ಕೊರಟಗೆರೆ;- ತಾಲೂಕಿನ ಎಸ್ಸಿ, ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿ ನೂತನ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಯಿತ್ತು. ನೂತನ ತಾಲೂಕು ಅಧ್ಯಕ್ಷರಾಗಿ ಪಿಡ್ಯೂಡಿ ಇಲಾಖೆಯ ಕೆ.ಚಿಕ್ಕಣ್ಣ ಆವಿರೋಧ ಆಯ್ಕೆ ಮಾಡಲಾಯಿತ್ತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಎಸ್ಸಿ, ಎಸ್ಟಿ ನೌಕರರ ಸಮಸ್ವಯ ಸಮಿತಿ ಪದಾಧಿಕಾರಿಗಳ ಸಭೆಯನ್ನ ಏರ್ಪಡಿಸಲಾಗಿತ್ತು ಸಭೆಯಲ್ಲಿ ವಿವಿಧ ಪದಾಧಿಕಾರಿಗಳನ್ನ ಇದೆ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತ್ತು. ನೂತನ ಅಧ್ಯಕ್ಷರಾಗಿ ಕೆ. ಚಿಕ್ಕಣ್ಣ, ಗೌವರಾಧ್ಯಕ್ಷರಾಗಿ ಶಿಕ್ಷಕರಾದ ಎಲ್.ಪಿ. ಲಕ್ಷಿö್ಮÃಪುತ್ರ ರವರನ್ನ ಸರ್ವನುಮತದಿಂದ ಆಯ್ಕೆ ಮಾಡಲಾಯಿತ್ತು.
ಎಸ್ಸಿ, ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಶಿವಶಂಕರ್ ಮಾತನಾಡಿ ರಾಜ್ಯದಲ್ಲಿ ಸರಕಾರಿ ನೌಕರರು ಉತ್ತಮ ಕೆಲಸ ನಿರ್ವಹಣೆ ಮಾಡಲಾಗುತ್ತಿದ್ದು, ಅದರಂತೆ ಕೊರಟಗೆರೆಯಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಸರಕಾರಿ ನೌಕಕರಿಗೆ ಯಾವುದೆ ತೊಂದರೆ ಆಗದಂತೆ ಕೆಲಸ ಮಾಡಬೇಕಿದ್ದು, ಸರಕಾರಿ ನೌಕಕರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಪರವಾಗಿ ಕೆಲಸ ಮಾಡಿಬೇಕು ಎಂದು ತಿಳಿಸಿದರು.
ನೂತನ ಅಧ್ಯಕ್ಷ ಕೆ.ಚಿಕ್ಕಣ್ಣ ಮಾತನಾಡಿ ಕೊರಟಗೆರೆ ತಾಲೂಕಿನಲ್ಲಿ ಸುಮಾರು ಏಳು ವರ್ಷದಿಂದ ಸರಕಾರಿ ಸೇವೆ ಸಲ್ಲಿಸಿಕೊಂಡು ಬಂದಿದ್ದು, ಈ ಹಿಂದೆ ನಾಲ್ಕು ವರ್ಷಗಳ ಕಾಲ ಎಸ್ಸಿ, ಎಸ್ಟಿ ಸರಕಾರಿ ನೌಕಕರ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿ ತಾಲೂಕಿನ ನೌಕಕರ ಪರವಾಗಿ ಹೋರಾಟ ಮತ್ತು ಸೇವೆಯನ್ನ ಮಾಡಿದ್ದೇನೆ. ಈಗ ಮತ್ತೆ ತಾಲೂಕಿನ ಎಸ್ಸಿ, ಎಸ್ಟಿ ನೌಕಕರ ಅಪೇಕ್ಷೆಯಂತೆ ನನ್ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇನ್ನೂ ಮಂದೆ ತಾಲೂಕಿನ ಎಸ್ಸಿ,ಎಸ್ಟಿ ನೌಕಕರ ಪರ ಹೋರಾಟ ಮಾಡಿ ನೌಕಕರ ನೆರವಿಗೆ ನಿಲ್ಲುತ್ತೇನೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ವಿಜಯಕುಮಾರ್, ಜಿಲ್ಲಾಧ್ಯಕ್ಷ ವೈ.ಕೆ.ಬಾಲಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್. ನಾಗರಾಜು ತಾಲೂಕು ಗೌವರಾಧ್ಯಕ್ಷ ಶಿಕ್ಷಕರಾದ ಎಲ್.ಪಿ. ಲಕ್ಷಿö್ಮÃಪುತ್ರ, ನೌಕಕರಾದ ಮಂಜುನಾಥ್, ಹನುಮಂತರಾಜು, ಈಶ್ವರ್, ಹನುಮಂತರಾಯಪ್ಪ, ಮಂಜುನಾಥ್, ಗಂಗಾಧರ್, ತಿಪ್ಪೇಸ್ವಾಮಿ, ಶಿವರಾಮ್, ಹನುಮೇಶ್, ಕೋಟೆಕಲ್ಲಯ್ಯ, ದೇವರಾಜು, ರಾಮಾಂಜಿನಪ್ಪ, ಸೇರಿದಂತೆ ಇತರರು ಇದ್ದರು.
