(ವರದಿಗಾರರು ವೈ ಜಿ ನರಸಿಂಹಮೂರ್ತಿ ಬಯಲು ಸಿಂಹ ಪೀಣ್ಯ ದಾಸರಹಳ್ಳಿ)
ಪೀಣ್ಯ ದಾಸರಹಳ್ಳಿ : ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರ ಧರ್ಮ ಪತ್ನಿ ಶ್ರೀಮತಿ ಸುಜಾತ ಮುನಿರಾಜು ಹಾಗೂ ಮಕ್ಕಳು ಅಳಿಯಂದಿರು ಮೊಮ್ಮಕ್ಕಳು ಕ್ಷೇತ್ರದ ಪ್ರಸಿದ್ಧ ದೇವಸ್ಥಾನದಲ್ಲಿ ಒಂದಾದ ಬಾಗಲಗುಂಟೆ ಗ್ರಾಮ ದೇವತೆ ತಾಯಿ ಮಾರಮ್ಮ ದೇವಿಗೆ ಪವಿತ್ರ ಕಾರ್ತಿಕ ಮಾಸದ ಪ್ರಯುಕ್ತ
ಇಂದು ಮಾರಮ್ಮನ ದೇವಿಗೆ ಹಾಲಿನ ಅಭಿಷೇಕ ಪಂಚಾಮೃತ ಅಭಿಷೇಕ ಅಲಂಕಾರಿಕ ವಿಶೇಷ ಪೂಜೆ ನೆರವೇರಿಸಿದರು.
ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಚೊಕ್ಕಸಂದ್ರ ವಾರ್ಡಿನ ಬಿಜೆಪಿ ಪ್ರಭಾವಿ ಮುಖಂಡ ಮುನಿರಾಜು ಲಾರಿ, ಪ್ರದಾನ ಕಾರ್ಯದರ್ಶಿ ವಿನೋದ್ ಗೌಡ, ಹೆಗ್ಗನಹಳ್ಳಿ ರಾಜಣ್ಣ ಸೇರಿದಂತೆ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಶಾಸಕ ಎಸ್ ಮುನಿರಾಜು ಅವರಿಗೆ ಸಾಥ್ ನೀಡಿದರು.
