ಬ್ಯಾಟರಾಯನಪುರ : ಸಿಲಿಂಡರ್ ಸ್ಫೋಟದಿಂದಾಗಿ ಮನೆಯ ಮೇಲ್ಛಾವಣಿಯ ಶೀಟ್, ಗೋಡೆ ಬಿರುಕು ಬಿಟ್ಡಿರುವುದರ ಜತೆಗೆ ಮನೆಯಲ್ಲಿದ್ದ ಫ್ರಿಜ್, ಟಿವಿ, ಅಡಿಗೆ ಸಾಮಾನುಗಳು ಸುಟ್ಟು ಹೋಗಿರುವ ಘಟನೆ ಬ್ಯಾಟರಾಯನಪುರ ಕ್ಷೇತ್ರದ ಕೋಗಿಲು ಬಡಾವಣೆಯ ಬಂಡೆ ಸಮೀಪದ ಕಲೋನಿಯಲ್ಲಿ ಸಂಭವಿಸಿದೆ.

ಕೋಗಿಲು ಬಡಾವಣೆಯ ಎಸ್ ಆರ್ ಎಸ್ ಬಿಲ್ಡಿಂಗ್ ಹಿಂದಿರುವ ಕಾಲೋನಿಯ ನಿವಾಸಿ ಸೀನಪ್ಪ ಎಂಬುವರ ಮನೆಯಲ್ಲಿ ಭಾನುವಾರ ಮದ್ಯಾಹ್ನದ ಊಟ ತಯಾರಿ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರೆಲ್ಲಾ ಹೊರಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುತ್ತಮುತ್ತಲಿನ ನಾಗರೀಕರು ಗೋಣಿ ಚೀಲಗಳ ಸಹಾಯದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು,
ಘಟನಾ ಸ್ಥಳಕ್ಕೆ ಯಲಹಂಕ ಪೋಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದು, ಸಿಲಿಂಡರ್ ಸ್ಫೋಟಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಘಟನೆಯಲ್ಲಿ ಮನೆಯಲ್ಲಿದ್ದ ಟಿವಿ, ಫ್ರಿಜ್, ಅಡುಗೆ ಸಾಮಾನುಗಳು ಸುಟ್ಟು ಹೋಗಿದ್ದು, ಮನೆಯ ಮೇಲ್ಛಾವಣಿಯ ಶೀಟುಗಳು ಮತ್ತು ಗೋಡೆ ಬಿರುಕು ಬಿಟ್ಟಿದ್ದು ಲಕ್ಷಾಂತರ ರು.ಗಳ ನಷ್ಟವಾಗಿದೆ.

Leave a Reply

Your email address will not be published. Required fields are marked *