
ದಿನಾಂಕ 19-2-2024ರಂದು ಸೋಮವಾರ 11.00 ಗಂಟೆಯಿಂದ 2-00 ಗಂಟೆಯವರೆಗೂ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಹಿರಿಯ ಕಿರಿಯ ಅಧ್ಯಾಪಕರಿಗಾಗಿ ಆಯೋಜಿಸಲಾದ ನ್ಯಾಕ್ ಸಮಾಲೋಚನಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವಿಷಯ ತಜ್ಞರಾಗಿ ಆಗಮಿಸಿದ ಇದೇ ಸಂಸ್ಥೆಯಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿರುವ -ಕಾಲೇಜಿನ ನ್ಯಾಕ್ ಮಾನ್ಯತೆಗಾಗಿ ಪರಿಶ್ರಮ ನೀಡಿ, ಅಭಿವೃದ್ಧಿಗೆ ಕಾರಣರಾದ ಪ್ರೋ.ಕುಮುದಿನಿ ಅವರು ಇಂದು ಅಧ್ಯಾಪಕರಿಗಾಗಿ ವಿಶೇಷ ಕಾರ್ಯಾಗಾರವನ್ನು ನಡೆಯಿಸಿ ಕೊಟ್ಟು ಅಧ್ಯಾಪಕರು ಭೌದ್ಧಿಕವಾಗಿ ಹಾಗೂ ಕೌಶಲ್ಯದಿಂದ ನ್ಯಾಕ್ ದಾಖಲೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರಗತಿಗೆ ಮೂಲಕಾರಣವಾಗಬೇಕೆಂದು ಉದಾಹರಣೆಗಳೊಂದಿಗೆ ತಿಳಿಸಿಕೊಟ್ಟರು ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳಿಮಠರವರು ಇಂತಹ ಹಿರಿಯ – ಕಿರಿಯ ಅಧ್ಯಾಪಕರ ಸಮಾಗಮ ಕಾಲಕಾಲಕ್ಕೆ ಆಯೋಜಿಸುತ್ತಿದ್ದರೆ ಶೈಕ್ಷಣಿಕ ಗುಣಾತ್ಮಕತೆಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಪ್ರಾಂಶುಪಾಲರು – ಬೋಧಕ ಬೋಧಕೇತರ ವರ್ಗದವರು ಪ್ರೊ.ಕುಮುದಿನಿ ಅವರನ್ನು ಪ್ರೀತಿ ವಿಶ್ವಾಸದಿಂದ ಸನ್ಮಾನಿಸಿದರು.