ಬೀದರ್:ಧರ್ಮಸ್ಥಳದ ಧರ್ಮಾಽಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿರುವ ಸಮಾಜಮುಖಿ ಸೇವೆ ಮಾದರಿಯಾಗಿವೆ. ಸರ್ಕಾರ ಮಾಡದಂಥ ಕೆಲಸಗಳನ್ನು ಇವರ ನೇತೃತ್ವದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ನಿಂದ ನಡೆಯುತ್ತಿವೆ ಎಂದು ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಹೇಳಿದರು.
ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಟ್ರಸ್ಟ್ ಬೀದರ್ ತಾಲೂಕು ಒಕ್ಕೂಟ ಪದಾಽಕಾರಿಗಳ ಪದಗ್ರಹಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಶಿಕ್ಷಣ, ಆರೋಗ್ಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಹೆಗ್ಗೆಡೆ ಅವರ ನೇತೃತ್ವದಲ್ಲಿ ಅವಿಸ್ಮರಣೀಯ ಕೆಲಸ ನಡೆಯುತ್ತಿವೆ. ವಿಶೇಷವಾಗಿ ಮಾತೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬುವAಥ ಶ್ರೇಷ್ಠ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮನೆಯಲ್ಲಿ ಪೂಜೆ ಮಾಡಿದರೆ ಒಂದು ಫಲ ಸಿಗುತ್ತದೆ. ತೀರ್ಥಕ್ಷೇತ್ರದಲ್ಲಿ ಪೂಜೆ ಮಾಡಿದರೆ ನಾಲ್ಕು ಫಲಗಳಂತೆ. ಆದರೆ ಗೋವುಗಳ ಸಾನಿಧ್ಯದಲ್ಲಿ ಮಾಡುವ ಪೂಜಾ ಕಾರ್ಯದಿಂದ ಇಡೀ ಸಮಾಜಕ್ಕೆ ಅನಂತ ಫಲ ಲಭಿಸುತ್ತದೆ. ಇಂಥ ಮಹತ್ಕಾರ್ಯ ಟ್ರಸ್ಟ್ನಿಂದ ಇನ್ನಷ್ಟು ಹೆಚ್ಚಾಗಿ ನಡೆಯಲಿ. ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಸಿಕೊಂಡು ಸಮಾಜದಲ್ಲಿ ಬದಲಾವಣೆ ತರುವ ಕಾರ್ಯದಲ್ಲಿ ಎಲ್ಲರೂ ತೊಡಗಬೇಕು ಎಂದು ಕರೆ ನೀಡಿದರು.
ಬೀದರ್ ಜಿಲ್ಲೆಯಲ್ಲಿ ಪೈಪ್ಲೈನ್ನಿಂದ ಹಾಲು ಹರಿಸಬಹುದು ಎಂದು 90ರ ದಶಕದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ದೇಶದ ಕ್ಷೀರಕ್ರಾಂತಿ ಹರಿಕಾರ ಡಾ. ಕುರಿಯನ್ ವರ್ಗಿಸ್ ಹೇಳಿದ್ದರು. ಇದು ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ ಎಷ್ಟೊಂದು ವಿಪುಲ ಅವಕಾಶಗಳಿವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಪೂರಕವಾಗಿ ಹೆಗ್ಗಡೆ ಅವರು ತಮ್ಮ ರಾಜ್ಯಸಭಾ ನಿಽಯಿಂದ ಜಿಲ್ಲೆಗೆ 5 ಕೋಟಿ ರೂ. ಅನುದಾನ ಕೊಟ್ಟಿರುವುದು ದೇಶಕ್ಕೇ ಮಾದರಿಯಾಗಿದೆ. ಕಲಬುರಗಿ ಹಾಲು ಒಕ್ಕೂಟಕ್ಕೆ ಶೇ.70ರಷ್ಟು ಹಾಲು ಬೀದರ್ ಜಿಲ್ಲೆಯಿಂದ ಸರಬರಾಜಾಗುತ್ತದೆ. ಬೀದರ್ ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಲು ಬೀದರ್ಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸುವ ಅತ್ಯಂತ ಅಗತ್ಯವಿದೆ ಎಂದು ಸ್ವಾಮೀಜಿ ಹೇಳಿದರು.
ಧರ್ಮಸ್ಥಳ ಟ್ರಸ್ಟ್ ಯೋಜನಾಽಕಾರಿ ಪುನೀತ ಓಲೇಕಾರ್ ಮಾತನಾಡಿ, ಧರ್ಮಸ್ಥಳ ಧರ್ಮಾಽಕಾರಿ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಅವರು ತಮ್ಮ ರಾಜ್ಯಸಭಾ ಸದಸ್ಯರ ನಿಽಯಿಂದ ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಲು 5 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಇದರಡಿ ನಾನಾ ಕಾರ್ಯಚಟುವಟಿಕೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ನಿತ್ಯ 20 ಸಾವಿರ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಲು ಕಾರಣವಾಗಿದೆ. ಈ ಅನುದಾನದಲ್ಲಿ ಈಗಾಗಲೇ ಅರ್ಧ ಹಣ ಖರ್ಚಾಗಿದೆ. ಪೂರ್ಣ ಹಣ ಖರ್ಚಾದ ಬಳಿಕ ಇನ್ನಷ್ಟು ಹಾಲು ಉತ್ಪನ್ನ ಜಾಸ್ತಿಯಾಗಲಿದೆ. ಅನೇಕ ಬಡ ಕುಟುಂಬಗಳು ಹೈನೋದ್ಯಮದಲ್ಲಿ ತೊಡಗಿ ಆರ್ಥಿಕ ಸದೃಢವಾಗಲು ಇದು ಶಕ್ತಿ ತುಂಬಿದೆ ಎಂದÀರು.
ಹಿರಿಯ ಪತ್ರಕರ್ತ ಸದಾನಂದ ಜೋಶಿ ಉದ್ಘಾಟಿಸಿದರು. ಗುಲ್ಬರ್ಗ ವಿವಿ ಸಿಂಡಿಕೇಟ್ ಮಾಜಿ ಸದಸ್ಯೆ ಪ್ರತಿಭಾ ಚಾಮಾ ಮಾತನಾಡಿದರು. ಜೆಡಿಎಸ್ ವಿದ್ಯಾರ್ಥಿ ಘಟಕ ಜಿಲ್ಲಾಧ್ಯಕ್ಷ ಅಭಿ ಕಾಳೆ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಸಂಗಾ ಸ್ವಾಗತಿಸಿ ನಿರೂಪಣೆ ಮಾಡಿದರು. ಕೇಂದ್ರ ಸಚಿವ ಭಗವಂತ ಖೂಬಾ ಅವರ ಧರ್ಮಪತ್ನಿ ಶಿಲಾವತಿ ಖೂಬಾ ಅವರು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಗೆ ಚಾಲನೆ ನೀಡಿದರು. 50ಕ್ಕೂ ಹೆಚ್ಚು ದಂಪತಿಗಳು ಶೃದ್ಧೆ, ಭಕ್ತಿಯಿಂದ ಪೂಜೆಯಲ್ಲಿ ಪಾಲ್ಗೊಂಡರು.
