ಇಸ್ರೋ ಹಿರಿಯ ವಿಜ್ಞಾನಿ ನಂಬಿನಾರಾಯಣನ್ ನಟ ಅನಂತ್ ನಾಗ್ ರವರಿಗೆ ಜೀವಮಾನದ ಸಾಧನೆ ಪ್ರಶಸ್ತಿ :
ಯಲಹಂಕ : ರೇವಾ ವಿಶ್ವವಿದ್ಯಾ ಲಯದ ಸಂಸ್ಥಾಪಕರಾದ ಡಾ.ಪಿ.ಶಾಮರಾಜು ರವರ ಜನ್ಮದಿನದ ಪ್ರಯುಕ್ತ ರೇವಾ ವಿ.ವಿ.ಯ ಕುವೆಂಪು ರಂಗಮಂದಿರ ದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ರೇವಾ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್, ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ರವರಿಗೆ ರೇವಾ ಜೀವಮಾನದ ಸಾಧನೆ ಪ್ತಶಸ್ತಿ ಹಾಗೂ ಕಿರುತೆರೆ ನಿರೂಪಕಿ ಅನುಶ್ರೀ ಯವರಿಗೆ ರೇವಾ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ನೀಡಿ ಗೌರವಿಸಲಾಯಿತು.
ನಂತರ ಕಾರ್ಯಕ್ರಮ ಉದ್ದೇಶಿಸಿ ರೇವಾ ವಿ.ವಿ.ಕುಲಪತಿ ಡಾ.ಪಿ.ಶಾಮರಾಜು ಮಾತನಾಡಿ ‘ಶೈಕ್ಷಣಿಕ ಕ್ಷೇತ್ರದಲ್ಲಿ ರೇವಾ ಹತ್ತು ವರ್ಷಗಳ ಕಾಲ ಸಂಸ್ಥೆಯಾಗಿ, ಹತ್ತು ವರ್ಷಗಳಿಂದ ವಿಶ್ವ ವಿದ್ಯಾನಿಲಯ ವಾಗಿ ಸೇವೆ ಸಲ್ಲಿಸುತ್ತಿದ್ದು, ಇಲ್ಲಿ ವ್ಯಾಸಂಗ ಮಾಡಿರುವ ಸಹಸ್ರಾರು ಯುವಕರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿ ಸೇವೆ ಸಲ್ಲಿಸುತ್ತಿದ್ದಾರೆ. ರೇವಾ ವಿ.ವಿ.ಯಲ್ಲಿ ಮೌಲ್ಯಯುತ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸಲು ಶ್ರಮಿಸಲಾಗುತ್ತಿದೆ. ನಮ್ಮಲ್ಲಿ ವ್ಯಾಸಂಗ ಮಾಡಿದ ಯುವಕರು ಉದ್ಯೋಗ ಹುಡುಕುವುದಕ್ಕಿಂತ ಉದ್ಯೋಗ ನೀಡುವಂತವರಾಗಿ, ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಲು ಪೂರಕವಾದ ಶಿಕ್ಷಣ ನೀಡಲಾಗು ತ್ತಿದೆ. ವ್ಯಾಸಂಗದ ಜತೆಗೆ ಪರಿಸರ, ಸಮಾಜ, ಕೃಷಿ, ದೇಶಾಭಿಮಾನ ಮುಂತಾದ ಮಹತ್ವದ ವಿಷಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ವನ್ನು ಕೈಗೊಳ್ಳುತ್ತಿದ್ದು, ಪರಿಪೂರ್ಣ ಶಿಕ್ಷಣ ರೇವಾ ವಿ.ವಿ.ಯ ಗುರಿ ಯಾಗಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್ ರವರು ಮಾತನಾಡಿ ‘ಇಸ್ರೋ ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ಇಷ್ಟೊಂದು ಸಾಧನೆ ಗೈಯಲು ವಿಕ್ರಮ್ ಸಾರಾಭಾಯಿ, ಡಾ.ಎಪಿಜೆ ಅಬ್ದುಲ್ ಕಲಾಂ, ಸತೀಶ್ ಧವನ್ ಮತ್ತು ಯು ಆರ್ ರಾವ್ ರವರ ಕೊಡುಗೆ ಅಪಾರ ವಾದದು. ಇವರೆಲ್ಲರೂ ಅದ್ಭುತ ವಿಜ್ಞಾನಿಗಳಾಗುವುದರ ಜತೆಗೆ ಅತ್ಯುನ್ನತವಾದ ನಾಯಕತ್ವದ ಗುಣ ಹೊಂದಿದ್ದರು.
