ದಿಬ್ಬೂರಹಳ್ಳಿ ಬಯಲು ಸಿಂಹ ಸುದ್ದಿ
ವರದಿ -ಸದಾನಂದ
ಸುಮಾರು 500 ವರ್ಷಗಳ ಚರಿತ್ರೆಯ ರಾಮ ಮಂದಿರದ ಕನಸು ನನಸಾಗಿರುವ ಹಿನ್ನೆಲೆ ಇಡೀ ದೇಶವೇ ರಾಮ ನಾಮವನ್ನು ಜಪ ಮಾಡುತ್ತಾ ಪ್ರತಿ ಮನೆಯಲ್ಲೂ ಹಬ್ಬವನ್ನು ಆಚರಿಸಲಾಗಿದೆ.
ಇದರ ಅನ್ವಯ ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ರಾಮನ ಮಂತ್ರಾಕ್ಷತೆಯನ್ನು ಹಾಗೂ ರಾಮನ ಧ್ವಜವನ್ನು ಮನೆ ಮನೆಗೂ ತಲುಪಿಸಿ ಅದರಂತೆ 22ರಂದು ಪ್ರತಿ ಮನೆಯಲ್ಲೂ ಹಬ್ಬದ ರೀತಿಯಲ್ಲಿ ಆಚರಣೆ ಮಾಡಲಾಯಿತು ರಾಮನ ವಿಗ್ರಹಗಳಿಗೆ ಎಲ್ಲರೂ ಪೂಜೆ ಸಲ್ಲಿಸಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಹೆಸರುಬೇಳೆ ಮತ್ತು ಪಾನಕವನ್ನು ಭಕ್ತಾದಿಗಳಿಗೆ ನೀಡಿ, ರಾಮ ಭಜನಾ ಕಾರ್ಯಕ್ರಮವನ್ನು ಸಹ ನೆರೆವೇರಿಸಲಾಯಿತು. ಹೆಣ್ಣು ಮಕ್ಕಳು ಊರಿನ ಬೀದಿ ಬೀದಿಗಳಲ್ಲಿ ರಂಗೋಲಿಯನ್ನು ಬಿಡಿಸಿ ಸಂಭ್ರಮಿಸಿದರು ಮಕ್ಕಳಿಂದ ರಾಮ,ಲಕ್ಷ್ಮಣ ಸೀತೆಯ ವೇಷ ಹಾಕಿ ಸಂತಸ ವ್ಯಕ್ತಪಡಿಸಿ ದಿನವೆಲ್ಲಾ ರಾಮ ನಾಮ ಜಪಿಸಿ ಇಡೀ ಊರಿನ ಗ್ರಾಮಸ್ಥರೆಲ್ಲರೂ ಪಕ್ಷಾತೀತವಾಗಿ ಶ್ರೀ ರಾಮನ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಬಹಳ ಅರ್ಥ ಪೂರ್ಣವಾಗಿ, ಅದ್ದೂರಿಯಾಗಿ ಆಚರಣೆ ಮಾಡಿದರು.
