
ಶಮ್ಸ್ ಶಾದಿ ಮಹಲ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮದ್ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಜೀವಮಾನದಲ್ಲೇ ವಿದ್ಯಾಭ್ಯಾಸ ಮಾಡುವ ಕಾಲಘಟ್ಟವು ಬಹು ಮುಖ್ಯವಾದದ್ದು ಆದ್ದರಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಅತ್ಯುನ್ನತವಾದ ಸ್ಥಾನವನ್ನು ಪಡೆಯಲು ವಿದ್ಯಾಭ್ಯಾಸವು ಅತಿಮುಖ್ಯ ನೀವು ಕಲಿತ ವಿದ್ಯೆಯು ಸಮಾಜಕ್ಕೆ ಒಳಿತು ಮಾಡುವಂತಿರಬೇಕು ಆಗ ಸಮಾಜದಲ್ಲಿ ಗೌರವ ಅತ್ಯುನ್ನತ ಸ್ಥಾನಮಾನಗಳು ನಿಮ್ಮದಾಗುತ್ತವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜುದ್ದೀನ್ ಖಾನ್, ಹೈಕೋರ್ಟ್ ವಕೀಲರಾದ ಶೀತಲ್ ಸೋನಿ, ಮೊಹಮ್ಮದ್ ಆಝಮ್ ಶಾಹಿದ್, ಸೈಯದ್ ತಾಜುದ್ದೀನ್ ಅಹಮದ್, ಇನ್ನೂ ಅನೇಕ ಗಣ್ಯರು ಹಾಜರಿದ್ದರು. ಸೈಫ್ ಉಲ್ಲಾ ಎಬಿ ನ್ಯೂಸ್ ಬಂಗಾರಪೇಟೆ