ಕನ್ನಡ ಸಂಸ್ಕೃತಿ ಇಲಾಖೆ ಬ್ಯಾಟರಾಯನಪುರ ಕಾಂಗ್ರೆಸ್ ಸಮಿತಿ ಸಹಯೋಗ :

ಬ್ಯಾಟರಾಯನಪುರ : ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಬ್ಯಾಟರಾಯನಪುರ ಕಾಂಗ್ರೆಸ್ ಸಮಿತಿ ಸಹಯೋಗದೊಂದಿಗೆ ಕ್ಷೇತ್ರದ ಹುಣಸಮಾರನಹಳ್ಳಿಯಲ್ಲಿ ಆಯೋಜಿಸಿದ್ದ ಜನಪರ ಉತ್ಸವದಲ್ಲಿ ಜನಪದ ಗೀತೆಗಳ ಗಾಯನ, ಜನಪದ ನೃತ್ಯಗಳ ಆಮೋಘ ದೃಶ್ಯ ಪ್ರದರ್ಶನ ನೆರೆದ ಜನರ ಮನಸೂರೆಗೊಳಿಸಿದವು.

ತಮಟೆ, ವೀರಗಾಸೆ, ಪೂಜಾಕುಣಿತ, ಸೋಮನಕುಣಿತ, ಡೊಳ್ಳು ಕುಣಿತ, ಗಾರುಡಿಗೊಂಬೆ, ಕೋಳಿ ನೃತ್ಯ, ಪಟದಕುಣಿತ, ಹಾಲಕ್ಕಿ ಕುಣಿತ, ಸುಗ್ಗಿ ಕುಣಿತ ಮುಂತಾದ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಅನಾವರಣಗೊಳಿಸುವ ಜಾನಪದ ಕಲೆಗಳನ್ನು ಪ್ರದರ್ಶಿಸುತ್ತಾ ಹುಣಸಮಾರನಹಳ್ಳಿ ಗ್ರಾಮದ ಭೈರಪ್ಪ ಬಿಲ್ಡಿಂಗ್, ಕೋಡಿರಸ್ತೆ ಮೂಲಕ ಸಾಗಿ ಪುರಸಭಾ ಕಾರ್ಯಾಲಯದ ಬಳಿ ಸಜ್ಜುಗೊಳಿಸಿದ್ದ ವೇದಿಕೆವರೆಗೆ ಮೆರವಣಿಗೆ ಮೂಲಕ ಸಾಗಿದರು.

ಸಮಾಜ ಸೇವಕರಾದ ಮೀನಾಕ್ಷಿ ಕೃಷ್ಣಬೈರೇಗೌಡ ಡಕ್ಕೆ ಬಾರಿಸುವ ಮೂಲಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ, ಜನಪದ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿದರು.

ನಂತರ ಮಾತನಾಡಿದ ಅವರು ‘ಆಧುನಿಕತೆಯ ಈ ಯುಗದಲ್ಲಿ ನಾವು ಅತಿಯಾದ ತಂತ್ರಜ್ಞಾನಗಳಿಗೆ ಒಗ್ಗಿಕೊಂಡು ನಮ್ಮ ಜಾನಪದ ಕಲೆಗಳನ್ನು ಮರೆಯುತ್ತಿದ್ದೇವೆ. ಇಂದಿನ ಯುವ ಪೀಳಿಗೆಗೆ ನಮ್ಮ ಜನಪದ ಸಂಸ್ಕೃತಿ, ಕಲೆಗಳ ಬಗ್ಗೆ ಅರಿವು ಮೂಡಿಸಿ, ಅವುಗಳನ್ನು ಕಲಿಸುವ ಕಾರ್ಯವಾಗಬೇಕಿದೆ. ಈ ದಿಸೆಯಲ್ಲಿ ಪ್ರತಿ ಜಿಲ್ಲೆಗಳಲ್ಲೂ ಜಾನಪದ ಕಲೆಗಳ ಕಾರ್ಯಕ್ರಮ ಗಳನ್ನು ಆಯೋಜಿಸಿ, ಪ್ರದರ್ಶಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಜನಪದ ಕಲಾವಿದರಾದ ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಜನಪದ ಜಾಕ್ಸನ್ ಜೋಗಿಲ ಸಿದ್ದರಾಜು, ಗೌರಮ್ಮ, ಡಾ.ಕೆ.ಎನ್.ನಾಗೇಶ್ ರವರ ಜಾನಪದ ಹಾಡುಗಳಿಗೆ ನೆರದಿದ್ದ ಸಭಿಕರು ತಲೆದೂಗಿದರು, ಕುಣಿದು ಕುಪ್ಪಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಚಂದ್ರಶೇಖರ್. ಬೆಂ.ನಗರ ಜಿ.ಪಂ.ಮಾಜಿ ಅಧ್ಯಕ್ಷ ಕೆ.ಅಶೋಕನ್, ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ದೊಡ್ಡಜಾಲ ಗ್ರಾ.ಪಂ.ಮಾಜಿ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್, ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ ಸೇರಿದಂತೆ ಇನ್ನಿತರರಿದ್ದರು.

