
ದಿನಾಂಕ 23 – 11 – 2023ರಂದು ಕಾಲೇಜು ಶಿಕ್ಷಣ ಇಲಾಖೆಯ ಇ. ಎಲ್. ಸಿ ಘಟಕದ ಬೆಂಗಳೂರು ನಗರ ಜಿಲ್ಲೆ ಬಿಬಿಎಂಪಿ ವ್ಯಾಪ್ತಿಯ ಅನುದಾನಿತ ಕಾಲೇಜು ಬಿಎಡ್ – ಕಾನೂನು – ಚಿತ್ರಕಲಾ ಕಾಲೇಜು ಮತದಾನ ಸಾಕ್ಷರತೆಯ ಹಲವಾರು ಅರಿವು ಹಾಗೂ ಜಾಗೃತಿ ಪರಿಸರ ನಿರ್ಮಾಣದ ಶೈಕ್ಷಣಿಕ ಆಯಾವ ದಲ್ಲಿ ನ ಇವರ ವ್ಯಕ್ತಿತ್ವವನ್ನು ಗುರ್ತಿಸಿ ಡಾ. ಶೀಲಾದೇವಿ ಎಸ್ ಮಳಿಮಠ ರವರನ್ನು ಆಯ್ಕೆ ಮಾಡಿ -ನೇಮಕಾದೇಶ ಮಾಡಲಾಗಿದೆ. ಈಗಾಗಲೇ ಹಲವಾರು ಸಂಘಸಂಸ್ಥೆಗಳಿಂದ ಗುರ್ತಿಸಲ್ಪಟ್ಟಿರುವ ಡಾ. ಶೀಲಾದೇವಿ ಎಸ್.ಮಳೀಮಠ ಅವರು ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ – ಹಾಗೂ ರಾಜ್ಯ ರಾಷ್ಟ್ರದಲ್ಲಿ ಅತ್ಯುತ್ತಮ ಎನ್. ಎಸ್. ಎಸ್ ಅಧಿಕಾರಿ ಆಗಿ ಪ್ರಶಸ್ತಿ ಪಡೆದಿರುತ್ತಾರೆ – ಬಸವೇಶ್ವರ ಪದವಿ ಕಾಲೇಜಿನಲ್ಲಿ ನ್ಯಾಕ್ ಪ್ರಕ್ರಿಯೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು 7 ತಿಂಗಳಿನಲ್ಲಿ 35 ಕಾರ್ಯಕ್ರಮಗಳನ್ನು ಶೈಕ್ಷಣಿಕ ಮಟ್ಟದಲ್ಲಿ ಆಯೋಜಿಸಿ ಗುರ್ತಿಸಿಕೊಂಡಿದ್ದಾರೆ. 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕೆಳದಿ ಚೆನ್ನಮ ಪ್ರಶಸ್ತಿ ಪಡೆದಿರುತ್ತಾರೆ. ಮತದಾನದ ಕ್ಷೇತ್ರದಲ್ಲಿ ಸಮಾಜವನ್ನು ಪರಿವರ್ತನೆ ಮಾಡುವುದರಲ್ಲಿ ಯುವಕ ಯುವತಿಯರನ್ನು ಜಾಗೃತಿಗೊಳಿಸಬೇಕೆನ್ನುವ ಇವರ ಆಶಯ ಯಶಸ್ವಿ ಆಗಲೆಂದು ಇವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ
9845085793. 7349337989