ಚಿಕ್ಕಬಳ್ಳಾಪುರ ತಾಲ್ಲೂಕು ಕೊಂಡೇನಹಳ್ಳಿ ರಾಗಿಮರ ಕುಂಟೆ ದುರಸ್ತಿ

ಚಿಕ್ಕಬಳ್ಳಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಕೆರೆ ಪುನಶ್ಚೇತನ ಕಾರ್ಯಕ್ರಮದಡಿಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಕೊಂಡೇನಹಳ್ಳಿ ರಾಗಿಮರ ಮಿನಿ ಕೆರೆ ಪುನಶ್ಚೇತನಗೊಳಿಸಿದ್ದು ನಿನ್ನೆ ಬಿದ್ದ ಮಳೆಗೆ ನೀರು ತುಂಬಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಸುಮಾರು ಐದು ಲಕ್ಷ ವೆಚ್ಚದಲ್ಲಿ ಹೂಳು ತೆಗೆದು ದುರಸ್ತಿಗೊಳಿಸಿದ ಕೆರೆಯನ್ನ ಇಂದು ಗ್ರಾಮಸ್ಥರಿಗೆ ಹಸ್ಥಾಂತರ ಮಾಡಿದರು.

553ನೇ ನಮ್ಮೂರು ನಮ್ಮ ಕೆರೆ ಹಸ್ತಾಂತರ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿಕ್ಕಬಳ್ಳಾಪುರ, ಹಾಗೂ ಕೊಂಡೇನಹಳ್ಳಿ ಕೆರೆ ಸಮಿತಿ ವತಿಯಿಂದ ಕೆರೆಗೆ ಭಾಗಿನ ಅರ್ಪಣೆ, ಬೋರ್ಡ್ ಅನಾವರಣ, ಕೆರೆ ಸಮಿತಿಯವರಿಗೆ ಕೆರೆ ಹಸ್ತಾಂತರ ಕಾರ್ಯಕ್ರಮ ನೆರವೇರಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಧಾರ್ಮಿಕ, ಕೃಷಿ,ಹೈನೋದ್ಯಮ ಹಾಗು ಹೆಣ್ಣು ಮಕ್ಕಳ ಆರ್ಥಿಕ ಮೂಲಗಳ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ಆ ನಿಟ್ಟಿನಲ್ಲಿ ಕೆರೆ ಪುನಶ್ಚೇತನ ಯೋಜನೆಯಡಿ ಹೂಳೆತ್ತುವುದು ಕಾಲುವೆ ದುರಸ್ತಿಗೊಳಿಸುವುದು ಮಾಡಲಾಗುತಿದ್ದು ಚಿಕ್ಕಬಳ್ಳಾಪುರ ತಾಲ್ಲೂಕು ಕೊಂಡೇನಹಳ್ಳಿ ರಾಗಿಮರ ಕುಂಟೆ ಮಿನಿ ಕೆರೆಯನ್ನ ಸುಮಾರು ಐದು ಲಕ್ಷ ವೆಚ್ಚದಲ್ಲಿ ಪುನಶ್ಚೇತನಗೊಳಿಸಿದ್ದು ಆ ಕೆರೆಗೆ ನಿನ್ನೆ ಬಿದ್ದ ಮಳೆಯಿಂದ ನೀರು ತುಂಬಿಕೊಂಡು ರೈತರ ಮೊಗದಲ್ಲಿ ಮoದಹಾಸ ಮೂಡುವಂತೆ ಮಾಡಿದೆ ಸ್ವಲ್ಪ ಸ್ವಲ್ವೇ ಒತ್ತುವರಿಯಾಗುತಿದ್ದ ಈ ಮಿನಿ ಕೆರೆಯನ್ನ ಹೂಳೆತ್ತಿ ದುರಸ್ತಿಗೊಳಿಸಲಾಗಿದೆ ಆ ಕೆರೆಯನ್ನ ಗ್ರಾಮದ ಕೆರೆ ಅಭಿವೃದ್ದಿ ಸಮಿತಿ ಹಾಗು ಜಿಲ್ಲಾ ಜನಜಾಗೃತಿ ವೇದಿಕೆ ಸಮ್ಮುಖದಲ್ಲಿ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಈ ವೇಳೆ ಮಾತನಾಡಿದ ಜಿಲ್ಲಾ ಜನಜಗೃತಿ ವೇದಿಕೆ ಅಧ್ಯಕ್ಷ ಯಲುವಹಳ್ಳಿ ರಮೇಶ್ ಧರ್ಮಸ್ಥಳದ ಧರ್ಮಾದಿಕಾರಿ ಕೃಪಾ ಕಟಾಕ್ಷದಿಂದ ಗ್ರಾಮೀಣ ಭಾಗದ ಅದರಲ್ಲೂ ರೈತಾಪಿ ಜನರಿಗೆ ಸರ್ಕಾರವೂ ಕೈಗೊಳ್ಳದಂತಹ ಯೊಜನೆಗಳನ್ನ ಜಾರಿಗೆ ತಂದು ಉಪಕಾರ ಮಾಡುತಿದ್ದಾರೆ ಹೆಣ್ಣು ಮಕ್ಕಳ ಆರ್ಥಿಕ ಸಬಲೀಕರಣಕ್ಕಾಗಿ ಸಂಘಗಳನ್ನ ರಚಿಸಿ ಆರ್ಥಿಕ ಅಭಿವೃದ್ದಿಗೆ ಒತ್ತುಕೊಟ್ಟಿದ್ದಾರೆ ಗ್ರಾಮಗಳಲ್ಲಿ ದೇವಸ್ಥಾನಗಳಿಗೆ,ಡೈರಿ ನಿರ್ಮಾಣಕ್ಕೆ ಸಹಾಯಧನ ನೀಡುತ್ತಾ ಬಂದಿದ್ದಾರೆ ಕೆರೆಗಳ ಪುನಶ್ಚೇತನಗೊಳಿಸಿ ನೀರುಣಿಸುವ ಕೆಲಸ ಮಾಡುತಿದ್ದಾರೆ ಕೊಂಡೇನಹಳ್ಳಿಯಲ್ಲೂ ರಾಗಿಮರ ಮಿನಿಕೆರೆ ಅಭಿವೃದ್ದಿ ಪಡಿಸಿ ಗ್ರಾಮಕ್ಕೆ ಹಸ್ಥಾಂತರ ಮಾಡಿದ್ದಾರೆ ಆ ಕೆರೆಯನ್ನ ಅಚ್ಚುಕಟ್ಟಾಗಿ ಇಟ್ಟುಕೊಳ್ಳಿ ನೀರನ್ನ ಕಲುಷಿತಗೊಳಿಸಬೇಡಿ ಮೋಟರ್ ಗಳನ್ನ ಬಿಟ್ಟು ನೀರು ಖಾಲಿ ಮಾಡಬೇಡಿ ಕೆರೆಯಲ್ಲಿ ನೀರಿದ್ರೆ ಸುತ್ತಮುತ್ತ ಬೋರ್ ಗಳಲ್ಲಿ ಅಂತರಜಲ ಹೆಚ್ಚಾಗುತ್ತೆ ಎಂದರು.

ಕೆರೆ ಹಸ್ತಾಂತರ ಪೂಜೆಯಲ್ಲಿ ಎಸ್ ಕೆ ಡಿ ಆರ್ ಡಿ ಪಿ ನಿರ್ದೇಶಕ ಪ್ರಶಾಂತ್,ತಾಲ್ಲೂಕು ನಿರ್ದೇಶಕ ಧನಂಜಯ್ ಕೆರೆ ಸಮಿತಿ ಅಧ್ಯಕ್ಷ ಚಂದ್ತಪ್ಪ ,ಗ್ರಾಮಫಂಚಾಯಿತಿ ಪಿಡಿಒ ಶ್ರೀಕಾಂತ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವೆಂಕಟೇಶಪ್ಪ, ಮುರುಳಿ ಮತ್ತು ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *