಖ್ಯ ಎ೦ದು ತಿಳಿಸಲಾಯ್ತು – ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳೀಮಠರವರು ಸ್ವಯಂ ಸೇವರರನ್ನು ಅಭಿನಂದಿಸಿ “ಸೇವೆ ಅಂತರಂಗ ಬಹಿರಂಗ ಶುದ್ಧತೆಯ ಸಂಕೇತ ಇಂತಹ ಶುದ್ಧ ಕಾಯಕವನ್ನು ನೀವು ಏಳು ದಿವಸವೂ ಶ್ರಮದಾನದ ಮೂಲಕ ದರ್ಶಿಸಿದ್ದೀರಿ ಎ೦ದು ಪ್ರಸಂಶಿಸಿ ಮಾತನಾಡಿದರು. ಶ್ರೀಗಿರೀಶ ವೈ ಅವರು ಸ್ವಾಗತ ಕೋರಿದರು – ಸಿಂಚನ ನಿರೂಪಣೆ ಮಾಡಿದರು. ಶ್ರುತಿ ವಂದನಾರ್ಪಣೆ ಮಾಡಿದರು..ಕು. ದೀಪಾ ಪ್ರಾರ್ಥನೆ ಮಾಡಿದರು. ಮೋಕ್ಷ ಬಹುಮಾನದ ಪಟ್ಟಿಯನ್ನು ಓದಿದರು. ಎಲ್ಲಾ ಸ್ವಯಂ ಸೇವಕರು ಪ್ರಮಾಣ ಪತ್ರ ಪಡೆದರು. ಇದೇ ಸಮಾರಂಭದಲ್ಲಿ ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳೀಮಠ ಅವರಿಗೆ ವನಕಲ್ಲುಮಲ್ಲೇಶ್ವರ ಮಹಾ ಸಂಸ್ಥಾನ ಮರದಿಂದ ಕಲಾರತ್ನ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು. ಶ್ರೀಗಿರೀಶ ವೈರಾ ಸೇಯೇ ಅಧಿಕಾರಿಗಳನ್ನು ಸನ್ಮಾನಿಸಿದರು. ಸಹ ಅಧಿಕಾರಿಗಳಾದ ಶ್ರೀಗಿರೀಶ ಪಿ ಹೆಚ್ ಹಾಗೂ ಉತ್ತಮ ಸೇವೆ ನೀಡಿದ ಮಂಜುನಾಥ ಕುಮಾರ ಮದನ ಚಂದ್ರಶೇಖಕ ಗಗನ್ ಅರ್ಚನಾ ಅವರನ್ನು ಮಹಾ ಸಂಸ್ಥಾನ ಮಠದಿಂದ ಸನ್ಮಾನಿಸಲಾಯ್ತು. ಶ್ರೀ ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ಅಧ್ಯಕ್ಷರಿಂದ ಪ್ರೋತ್ಸಾಹಿಸುವ ಪ್ರಶಸ್ತಿ ಪತ್ರ ನೀಡಲಾಯ್ತು