ಗಂಗನಮಿದ್ದೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಲಿಕಾ ಸಾಮಗ್ರಿಗಳ ವಿತರಣೆ

ಚಿಕ್ಕಬಳ್ಳಾಪುರ: ಸಮಾಜ ಸೇವಕ 7ನೇ ವಾರ್ಡಿನ ಯುವ ಕಾಂಗ್ರೇಸ್ ಮುಖಂಡ ಅಲ್ಲು ಅನಿಲ್ ಗಂಗನಮಿದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ ಮಾಡಿ ಮಾನಸ ವೃದ್ದಾಶ್ರಮದಲ್ಲಿ ವೃದ್ದಿರಿಗೆ ಊಟದ ವ್ಯವಸ್ಥೆ ಮಾಡಿ ಸಿಹಿ ಹಂಚಿಕೆ ಮಾಡುವ ಮೂಲಕ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು.

ನಗರದ 7ನೇ ವಾರ್ಡಿನ ಯುವ ಕಾಂಗ್ರೇಸ್ ಮುಖಂಡ ಅಲ್ಲು ಅನಿಲ್ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಗಂಗನಮಿದ್ದೆ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಜಾಮಿಟ್ರಿ ಲೇಖನಿ,ಹಾಗು ನೋಟ್ ಪುಸ್ತಕ ವಿತರಣೆ ಮಾಡಿದರು. ನಂತರ ರಂಗಸ್ಥಳದಲ್ಲಿರುವ ಮಾನಸ ವೃದ್ದಾಶ್ರಮದಲ್ಲಿರುವ ವೃದ್ದರಿಗೆ ಉಚಿತ ಊಟದ ವ್ಯವಸ್ಥೆ ಮಾಡಿ ಅವರೊಟ್ಟಿಗೆ ಊಟ ಮಾಡಿ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡರು
ನಂತರ ಕಾಂಗ್ರೇಸ್ ಕಚೇರಿಯಲ್ಲಿ ಯುವ ಕಾಂಗ್ರೇಸ್ ಬಳಗ,ಕಾಂಗ್ರೇಸ್ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡು ಹಿರಿಯರಿಂದ ಆಶೀರ್ವಾದ ಪಡೆದರು.

ಈ ವೇಳೆ ಕಾಂಗ್ರೇಸ್ ಮುಖಂಡ ನಾಯನಹಳ್ಳಿ ನಾರಾಯಣಸ್ವಾಮಿ,ಗಂಗನಮಿದ್ದೆ ಮಹಿಳಾ ನಾಯಕಿ ವೆಂಕಟಲಕ್ಷ್ಮಮ್ಮ,ಚೇತನ್,ಶ್ರೀಕಾಂತ್, ಬಾಲಾಜಿ, ಪುನೀತ್, ಲೋಕೇಶ್, ಗಂಗಾದರ,ವಿಜಯ್ ಕುಮಾರ್ ಮತ್ತು ಇತರರು ಇದ್ದರು.

Leave a Reply

Your email address will not be published. Required fields are marked *