.

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಡಾ.ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಾಜ್ ಟೇಕ್ವಾಂಡೋ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಜಿಲ್ಲಾ ಮಟ್ಟದ 2 ದಿನಗಳ ಟೇಕ್ವಾಂಡೋ ಓಪನ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿವಿಧ ವಯೋಮಾನದ ಟೇಕ್ವಾಂಡೋ ಕ್ರೀಡಾ ಸ್ಪರ್ಧಿಗಳು ತಮ್ಮ ಕ್ರೀಡಾ ಪ್ರತಿಭೆ ಅನಾವರಣಗೊಳಿಸಿದರು.

ಭಾನುವಾರ ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಟೇಕ್ವಾಂಡೋ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಟ್ರೋಫಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯ ಸಂಯೋಜಕರಾದ ಡಾ.ಎಸ್. ಸುದರ್ಶನ್, ವಕೀಲರಾದ ವಸೀಮ್ ಅಹಮದ್, ಡಬ್ಲ್ಯೂ ಟಿ ಎಫ್ 5 ಡಾನ್ ಗ್ರ್ಯಾಂಡ್ ಮಾಸ್ಟರ್ ನಾರಾಯಣಸ್ವಾಮಿ, ಐಟಿಎಫ್ ಸೀನಿಯರ್ ಮಾಸ್ಟರ್ ಮಹಮದ್ ಇಸ್ಮಾಯಿಲ್, ಬೆಂ‌.ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಕ್ಕೂರು ರವಿಕುಮಾರ್, ಸಮಾಜ ಸೇವಕರಾದ ಮುಜಾಮಿಲ್ ಪಾಷಾ, ಶಕೀಲ್ ಬಾಷಾ, ಲಕ್ಷಾ ಎಲೆಕ್ಟ್ರಿಕಲ್ಸ್ ನ ವ್ಯವಸ್ಥಾಪಕ ನಿರ್ದೇಶಕ ಎಂ ಜಿ ಸತೀಶ್, ಅಬ್ಬಾಸಿಯಾ ಮಸ್ಜಿದ್ ನ ಅಧ್ಯಕ್ಷರಾದ ತಬ್ರೇಜ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *