ಸಂಚಾರಿ ಠಾಣಾ ಪಿ.ಎಸ್.ಐ ಮಂಜುಳ ರಿಂದ ವಿಮಾ ಸಮಾಲೋಚನೆ
ಚಿಕ್ಕಬಳ್ಳಾಪುರ: ನಗರದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಹಾಗು ಕಾರು ಆಟೋ ಚಾಲಕರಿಗೆ ಇನ್ಸೂರೆನ್ಸ್ ಮಾಡಿಸುವ ಅಗತ್ಯತೆ ಬಗ್ಗೆ ಜಾಗೃತಿ ಅಭಿಯಾನವನ್ನ ಸಂಚಾರಿ ಪೊಲೀಸ್ ಠಾಣೆಯಿಂದ ಹಮ್ಮಿಕೊಳ್ಳಲಾಗಿತ್ತು ಯುನೈಟೆಡ್ ವಿಮಾ ಕಂಪನಿ ಅಧಿಕಾರಿಗಳಿಂದ ವಿಮೆ ಅಗತ್ಯತೆ ಬಗ್ಗೆ ವಿಚಾರ ವಿನಿಯವನ್ನ ಸಂಚಾರಿ ಠಾಣಾ
ಪಿ.ಎಸ್.ಐ ಮಂಜುಳ ಹಮ್ಮಿಕೊಂಡಿದ್ದರು.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ರಚನೆಯಾಗಿ ಹದಿನೈದು ವರ್ಷಗಳು ಕಳೆಯುತ್ತಿವೆ ಜಿಲ್ಲಾ ಕೇಂದ್ರಕ್ಕೆ ಹರಿದುಬರುತ್ತಿರುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ ಆದ್ರೆ ರಸ್ತೆಗಳ ಅಗಲೀಕರಣವಾಗಿಲ್ಲ ದುರಸ್ತಿಯೂ ಆಗುತ್ತಿಲ್ಲ ಇಂತಹ ವೇಳೆ ಸಂಚಾರಿ ದಟ್ಟಣೆಯಿಂದ ಹೆಚ್ಚು ಹೆಚ್ಚು ಅಪಘಾತಗಳಾಗುತ್ತಿವೆ ಅಫಘಾತದಲ್ಲಿ ಆದ ಸಾವುನೋವಿನಿಂದ ಅವರ ಮೇಲೆ ಅವಲಂಬಿತರಾಗಿರುವ ಕುಟುಂಬಗಳು ಬೀದಿಗೆ ಬೀಳಬಾರದು ಅನ್ನೋ ಕಾರಣಕ್ಕೆ ಎಲ್ಲರೂ ಖಡ್ಡಾಯವಾಗಿ ಇನ್ಸೂರೆನ್ಸ್ ಮಾಡಿಸಿಕೊಳ್ಳಿ ಎಂದು ಸಂಚಾರಿ ಪೊಲೀಸ್ ಠಾಣಾ ಪಿ.ಎಸ್.ಐ ಮಂಜುಳು ವಾಹನ ಚಾಲಕರಿಗೆ ಅರಿವು ಮೂಡಿಸಿದರು. ನಗರದ ಹಳೇ ಸಂಚಾರಿ ಪೊಲೀಸ್ ಠಾಣೆ ಮುಂದೆ ಅಭಿಯಾನ ನಡೆಸಿದ ಅವರು ದ್ವಿಚಕ್ರ ವಾಹನಗಳನ್ನ ತಡೆದು ಇನ್ಸೂರೆನ್ಸ್ ಇದೆಯಾ ಇಲ್ವಾ ಎಂದು ಪರಿಶೀಲಿಸಿದರು ಇದೆ ವೇಳೆ ಯುನೈಟೆಡ್ ವಿಮಾ ಕಂಪನಿ ಅಧಿಕಾರಿಗಳನ್ನ ಕರೆದು ವಿಮೆ ಮಾಡಿಸಿಕೊಳ್ಳಬೇಕಾದ್ರೆ ಎನೇನು ಬೇಕು ಹೇಗೆ ಮಾಡಿಸಿಕೊಳ್ಳಬೇಕು ಅದರಿಂದ ಏನೆಲ್ಲಾ ಅನುಕೂಲ ಇದೆ ಅನ್ನುವುದರ ಬಗ್ಗೆ ಮಾಹಿತಿ ಕೊಡಿಸಿದರು.
