ಅತಿಥಿ ಉಪನ್ಯಾಸಕರ ೧೨ನೇ ದಿನದ ಧರಣಿಗೆ ವಿದ್ಯಾರ್ಥಿಗಳ ಸಾಥ್

ಚಿಕ್ಕಬಳ್ಳಾಪುರ : ತಮ್ಮ ಸೇವೆಯನ್ನು ಕಾಯಂ ಮಾಡಬೇಕೆಂದು ಒತ್ತಾಯಿಸಿ ನವೆಂಬರ್ ೨೩ ರಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಮುಷ್ಕರ ೧೨ನೇ ದಿನಕ್ಕೆ ಕಾಲಿಟ್ಟಿದ್ದು ಸೋಮವಾರ ವಿದ್ಯಾರ್ಥಿಗಳು ಕೂಡ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಗರದ ಸರಕಾರಿ ಪದವಿ ಕಾಲೇಜ್ ಆವರಣದಲ್ಲಿ ನಡೆದ ಪ್ರತಿಭಟನೆಗೆ ಸೋಮವಾರ ವಿದ್ಯಾರ್ಥಿ ಸಮೂಹ ಬೆಂಬಲ ವ್ಯಕ್ತಪಡಿಸಿ ಸರಕಾರದ ವಿರುದ್ದ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಮುಷ್ಕರ ನಿರತ ಅತಿಥಿ ಉಪನ್ಯಾಸಕರ ಬಳಿಗೆ ಧಾವಿಸಿದ ವಿದ್ಯಾರ್ಥಿ ಸಮೂಹ ನಿಮ್ಮ ಬೆಂಬಲಕ್ಕೆ ನಾವು ಇದ್ದೇವೆ.ನೀವು ಚೆನ್ನಾಗಿದ್ದರೆ ತಾನೆ ನಾವು ಚೆನ್ನಾಗಿರಲು ಸಾಧ್ಯ.ನಿಮ್ಮ ಕಷ್ಟವೇ ನಮ್ಮ ಕಷ್ಟವಾಗಿದೆ. ನಾವು ನಿಮ್ಮೊಟ್ಟಿಗೆ ಮುಷ್ಕರದಲ್ಲಿ ಭಾಗಿಯಾಗಲಿದ್ದೇವೆ.ಇದು ನಮ್ಮ ಕರ್ತವ್ಯಕೂಡ ಆಗಿದೆ ಎಂದು ಸಾಂತ್ವಾನ ಹೇಳಿದರು.

ಈ ವೇಳೆ ಮಾತನಾಡಿದ ಬಿಸಿಎ ವಿದ್ಯಾರ್ಥಿನಿ ನಿಖಿತ ನವೆಂಬರ್ ೨೩ ರಿಂದ ಸರಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಹೂಡಿದ್ದಾರೆ. ಇದರಿಂದಾಗಿ ನಮಗೆ ಪಾಠ ಪ್ರವಚಗಳಿಗೆ ತೊಂದರೆ ಆಗಿದೆ. ಒಂದು ವಾರದಿಂದ ಯಾವುದೇ ಪಾಠಗಳು ನಡೆದಿಲ್ಲ.ಉನ್ನತ ಶಿಕ್ಷಣ ಇಲಾಖೆ, ಮತ್ತು ಸರಕಾರ ಇತ್ತ ಗಮನ ಹರಿಸಿ ಬೇಗನೆ ಸಮಸ್ಯೆ ಈಡೇರಿಸಿದರೆ ನಮಗೆ ಅನುಕೂಲ ಆಗಲಿದೆ. ಜನವರಿಗೆ ಪರೀಕ್ಷೆಗಳಿರುವುದರಿಂದ ಪಾಠಗಳೇ ನಡೆದಿಲ್ಲ, ಖಾಸಗಿ ಕಾಲೇಜುಗಳಲ್ಲಿ ಈಗಾಗಲೇ ಸಿಲಿಬಸ್ ಮುಗಿಸಿದ್ದಾರೆ. ಸರಕಾರಿ ಕಾಲೇಜಿಗೆ ಸೇರಿದ ಪಾಪಕ್ಕೆ ನಮಗೆ ಈ ಶಿಕ್ಷೆ ತರವಲ್ಲ ಎಂದರು.

ಬಿ.ಕಾo ವಿದ್ಯಾರ್ಥಿನಿ ಸಂಧ್ಯಾ ಮಾತನಾಡಿ ಪಾಠ ಮಾಡುವ ಉಪನ್ಯಾಸಕರಲ್ಲಿ ಎರಡು ಭಾಗ ಮಾಡಿ ಒಬ್ಬರಿಗೆ ಹೊಟ್ಟೆತುಂಬಾ ಊಟ, ಮತ್ತೊಬ್ಬರಿಗೆ ಅರೆಹೊಟ್ಟೆ ಹೀಗೆ ಸರಕಾರ ತಾರತಮ್ಯ ಮಾಡುವುದು ತರವಲ್ಲ.ಅತಿಥಿ ಉಪನ್ಯಾಸಕರು ಹೊರಗೆ ಇರುವ ಕಾರಣ ಪಾಠಗಳು ಪೂರ್ಣ ಪ್ರಮಾಣದಲ್ಲಿ ನಡೆಯದೆ ಬಂದ ಪುಟ್ಟ ಹೋದ ಪುಟ್ಟ ಎಂಬoತಾಗಿದೆ.ನಮ್ಮ ತಂದೆತಾಯಿ ಕಷ್ಟಪಟ್ಟು ಓದಲಿ ಎಂದು ಕಾಲೇಜಿಗೆ ಕಳಿಸಿಸುತ್ತಾರೆ. ಕಷ್ಟಪಟ್ಟು ಬಸ್‌ಗಳನ್ನು ಹಿಡಿದು ಕಾಲೇಜಿಗೆ ಬಂದರೆ ಇಲ್ಲಿ ಪಾಠಗಳೇ ನಡೆಯುವುದಿಲ್ಲ. ಸರಕಾರ ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿದರೆ ವಿದ್ಯಾರ್ಥಿ ಸಮೂಹ ಮತ್ತು ಉಪನ್ಯಾಸಕರು ಇಬ್ಬರಿಗೂ ನ್ಯಾಯ ಒದಗಿಸಿದಂತೆ ಆಗಲಿದೆ ಎಂದರು.

ಈ ವೇಳೆ ಅತಿಥಿ ಉಪನ್ಯಾಸಕರು ಬೇಡಿಕೆ ಈಡೇರಿಸಿ ಎಂದು ಘೋಷಣೆಗಳನ್ನು ಕೂಗಿದರು.

ಈ ವೇಳೆ ಕಾಯಂಮಾತಿಗಾಗಿ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ಸ್ಥಳದಲ್ಲಿ ಮುಖಂಡರಾದ ಸದಾಶಿವ,ವೆಂಕಟರಮಣ,ರಾಘವೇoದ್ರ,ನರಸಿoಹಮೂರ್ತಿ,ರಘು,ಸತ್ಯನಾರಾಯಣ,ಮಹದೇವಮೂರ್ತಿ,ಮoಜುನಾಥ್,ರಾಜಶೇಖರ್,ಕಾoತಮ್ಮ,ಸೌಭ್ಯಾಗ್ಯ,ನೂರ್ ಆಯಿಷಾ,
ರಾಮಚಂದ್ರ,ಲಾವಣ್ಯ, ಗಗನ್, ಗೋಪಾಲರೆಡ್ಡಿ, ಗಂಗಾಧರ, ಮತ್ತಿತರರು ಇದ್ದರು.

ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆ ಸರಕಾರಕ್ಕೆ ಹೊರೆಯಾಗಿ ಕಾಣುತ್ತಿರುವುದು ಶೋಚನೀಯ ಸಂಗತಿ.ಎರಡು ದಶಕಗಳಿಗೂ ಮೀರಿದ ಸಮಸ್ಯೆ ಈಡೇರಿಸಲು ಕಾಲ ಕೂಡಿಬಂದ್ದರೂ,ಸರಕಾರ ಮತ್ತೊಮ್ಮೆ ಕಾಲಾವಕಾಶ ಕೇಳುತ್ತಿರುವುದು ಆಶ್ಚರ್ಯದ ಜತೆಗೆ ಸೋಜಿಗವನ್ನುಂಟು ಮಾಡಿದೆ.
ಬೆಳಗಾವಿ ಅಧಿವೇಶನದಲ್ಲಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದೇವೆ.ಇದೇ ನಮ್ಮ ಅಚಲವಾದ ನಿರ್ಧಾರವಾಗಿದೆ.

ಮುನಿರಾಜು.ಎಂ.ಅರಿಕೆರೆ ಜಿಲ್ಲಾಧ್ಯಕ್ಷ ಅತಿಥಿ ಉಪನ್ಯಾಸಕರ ಸಂಘ ಚಿಕ್ಕಬಳ್ಳಾಪುರ.

Leave a Reply

Your email address will not be published. Required fields are marked *