ಬೆಂಗಳೂರು : ಪವರ್ ಗ್ರಿಡ್ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ನಿಧಿಯಿಂದ 23 ಕೋಟಿ ರು.ವೆಚ್ಚದಲ್ಲಿ ನಗರದ ನಿಮ್ಹಾನ್ಸ್ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿದ್ದ ವಿಶ್ರಾಂತಿ ಸದನವನ್ನು ಕೇಂದ್ರ ಇಂದನ ಸಚಿವ ಆರ್ ಕೆ ಸಿಂಗ್, ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಿದರು.
ನಂತರ ಕೇಂದ್ರ ಇಂದನ ಸಚಿವ ಆರ್ ಕೆ ಸಿಂಗ್ ಮಾತನಾಡಿ ‘ಪವರ್ ಗ್ರಿಡ್ ಸಂಸ್ಥೆ ಬಡವರ ಆರೋಗ್ಯದ ಬಗ್ಗೆ ಹೊಂದಿರುವ ಕಾಳಜಿ ನಿಜಕ್ಕೂ ಪ್ರಶಂಸನೀಯ. ವಿದ್ಯುತ್, ಇಂಧನ ಸೇರಿದಂತೆ ಶಕ್ತಿ ಉತ್ಪಾದನೆಯಲ್ಲಿ ಭಾರತ ಅತ್ಯಂತ ಸದೃಢವಾಗಿದ್ದು, ಇದಕ್ಕೆ ಪವರ್ ಗ್ರಿಡ್ ನಂತಹ ಸಂಸ್ಥೆಗಳ ಕೊಡುಗೆ ಮೂಲ ಕಾರಣ. ಪವರ್ ಗ್ರಿಡ್ ಸಂಸ್ಥೆ ವಿದ್ಯುತ್ ಉತ್ಪಾದನೆಯ ಜತೆಗೆ ಬಡವರ ಸೇವೆಗಾಗಿ 23 ಕೋಟಿ ರು.ವೆಚ್ಚದ ಆಸ್ಪತ್ರೆ ನಿರ್ಮಿಸಿ ಕೊಟ್ಟಿರುವುದು ಮಹತ್ತರವಾದ ಕೊಡುಗೆಯಾಗಿದೆ ಎಂದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡೆವಿಯ ವರ್ಚ್ಯುಯಲ್ ಸಭೆಯ ಮೂಲಕ ಮಾತನಾಡಿ ‘ಪವರ್ ಗ್ರಿಡ್ ಸಂಸ್ಣೆಯ ಸಾಮಾಜಿಕ ಕಳಕಳಿ ಮೆಚ್ಚುಗೆಗೆ ಪಾತ್ರವಾಗಿದೆ. ಆಸ್ಪತ್ರೆಗಳ ಉನ್ನತೀಕರಣಕ್ಕಾಗಿ ಅವರ ಕೊಡುಗೆ ಸ್ಮರಣೀಯ ವಾದುದು. ಪವರ್ ಗ್ರಿಡ್ ಸಂಸ್ಥೆಯ ಈ ಕೊಡುಗೆಯನ್ನು ಬಳಸಿಕೊಂಡು ಬಡ ಮಾನಸಿಕ ರೋಗಿಗಳಿಗೆ ಉತ್ತಮ ಸೇವೆ ನೀಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಪವರ್ ಗ್ರಿಡ್ ಸಂಸ್ಥೆಯ ನಿರ್ದೇಶಕ ಡಾ.ಯತೀಂದ್ರ ದ್ವಿವೇದಿ, ನಿಮ್ಹಾನ್ಸ್ ನಿರ್ದೇಶಕ ಡಾ.ಪಾರ್ತಿಮಮೂರ್ತಿ ಸೇರಿದಂತೆ ಇನ್ನಿತರರಿದ್ದರು.