ವಿಕ್ರಮ್ ಸಾರಾಭಾಯಿ ರವರು ಉಪಗ್ರಹ ಉಡಾವಣೆಗೆ ಅಗತ್ಯ ವಾದ ವಿವಿಧ ಸಲಕರಣೆಗಳಲ್ಲಿ ಒಂದನ್ನು ಅಮೇರಿಕಾದಿಂದ, ಇನ್ನೊಂದನ್ನು ರಷ್ಯಾದಿಂದ, ಮತ್ತೊಂದನ್ನು ಜರ್ಮನಿಯಿಂದ ಹೀಗೆ ಒಂದೊಂದನ್ನು ಒಂದೊಂದು ದೇಶದಿಂದ ತರಿಸಿಕೊಂಡು, ಅವುಗಳನ್ನು ಜೋಡಣೆ ಮಾಡಲಾಗುತ್ತಿತ್ತು, ಆಗ ಅವರು ವಿದೇಶಗಳೊಂದಿಗೆ ವ್ಯವಹರಿಸು ತ್ತಿದ್ದ ರೀತಿ ಅವರಲ್ಲಿನ ನಾಯಕತ್ವದ ಗುಣವನ್ನು ತೋರುತ್ತಿತ್ತು. ವಿಶೇಷ ವಾಗಿ ಸತೀಶ್ ಧವನ್ ರವರು ಇಸ್ರೋ ಸಂಸ್ಥೆ ಮುಂದಿನ 25 ವರ್ಷಗಳಲ್ಲಿ ಹೇಗಿರಬೇಕು ಎಂಬುದರ ಪರಿಪಕ್ವ ನೀಲನಕ್ಷೆ ತಯಾರಿಸಿದರು, ಅವರು ತಯಾರಿಸಿದ ನೀಲನಕ್ಷೆಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರುವ ಮೂಲಕ ಇಸ್ರೋ ಸಂಸ್ಥೆಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟ ಕೀರ್ತಿ ಯು ಆರ್ ರಾವ್ ರವರಿಗೆ ಸಲ್ಲುತ್ತದೆ ಎಂದು ತಮ್ಮ ವೈಜ್ಞಾನಿಕ ಬದುಕಿನ ವಿವಿಧ ಘಟನೆಗಳ ಬಗ್ಗೆ ಮೆಲುಕು ಹಾಕಿದರು.
ರೇವಾ ವಿ.ವಿ.ಯ ಕ್ಯಾಂಪಸ್, ಇಲ್ಲಿನ ಸಸ್ಯಶಾಮಲವಾದ ಪರಿಸರ, ಪ್ರಯೋಗಾಲಯ, ಕಲಿಕಾ ಮಾದರಿ ಗಮನಿಸಿದರೆ ಯಾವುದೇ ವಿದೇಶೀ ಉನ್ನತ ವಿಶ್ವವಿದ್ಯಾಲಯಗಳಿಗೆ ಕಡಿಮೆಯೇನಿಲ್ಲ ಎನಿಸುವಂತಿದೆ. ಟವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ನಾಯಕತ್ವದ ಗುಣ ಬೆಳೆಸಬೇಕು ಮತ್ತು ನಮ್ಮ ವಿದ್ಯಾರ್ಥಿಗಳು ಉದ್ಯೋಗ ಹುಡುಕುವುದಕ್ಕಿಂತ ಉದ್ಯೋಗ ನೀಡುವಂತಾಗಬೇಕು ಎಂಬ ಡಾ.ಪಿ.ಶಾಮರಾಜು ರವರ ಶೈಕ್ಷಣಿಕ ಗುರಿ ವಿಭಿನ್ನವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರೇವಾ ವಿ.ವಿ.ಸಹ ಕುಲಪತಿ ಉಮೇಶ್ ಎಸ್ ರಾಜು, ಉಪ ಕುಲಪತಿ ಡಾ.ಎಂ.ಧನಂಜಯ, ಕುಲಾಧಿಪತಿ ಡಾ.ಎನ್.ರಮೇಶ್ ಸೇರಿದಂತೆ ಇನ್ನಿತರ ಗಣ್ಯರಿದ್ದರು.
