ಪ್ರಧಾನಮಂತ್ರಿ ನರೇಂದ್ರ ಮೋದಿ ಉಪವಾಸ ಮಾಡಿದ್ದೇ ಡೌಟ್
ಅಯೋದ್ಯೆಯಲ್ಲಿ
ರಾಮಲಲ್ಲಾನ ಪ್ರತಿಷ್ಠಾಪನಾ ಕಾರ್ಯಕ್ರಮ ದ ಅಂಗವಾಗಿ ಮೋದಿ ಹನ್ನೊಂದು ದಿನಗಳ ಕಠಿಣ ಉಪವಾಸ ಮಾಡಿದ್ದರು. ಬರೀ ಎಳೆನೀರು ಮಾತ್ರ ಕುಡಿದು ಭಕ್ತಿಯಿಂದ ಪೋಜೆ ನೆರವೇರಿಸಿದರು ಎಂಬುದು ಬರೀ ಸುಳ್ಳು ವೈದ್ಯರ ಅಭಿಪ್ರಾಯದ ಪ್ರಕಾರ ಅದು ಸಾದ್ಯವೇ ಇಲ್ಲ ಅವರನ್ನು ನೋಡಿದ್ರೆ ಉಪವಾಸ ಮಾಡಿದ ವ್ಯಕ್ತಿಯಂತೆ ಕಾಣುತ್ತಿರಲಿಲ್ಲ ಎಂದು ಮಾಜಿ ಸಿಎಂ ವೀರಪ್ಪಮೊಯಿಲಿ ಅನುಮಾನ ವ್ಯಕ್ತಪಡಿಸಿ ವಿವಾದದ ಹೇಳಿಕೆ ನೀಡಿದ್ದಾರೆ.
ಅಯೋದ್ಯೆಯಲ್ಲಿ ಶ್ರೀರಾಮ ಪ್ರತಿಷ್ಟಾಪನೆ ಉಸ್ತುವಾರಿ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹನ್ನೊಂದು ದಿನ ಕಠಿಣ ವೃತ ಉಪವಾಸ ಮಾಡಿದ್ದರು.
ಏಳನೀರು ಮಾತ್ರ ಕುಡಿದು ಉಪವಾಸ ವಿದ್ದರು ಎಂದೆಲ್ಲಾ ಹೇಳುತಿದ್ದಾರೆ ಅದೆಲ್ಲಾ ಸುಳ್ಳು ಮನುಷ್ಯ11 ದಿನಗಳ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ವೈದ್ಯರ ಅಭಿಪ್ರಾಯದ ಪ್ರಕಾರ ಅದು ಅಸಾಧ್ಯ.
ಉಪವಾಸ ಅಂತ ಹೇಳಿ ಮೋದಿ ಬಹಳ ಜೋರಾಗಿ ಒಡಾಡಿದ್ರು ಉಪವಾಸ ಇದ್ದ ಹಾಗೆ ನರೇಂದ್ರ ಮೋದಿ ಕಾಣುತ್ತಿರಲಿಲ್ಲ
ದೇವರಿಗೆ ಇಚ್ಛೆ ಪ್ರಕಾರ ಏನ್ ಬೇಕಾದ್ರೂ ಮಾಡಲಿ ಆದ್ರೆ ಇವರ ನಾಟಕ ಇನ್ನೂ ಮುಂದೆ ನಡೆಯಲ್ಲ ಇದು ದೇಶದ ರಾಮಭಕ್ತರಿಗೆ ಹಾಕಿದ ಟೋಪಿ ಗುಜರಾತ್ ಹತ್ಯಾಕಾಂಡದ ವೇಳೆ ಮೋದಿ ರಾಜಧರ್ಮ ಪಾಲನೆ ಮಾಡಲಿಲ್ಲ. ಕಾನೂನು ಪರಿಪಾಲನೆ ಮಾಡಲಿಲ್ಲ ರಾಜಧರ್ಮ ಪಾಲನೆ ಮಾಡದೆ ಶ್ರೀರಾಮನ ಗರ್ಭಗುಡಿಯಲ್ಲಿ ಕೂತು ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ವಿಪರ್ಯಾಸ.ನಾನು ಬೆಳಿಗ್ಗೆ ವಾಕಿಂಗ್ ಮಾಡುವಾಗ ಡಾಕ್ಟರ್ ಬಳಿ ಚರ್ಚೆ ಮಾಡಿದ್ದೇನೆ 11 ದಿನ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಹಾಗೇನಾದ್ರು ಬದುಕಿದ್ರೆ
ಅದೊಂದು ಪವಾಡವಾಗಿಬಿಡುತ್ತೆ
ಹಾಗಾಗಿ ಅ ಉಪವಾಸ ಮಾಡಿರೋದು ಅನುಮಾನ.ಉಪವಾಸ ಮಾಡದೆ ಗರ್ಭಗುಡಿಗೆ ಹೋಗಿ ಪೂಜೆ ಮಾಡಿದ್ರೆ ಸ್ಥಳ ಅಪವಿತ್ರ ಆಗಲಿದೆ. ಶಕ್ತಿ ಉದ್ಭವವಾಗಲ್ಲ.ರಾಮಮಂದಿರದ ಕೆಲಸ ಸಂಪೂರ್ಣ ಆಗಲಿಲ್ಲ.
ನರೇಂದ್ರ ಮೋದಿ ಪ್ರಾಣ ಪ್ರತಿಷ್ಟಾಪನೆ ನಡೆಸಿಕೊಟ್ಟಿದ್ದು ತಪ್ಪು.ನರೇಂದ್ರ ಮೋದಿ ಗರ್ಭಗುಡಿಗೆ ಪ್ರವೇಶ ಮಾಡಿದ್ದು ಸಹ ತಪ್ಪು ಎಂದು ಹಿಯಾಳಿಸಿದರು.
ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಎಂ.ಶಿವಾನಂದ, ಡಿಸಿಸಿ ಮಾಜಿ ಅಧ್ಯಕ್ಷ ನಂದಿ ಆಂಜಿನಪ್ಪ, ಯಲುವಹಳ್ಳಿ ರಮೇಶ್, ಮಮತಾಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಪ್ರಧಾನ ಕಾರ್ಯದರ್ಶಿ ಸುರೇಶ್, ಚಿಂತಾಮಣಿ ನಾರಯಣ ಸ್ವಾಮಿ, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಯುವ ಕಾಂಗ್ರೆಸ್ನ ಜಗದೀಶ್, ಸಾದಿಕ್, ಶಂಕರ್, ಅಚ್ಚು, ರಾಜಶೇಖರ್, ಮಂಗಳಾ ಪ್ರಕಾಶ್,ವೆಂಕಟಲಕ್ಷ್ಮಮ್ಮ , ಶೇಷಾದ್ರಿ ಮತ್ತು ಇತರರು ಇದ್ದರು.

