ಕೋಲಾರ : ತಾಲೂಕಿನ ನರಸಾಪುರ ಹೋಬಳಿಯ ಕುರ್ಕಿ ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಶ್ರೀ ರಾಧಾ ರುಕ್ಮಿಣಿ ಸಮೇತ ವೇಣುಗೋಪಾಲಸ್ವಾಮಿ ದೇವಾಲಯದ ಜೀರ್ಣೋದ್ಧಾರವನ್ನು ಕುರ್ಕಿ ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ಮಾಡಲಾಗಿದ್ದು, ಈ ಜೀರ್ಣೋದ್ಧಾರದ ಕಾರ್ಯಕ್ರಮದ ಪ್ರಯುಕ್ತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು,
ಕಾರ್ಯಕ್ರಮಗಳಲ್ಲಿ ನವಗ್ರಹ ಸ್ಥಿರ ಬಿಂಬಗಳು ಪ್ರಾಣ ಪ್ರತಿಷ್ಠಾಪನೆ ಮತ್ತು ವಿಶೇಷ ಕುಂಭಾಭಿಷೇಕ ಹಾಗೂ ಬ್ರಹ್ಮಿ ಮುಹೂರ್ತದಲ್ಲಿ ಶ್ರೀ ಸ್ವಾಮಿಯವರ ಪ್ರಾಣ ಪ್ರತಿಷ್ಠಾಪನೆ ಮಹಾಗಣಪತಿ ಪೂಜೆ ನವಗ್ರಹ ಪೂಜೆ ಶ್ರೀ ರಾಧಾ ರುಕ್ಮಿಣಿ ವೇಣುಗೋಪಾಲಸ್ವಾಮಿ ಕಳಶ ಸ್ಥಾಪನೆ ನವಗ್ರಹ ಹೋಮ ಪೂರ್ಣಹುತಿ ವಿಮಾನ ಗೋಪುರ ಕುಂಭಾಭಿಷೇಕ ಗೋ ಪೂಜೆ ಫಲ ಪಂಚಾಮೃತ ಅಭಿಷೇಕ ಮತ್ತು ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವನ್ನು ಪೂಜಾ ಕಾರ್ಯಗಳನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ದೀಪಾಲಂಕಾರವನ್ನು ಮಾಡಲಾಗಿತ್ತು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದಂತ ಎಲ್ಲಾ ಭಕ್ತಾದಿಗಳಿಗೆ ಲಾಡು ವಿತರಣೆ ಹಾಗೂ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಕಾರ್ಯಕ್ರದಲ್ಲಿ ಕೆ.ಜಿ.ದೇವರಾಜ್, ಕರವೇ ಕೆಆರ್ ಪುರ ಕ್ಷೇತ್ರದ ಅಧ್ಯಕ್ಷ ಎಂ ಮಂಜುನಾಥ್, ಕೆ ಬಿ ಗೋಪಾಲಕೃಷ್ಣ, ಕೆ ವಿ ರಾಮೇಗೌಡ, ಕೆ ಎಚ್ ಮುನಿಯಪ್ಪ, ಜಯರಾಮಯ್ಯ, ಶ್ರೀ ರಾಮಯ್ಯ, ಹಿರಣ್ಯಗೌಡ, ಆರ್ ಶ್ರೀಧರ್, ವಾನರಶಪ್ಪ, ತಮ್ಮೇಗೌಡ, ಕೆ ಎನ್ ಚೌಡೇಗೌಡ, ಕೆ ವಿ ಕೃಷ್ಣಾರೆಡ್ಡಿ, ಸಿ ಕೃಷ್ಣಪ್ಪ, ಗ್ರಾ.ಪಂ ಸದಸ್ಯೆ ಶೈಲಶ್ರೀ, ಯುವಕರಾದ ವಿನೋದ್, ನಾಗೇಶ್, ವಿಶ್ವನಾಥ್,ಮೋಹನ್,ವಿನಯ್ ಹಾಗೂ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.
