










ಯಲಹಂಕ: ಕೋಗಿಲು ಶ್ರೀನಿವಾಸಪುರ 33ನೇ ವರ್ಷದ ಅದ್ದೂರಿ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳು ಕಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕೆಲವು ವಿಷಯಗಳಲ್ಲಿ ನೂರು ಅಂಕಗಳಿಗೆ 100 ಅಂಕಗಳು ಗಳಿಸಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದು ಎಲ್ಲರ ಗಮನ ಸೆಳೆಯಿತು. ಹಾಗೂ 2nd ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳು ಗಳಿಸಿದ ವಿದ್ಯಾರ್ಥಿಗಳನ್ನು ಸಹ ಗೌರವಿಸಲಾಯಿತು. ಒಬ್ಬ ವ್ಯಕ್ತಿ ಬಡತನದಲ್ಲಿ ಹುಟ್ಟಿ ಬಡವರಿಗಾಗಿ ಸೇವೆ ಮಾಡಬೇಕು ಅಂತ ನಿರ್ಧಾರ ಮಾಡಿದರೆ ಏನೆಲ್ಲಾ ಸಾಧಿಸಬಹುದು ಅನ್ನೋದಿಕ್ಕೆ ಸಾಕ್ಷಿಯಾಗಿ ಕಲ್ಬುರ್ಗಿಯ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದಂತಹ ಒಬ್ಬ ವ್ಯಕ್ತಿ ಬೆಟ್ಟಹಲಸೂರು ಬಂದು ಅಲ್ಲಿರುವ ಬಂಡೆ ಕೆಲಸ ಮಾಡುವ ಅನೇಕ ಬಡವರ ಮಕ್ಕಳನ್ನು ಕಂಡ ವ್ಯಕ್ತಿ ಈ ಮಕ್ಕಳಿಗೆ ಏನಾದರೂ ಮಾಡಿ ಶಿಕ್ಷಣ ಕೊಡಬೇಕು ಎನ್ನುವ ಅಂಬಲದಿಂದ ಪ್ರಾರಂಭವಾಗಿದ್ದು ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆ ಅವತ್ತಿನಿಂದ ಇವತ್ತಿನವರೆಗೂ ಬಡವರ ಆಶಾಕಿರಣವಾಗಿ ಬಡವ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಮುಖಾಂತರ ಇತರರಿಗೆ ಸ್ಪೂರ್ತಿಯಾಗಿದ್ದಾರೆ ಡಾ. ಎ ಎಸ್ ರಾಜು ಆಕ್ಸ್ಫರ್ಡ್ ಸ್ಕೂಲ್ ಮತ್ತು ಕಾಲೇಜಿನ ಸಂಸ್ಥಾಪಕರು ಆಕ್ಸ್ಫರ್ಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್. ಇವರು ಮಾತನಾಡುತ್ತಾ ಇಡೀ ನನ್ನ ಜೀವನವೇ ಶಿಕ್ಷಣಕ್ಕಾಗಿ ಬಡವರಿಗಾಗಿ ಮುಡುಪಾಗಿಟ್ಟಿದ್ದೇನೆ. ಇನ್ನಷ್ಟು ವಿದ್ಯಾರ್ಥಿಗಳು ನಮ್ಮ ಶಿಕ್ಷಣ ಸಂಸ್ಥೆಯಿಂದ ಹೊರಹೊಮ್ಮಿ ದೇಶ ವಿದೇಶಗಳಲ್ಲಿ ಕೀರ್ತಿಯನ್ನು ಸಾಧಿಸಲಿ ಎಂದು ಹಾರೈಸಿದರು. ಶಾಲೆಯ ಪ್ರಾಂಶುಪಾಲರಾದ ಪ್ರಮೀಳಾ ರಾಜೇಶ್ ಇವರು ಮಾತನಾಡಿ ಕಳೆದ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ಎರಡು ರ್ಯಾಂಕ್ ತಂದು ಕೊಟ್ಟಿದ್ದಾರೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಮುಂದಿನ ವರ್ಷ ರಾಜ್ಯದಲ್ಲಿ ಅತಿ ಹೆಚ್ಚು ರ್ಯಾಂಕ್ ಪಡೆದುಕೊಳ್ಳುವ ಶಿಕ್ಷಣ ಸಂಸ್ಥೆ ನಮ್ಮದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಇದೇ ಶಾಲೆಯಲ್ಲಿ ಸತತ 30ವರ್ಷಗಳು ಸೇವೆ ಸಲ್ಲಿಸಿದಂತಹ ಜಾನಕಿ ಶಿಕ್ಷಕಿ ಮಾತನಾಡುತ್ತಾ ಇದು ನನಗೆ ಕೇವಲ ಶಾಲೆಯಲ್ಲ ಇದು ನನಗೆ ಮನೆ ಇದು ನನ್ನ ಕುಟುಂಬ ನನ್ನ ಮನೆಯಲ್ಲಿ ಏನೇ ಸಮಸ್ಯೆ ಆದರೂ ಆ ಸಮಸ್ಯೆಗೆ ಸ್ಪಂದಿಸುವಂತಹ ಕೆಲಸ ಈ ವಿದ್ಯಾ ಸಂಸ್ಥೆ ಮಾಡುತ್ತ ಬಂದಿದೆ ನಾನು ಯಾವ ಜನ್ಮದಲ್ಲಿ ಪುಣ್ಯ ಮಾಡಿದೆನೋ, ಇಂತಹ ವಿದ್ಯಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ನನಗೊಂದು ಅವಕಾಶ ಮಾಡಿಕೊಟ್ಟರು. ಪ್ರಾರಂಭದಲ್ಲಿ ಶಾಲೆಗೆ ಬಂದಾಗ ನನ್ನನ್ನ ತಿದ್ದಿ ತಿಡಿದಂತಹ ರಾಜು ಸರ್ ಹಾಗೂ ಪ್ರಾಂಶುಪಾಲರಾದ ಪ್ರಮೀಳಾ ರಾಜೇಶ್ ಅವರಿಗೆ ನಾನು ಅನಂತ ಧನ್ಯವಾದಗಳು ಸಲ್ಲಿಸುತ್ತೇನೆ. ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಪಿ.ಸೀನ ಕೆಎಎಸ್ ಕರ್ನಾಟಕ ಸರ್ಕಾರ ಮಾತನಾಡಿ ಕರ್ನಾಟಕದಲ್ಲಿ ಅನೇಕ ಶಾಲೆಗಳಿದವೇ ಆದರೆ ಬಡವರಿಗಾಗಿ ಬಡವರ ವಿದ್ಯಾಭ್ಯಾಸಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿರುವುದು ಬಹಳ ಎಮ್ಮೆ ಎನಿಸುತ್ತಿದೆ ಇಂತಹ ರಾಜು ಸರ್ ಅವರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಹಳ ಸಂತೋಷ ವಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾರ್ಖಂಡಯ್ಯ ಮಾಜಿ ಅಧ್ಯಕ್ಷರು ಸಿಎಂಸಿ, ಡಾ. ಡೆಕ್ಸ್ಟರ್ ಎಸ್ ಮಾಬೇಬ್, ಡಾ. ಬಿ ಆರ್ ಲಕ್ಷ್ಮಣ್, ಪ್ರಾಧ್ಯಾಪಕರು ಹಾಗೂ ವಕೀಲರು, ಮಡಿವಾಳಪ್ಪ ನಾಗರಹಳ್ಳಿ ಕಾರ್ಯದರ್ಶಿಗಳು KSDNEB ಬೆಂಗಳೂರು, ಡಾ. ಆರ್ ಜಗನ್ನಾಥ್, ಜಂಟಿ ನಿರ್ದೇಶಕರು ಕರ್ನಾಟಕ ವೆಟರ್ನರಿ ಸರ್ವಿಸ್, ಡಾ. ರಾಮಚಂದ್ರ ಅಧ್ಯಕ್ಷರು
KASMO, ಪ್ರಧಾನ ಕಾರ್ಯದರ್ಶಿ ಸುರೇಶ್ ವಿ, ಚಿಕ್ಕ ಹನುಮೇಗೌಡ ಖಜಾಂಚಿ ಹಾಗೂ ಆಕ್ಸ್ಫರ್ಡ್ ವಿದ್ಯಾ ಸಂಸ್ಥೆಯ ಎಲ್ಲ ಬೋಧಕ ವರ್ಗ ಮತ್ತು ಬೋಧಕೇತರ ವಿಶೇಷವಾಗಿ ಎಲ್ಲ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಹಾಗೂ ಪೋಷಕರು ಉಪಸ್ಥಿತರಿದ್ದರು .
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
,9845085793. 7349337989. 9035282296