ಬ್ಯಾಟರಾಯನಪುರ : ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಬ್ಯಾಟರಾಯನಪುರ ಕಾಂಗ್ರೆಸ್ ಸಮಿತಿ ಸಹಯೋಗದೊಂದಿಗೆ ಕ್ಷೇತ್ರದ ಹುಣಸಮಾರನಹಳ್ಳಿಯಲ್ಲಿ ಆಯೋಜಿಸಿದ್ದ ಜನಪರ ಉತ್ಸವದಲ್ಲಿ ಜನಪದ ಗೀತೆಗಳ ಗಾಯನ, ಜನಪದ ನೃತ್ಯಗಳ ಆಮೋಘ ದೃಶ್ಯ ಪ್ರದರ್ಶನ ನೆರೆದ ಜನರ ಮನಸೂರೆಗೊಳಿಸಿದವು.

ತಮಟೆ, ವೀರಗಾಸೆ, ಪೂಜಾಕುಣಿತ, ಸೋಮನಕುಣಿತ, ಡೊಳ್ಳು ಕುಣಿತ, ಗಾರುಡಿಗೊಂಬೆ, ಕೋಳಿ ನೃತ್ಯ, ಪಟದಕುಣಿತ, ಹಾಲಕ್ಕಿ ಕುಣಿತ, ಸುಗ್ಗಿ ಕುಣಿತ ಮುಂತಾದ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಅನಾವರಣಗೊಳಿಸುವ ಜಾನಪದ ಕಲೆಗಳನ್ನು ಪ್ರದರ್ಶಿಸುತ್ತಾ ಹುಣಸಮಾರನಹಳ್ಳಿ ಗ್ರಾಮದ ಭೈರಪ್ಪ ಬಿಲ್ಡಿಂಗ್, ಕೋಡಿರಸ್ತೆ ಮೂಲಕ ಸಾಗಿ ಪುರಸಭಾ ಕಾರ್ಯಾಲಯದ ಬಳಿ ಸಜ್ಜುಗೊಳಿಸಿದ್ದ ವೇದಿಕೆವರೆಗೆ ಮೆರವಣಿಗೆ ಮೂಲಕ ಸಾಗಿದರು.

ಸಮಾಜ ಸೇವಕರಾದ ಮೀನಾಕ್ಷಿ ಕೃಷ್ಣಬೈರೇಗೌಡ ಡಕ್ಕೆ ಬಾರಿಸುವ ಮೂಲಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ, ಜನಪದ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿದರು.

ನಂತರ ಮಾತನಾಡಿದ ಅವರು ‘ಆಧುನಿಕತೆಯ ಈ ಯುಗದಲ್ಲಿ ನಾವು ಅತಿಯಾದ ತಂತ್ರಜ್ಞಾನಗಳಿಗೆ ಒಗ್ಗಿಕೊಂಡು ನಮ್ಮ ಜಾನಪದ ಕಲೆಗಳನ್ನು ಮರೆಯುತ್ತಿದ್ದೇವೆ. ಇಂದಿನ ಯುವ ಪೀಳಿಗೆಗೆ ನಮ್ಮ ಜನಪದ ಸಂಸ್ಕೃತಿ, ಕಲೆಗಳ ಬಗ್ಗೆ ಅರಿವು ಮೂಡಿಸಿ, ಅವುಗಳನ್ನು ಕಲಿಸುವ ಕಾರ್ಯವಾಗಬೇಕಿದೆ. ಈ ದಿಸೆಯಲ್ಲಿ ಪ್ರತಿ ಜಿಲ್ಲೆಗಳಲ್ಲೂ ಜಾನಪದ ಕಲೆಗಳ ಕಾರ್ಯಕ್ರಮ ಗಳನ್ನು ಆಯೋಜಿಸಿ, ಪ್ರದರ್ಶಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಜನಪದ ಕಲಾವಿದರಾದ ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಜನಪದ ಜಾಕ್ಸನ್ ಜೋಗಿಲ ಸಿದ್ದರಾಜು, ಗೌರಮ್ಮ, ಡಾ.ಕೆ.ಎನ್.ನಾಗೇಶ್ ರವರ ಜಾನಪದ ಹಾಡುಗಳಿಗೆ ನೆರದಿದ್ದ ಸಭಿಕರು ತಲೆದೂಗಿದರು, ಕುಣಿದು ಕುಪ್ಪಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಚಂದ್ರಶೇಖರ್. ಬೆಂ.ನಗರ ಜಿ.ಪಂ.ಮಾಜಿ ಅಧ್ಯಕ್ಷ ಕೆ.ಅಶೋಕನ್, ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ದೊಡ್ಡಜಾಲ ಗ್ರಾ.ಪಂ.ಮಾಜಿ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್, ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ ಸೇರಿದಂತೆ ಇನ್ನಿತರರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ.

R hanumanthu 9845085793

7349337989. 9035282296

Leave a Reply

Your email address will not be published. Required fields are marked *