ಈ ಮೇಳದಲ್ಲಿ ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಿದ ವಿಧ್ಯಾರ್ಥಿಗಳು ವ್ಯಾಪಾರದಲ್ಲಿ ಯಾವರೀತಿ ಹೂಡಿಕೆ ಮಾಡಬಹುದು ಹೇಗೆ ಲಾಭ ಪಡೆಯಬಹುದು ಎಂದು ತಿಳಿದುಕೊಂಡರು. ಇನ್ನು ಕಾಲೇಜಿನ ಪ್ರಾಂಶುಪಾಲ ರಘುನಾಥ್ ವಿಧ್ಯಾರ್ಥಿಗಳು ತಯಾರಿಸಿದ ತಿನಿಸು ಖರೀದಿಸಿ ಸವಿದು ವಿಧ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಈ ವೇಳೆ ಮಾತನಾಡಿದ ಪ್ರಾಂಶುಪಾಲ ರಘುನಾಥ್ ವಿಧ್ಯಾರ್ಥಿಗಳು ವರ್ಷ ಪೂರ್ತಿ ಶೈಕ್ಷಣಿಕ ಪಾಠಪ್ರವಚನಗಳಲ್ಲಿ ಬ್ಯುಸಿ ಆಗಿರುತ್ತಾರೆ ಪಠ್ಯೇತರ ಚಟುವಟಿಕೆಗಳನ್ನು ಆಯೋಜನೆ ಮಾಡುವುದು ಬಹು ಮುಖ್ಯ ಕಾಲೇಜಿನ ವತಿಯಿಂದ ಪ್ರತಿ ವರ್ಷ ಕ್ರೀಡೆ,ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ಈ ವರ್ಷ ಅವರಿಗೆ ಆಹಾರ ಮೇಳ ಆಯೋಜನೆ ಮಾಡಲಾಗಿದ್ದು ವಿಧ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿ ವಿವಿಧ ರೀತಿಯ ತಿನಿಸುಗಳನ್ನು ತಯಾರಿ ಮಾಡಿದ್ದು 20ಕ್ಕು ಹೆಚ್ಚು ಫುಡ್ ಸ್ಟಾಲ್ ತೆರೆದು ವ್ಯಾಪಾರ ವಹಿವಾಟು ನಡೆಸುವ ಮೂಲಕ ವ್ಯವಹಾರದ ಜ್ಞಾನ ಬಗ್ಗೆ ತಿಳಿದುಕೊಂಡಿದ್ದಾರೆ. ಇನ್ನು ಈ ಆಹಾರ ಮೇಳ ಸಂಪೂರ್ಣವಾಗಿ ವಿಧ್ಯಾರ್ಥಿಗಳೆ ನಿರ್ವಹಣೆ ಮಾಡಿಕೊಂಡಿದ್ದು. ಕಾಲೇಜಿನ ಸಿಬ್ಬಂದಿ ಕೇವಲ ಸಲಹ ಸೂಚನೆ ನೀಡಿದ್ದಾರೆ ವಿಧ್ಯಾರ್ಥಿಗಳ ಈ ಒಂದು ಪ್ರಯತ್ನವನ್ನು ನೆಚ್ಚಿ ಇನ್ನು ಪ್ರೋತ್ಸಾಹ ನೀಡುತ್ತಿದ್ದೇವೆ ಎಂದ ಅವರು ಈ ಆಹಾರ ಮೇಳ ಕಾಲೇಜಿನ ಸಿಬ್ಬಂದಿ ವರ್ಗದ ಮಾರ್ಗದರ್ಶನದಲ್ಲಿ ಆಯೋಜಿಸಿದ್ದು ಆಡಳಿತ ಮಂಡಳಿ ವತಿಯಿಂದ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗದವರಾದ ಅರ್ಚನಾ, ಮಂಜುನಾಥ್,ನವೀನ್,ವಿಜಯ ಇನ್ನು ಹಲವಾರು ಉಪಸ್ಥಿತರಿದ್ದರು.



