“ ಧರ್ಮಸ್ಥಳ ಸಂಸ್ಥಯಿಂದ ಜಂಬಗಾ ಬಿ ಕೆರೆಯ ಹಸ್ತಾಂತರ “
ಕಲಬುರಗಿ ತಾಲೂಕಿನ ಜಂಬಗಾ ಬಿ ಗ್ರಾಮದ ಜಂಬಗಾ ಬಿ ಕೆರೆಯ ಪುನಃಶ್ಚೇತನಾ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಆಯೋಜಿಸಿದ ಕೆರೆಯ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು ಇದಿಗ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಗ್ರಾಮದ ಕೆರೆ ಅಭಿವೃದ್ಧಿ ಸಮಿತಿ ಮತ್ತು ಊರಿನ ಮುಖಂಡರಿಗೆ ಹಸ್ತಾಂತರಿಸಲಾಯಿತು. ಕೆರೆ ಅಂಗಳದಲ್ಲಿ ವಿವಿಧ ಅರಣ್ಯ ಸಸಿಗಳನ್ನು ನಾಟಿ ಮಾಡಲಾಯಿತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಧರ್ಮಸ್ಥಳದ ಸಮುದಾಯ ಅಭಿವೃದ್ದಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಆನಂದ ಸುವರ್ಣರವರು ಕೆರೆಯ ನಾಮಫಲಕವನ್ನು ಅನಾವರಣ ಮತ್ತು ಕೆರೆ ಹಸ್ತಾಂತರ ಮಾಡಿ ಮಾತನಾಡಿದ ಅವರು ಭೂಮಿ ತಾಯಿ ಇಲ್ಲದೆ ಇಡಿ ಜಗತ್ತೆ ಇಲ್ಲ ಅವಳೊಬ್ಬಳು ತಂಪಾಗಿದ್ದರೆ ಇಡಿ ಜೀವ ಸಂಕುಲವೇ ತಂಪಾಗಿರುತ್ತದೆ ನಮಗೆ ಹೇಗೆ ಗಾಳಿ, ನೀರು, ಆಹಾರಬೇಕು ಹಾಗೆ ಭೂಮಿ ತಾಯಿಗೂ ಜಲ ಬೇಕು ನಮ್ಮ ಪೂರ್ವಜರು ಪ್ರತಿ ಗ್ರಾಮದಲ್ಲಿ ಕೆರೆ ನಿರ್ಮಾಣ ಮಾಡಿದರು ಆದರೆ ಇಂದಿನ ಪೀಳಿಗೆಯವರು ಅಭಿವೃದ್ಧಿ ಹೆಸರಿನಲ್ಲಿ ಕೆರೆಗಳನ್ನ ನಾಶಮಾಡಿದ್ದಾರೆ ಆದರೆ ಕೆರೆಗಳನ್ನು ಪುನಃ ಚೇತನ ಮಾಡಿ ಈ ಭಾಗದ ರೈತರಿಗೆ ಮತ್ತು ಪ್ರಾಣಿ ಪಕ್ಷೀಗಳಿಗೆ ಅನುಕೂಲವಾಗಲು ಪರಮ ಪೂಜ್ಯರು 2016 ರಿಂದ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದು ಈ ಒಂದು ಪುಣ್ಯ ಕಾರ್ಯಕ್ಕೆ ಎಲ್ಲಾ ಗ್ರಾಮಸ್ಥರು ಕೈಜೊಡಿಸಿದ್ದು ಸಂತೋಷ ತಂದಿದೆ, ಕೆರೆಯ ಮುಂದಿನ ಜವಾಬ್ದಾರಿಯನ್ನು ಸಮಿತಿಯವರು ವಹಿಸಿಕೊಂಡು ಕೆರೆಯ ಸ್ವಚ್ಚತೆ ಮತ್ತು ಪಾವಿತ್ರತೆಯನ್ನು ಕಾಪಡಿಕೋಳ್ಳಬೇಕು ಎಂದರು.
ಧರ್ಮಸ್ಥಳ ಸಂಸ್ಥಯಿಂದ ನಮ್ಮೂರ ನಮ್ಮ ಕೆರೆ, ಶುಧ್ಧಗಂಗಾ, ಶ್ರಧ್ದಾಗಂಗಾ, ಶ್ರಧ್ದಾಕೇಂದ್ರ ಸ್ವಚ್ಚತಾ ಕಾರ್ಯಕ್ರಮ, ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ, ಸುಜ್ಞಾನ ನಿಧಿ ಶಿಷ್ಯ ವೇತನಾ, ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಅನುದಾನ, ದೇವಾಸ್ಥಾನ ಕಟ್ಟಡಕ್ಕೆ ಅನುದಾನ, ಹೀಗೆ ಗ್ರಾಮ ಕಲ್ಯಾಣಕ್ಕೆ ಬೇಕಾಗುವ ಎಲ್ಲಾ ಕಾರ್ಯಕ್ರಮಕ್ಕೆ ಪರಮ ಪೂಜ್ಯರು ಗ್ರಾಮಾಭಿವೃದ್ದಿ ಯೋಜನೆ ಮುಖಾಂತರ ಸಮುದಾಯಕ್ಕೆ ಮುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಜಯಂತ ಪೂಜಾರಿಯವರು ಕೆರೆ ಅಂಗಳದಲ್ಲಿ ಗಿಡ ನಾಟಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ ಸುವರ್ಣ, ಯೋಜನಾಧಿಕಾರಿಗಳಾದ ಶ್ರೀ ಕಲ್ಲನಗೌಡ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀ ಮತಿ ವಿಜಯಲಕ್ಷ್ಮೀ ಬಿರಾದರ, ಮಾಜಿ ಎ ಪಿ ಎಂ ಸಿ ಸದಸ್ಯರಾದ ಶಿವಕುಮಾರ ಎನ್‌ ಪಾಟೀಲ್‌, ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಶರಣಬಸಪ್ಪಾ ಎನ್‌ ಮಾಲಿಪಾಟೀಲ್‌, ಕೃಷಿ ಅಧಿಕಾರಿ ವೀರೇಶ ಎಸ್‌, ಮೇಲ್ವಿಚಾರಕರಾದ ಈಶ್ವರಗೌಡ, ಚಂದ್ರಶೇಖರ, ರೇವಣಸಿದ್ದ, ಸೇವಾಪ್ರತಿನಿಧಿ ಶೀಲಾ ಮತ್ತು ಗ್ರಾಮದ ಗುರು ಹಿರಿಯರು ಗ್ರಾಮ ಪಂಚಾಯತಿ ಸದಸ್ಯರು, ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತಿ ಇದ್ದರು.

Leave a Reply

Your email address will not be published. Required fields are marked *