ವರದಿ -ಸದಾನಂದ

ಶಿಡ್ಲಘಟ್ಟ: ಪುರಾತನ ಕಾಲದ ದೇವಾಲಯಗಳು ಮತ್ತು ಕಟ್ಟಡಗಳು ಭಾರತ ದೇಶದ ಹೆಮ್ಮೆಯ ಸಂಸ್ಕೃತಿಕ ಪ್ರತಿಬಿಂಬವಾಗಿದ್ದು, ಅವುಗಳನ್ನ ಸಂರಕ್ಷಿಸುವುದು ನಮ್ಮ ಜವಾಬ್ದಾರಿ ಎಂದು ಎನ್ ಎಸ್ ಎಸ್ ಅಧಿಕಾರಿ ನವೀನ್ ಕುಮಾರ್ ಕೆಎಸ್ ತಿಳಿಸಿದರು.

ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಭವನ, ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ ಕೋಶ, ಯುವ ಸಬಲೀಕರಣ ಇಲಾಖೆ, ಕರ್ನಾಟಕ ಸರ್ಕಾರ, ಎನ್ಎಸ್ಎಸ್ ಕೋಶ, ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಯಲಹಂಕ ಉಪನಗರದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ಮತ್ತು ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಚ್ಛತಾ ಅಭಿಯಾನದಲ್ಲಿ ಸುಮಾರು 730 ವರ್ಷಗಳ ಹಿಂದೆ, 1370 ರಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತ ಅವಧಿಯಲ್ಲಿ ಸಾದಲಿಯ ಪಾಳ್ಳೇಗಾರ ತೆಪ್ಪದ ನಾಗಣ್ಣ ರವರು ನಿರ್ಮಿಸಿದ್ದ ಚನ್ನಕೇಶವ ಸ್ವಾಮಿ ದೇವಾಲಯ ( ಪೆದ್ದ ಗುಡಿ ) ಗಿಡ ಗಂಟೆಗಳನ್ನು ಮೈ ತುಂಬಿಕೊಂಡು ಅನಾಧವಾಗಿತ್ತು, ಅಂತಹ ಪುರಾಣ ಪ್ರಸಿದ್ಧ ದೇವಾಲಯವನ್ನ ನಮ್ಮ ಎನ್ ಎಸ್ ಎಸ್ ಸ್ವಯಂಸೇವಕರು ಸ್ವಚ್ಛಗೊಳಿಸಿ ಮರು ಜೀವ ನೀಡುವುದು ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ಸಾದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಮುಖಂಡರಾದ ಅವಲ ರೆಡ್ಡಿ, ಎಸ್ ಎನ್ ನಾರಾಯಣಸ್ವಾಮಿ, ಎನ್ಎಸ್ಎಸ್ ಸ್ವಯಂಸೇವಕರು ಮುಂತಾದವರು ಹಾಜರಿದ್ದರು.

ಒಟ್ಟಿನಲ್ಲಿ ನಶಿಸಿಹೋಗುತ್ತಿರುವ ಭಾರತದ ಸಾಂಸ್ಕೃತಿಕ ಪ್ರತೀಕವಾದ ದೇವಾಲಯಗಳಿಗೆ ಸ್ವಚ್ಛತೆಯ ಮೂಲಕ ಮರು ಜೀವ ನೀಡುವ ಕಾಯಕಕ್ಕೆ ಮುಂದಾಗಿರುವ ಇವರ ಕಾರ್ಯಕ್ಕೆ ಗ್ರಾಮಸ್ಥರು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *