
ಬ್ಯಾಟರಾಯನಪುರ : ಉದ್ಯೋಗದ ಉದ್ದೇಶಕ್ಕಾಗಿ ಶಿಕ್ಷಣ ನೀಡುವ ಹಲವು ಶಿಕ್ಷಣ ಸಂಸ್ಥೆಗಳಿವೆ, ಆದರೆ ಉದ್ಯೋಗದ ಜತೆಗೆ ಮನುಷ್ಯನ ಬದುಕಿನ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡುವ ಮೌಲ್ಯಾ ಧಾರಿತ ಶಿಕ್ಷಣ ನೀಡುವ ಸಂಸ್ಥೆಗಳು ವಿರಳವಾಗಿವೆ, ಈ ದಿಸೆಯಲ್ಲಿ ಶಿಕ್ಷಣ ಸಂಸ್ಥೆಗಳು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಉಚ್ಛ ನ್ಯಾಯಾಲಯದ ನ್ಯಾಯವಾದಿ ಗಳು ಹಾಗೂ ಕರ್ನಾಟಕ ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕರಾದ ಸಂತೋಷ್ ಎಸ್ ನಾಗರಾಳೆ ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರದ ಅಗ್ರಹಾರ ಬಡಾವಣೆ ಯಲ್ಲಿನ ಶ್ರೀ ಜ್ಞಾನಜ್ಯೋತಿ ಶಾಲೆಯಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ‘ಜ್ಞಾನ ಸಂಭ್ರಮ 2023-24’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಶೈಕ್ಷಣಿಕ ಕಾಲಘಟ್ಟ ಪ್ರತಿಯೊಬ್ಬರ ಬದುಕಿನ ಅತ್ಯಮೂಲ್ಯವಾದ ಕಾಲಘಟ್ಟವಾಗಿದ್ದು, ಮಕ್ಕಳಲ್ಲಿ ವ್ಯಕ್ತಿತ್ವ ರೂಪಿಸುವ, ಪರಿಪೂರ್ಣ ಬದುಕಿನ ಮೌಲ್ಯ ಗಳನ್ನು ಬಿತ್ತುವ ಹದವಾದ ಕಾಲವಾಗಿರುತ್ತದೆ. ಈ ಅವಧಿ ಯನ್ನು ಯಾರು ಅಮೂಲ್ಯವೆಂದು ಭಾವಿಸಿ, ಶಿಕ್ಷಕರು ಬೋಧಿಸುವ ಎಲ್ಲಾ ವಿಷಯಗಳನ್ನು ಶ್ರದ್ಧೆಯಿಂದ ಕಲಿಕೆಯುತ್ತಾರೋ ಅಂಥವರು ಬದುಕಿನ ಸುರಕ್ಷಿತ ದಡ ತಲುಪುತ್ತಾರೆ, ಈ ನಿಟ್ಟಿನಲ್ಲಿ ಮಕ್ಕಳು ವಿದ್ಯಾರ್ಥಿ ದಿಸೆಯ ಈ ಸದವಕಾಶವನ್ನು ಸದುಪ ಯೋಗಪಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಶ್ರೀ ಜ್ಞಾನಜ್ಯೋತಿ ಶಾಲೆ ನಾನು ಗಮನಿಸಿರುವಂತೆ ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣದ ಜತೆಗೆ ಕ್ರೀಡೆಗಳು, ಸಾರ್ಥಕ ಬದುಕಿನ ಮೌಲ್ಯಗಳು, ಗುರು-ಹಿರಿಯರ ಬಗ್ಗೆ ಪೂಜ್ಯ ಭಾವನೆ, ದೈನಂದಿನ ಬದುಕಿ ನಲ್ಲಿ ಅಳವಡಿಸಿಕೊಳ್ಳ ಬೇಕಿರುವ ಶಿಸ್ತು, ಸಂಯಮ ದಂತಹ ಪರಿಪೂರ್ಣತೆ ಯನ್ನು ಒಳಗೊಂಡ ಮೌಲ್ಯಾ ಧಾರಿತ ಶಿಕ್ಷಣ ನೀಡುತ್ತಿದ್ದು, ಮಕ್ಕಳ ಸರ್ವಾಂಗೀಣ ವಿಕಾಸದ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಅತ್ಯುತ್ತಮ ಗುಣವುಳ್ಳ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ವಿತರಣೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನಜ್ಯೋತಿ ಶಾಲೆಯ ಕಾನೂನು ಸಲಹೆಗಾರರಾದ ಎ.ಡಿ.ಅಂಜನ್ ಕುಮಾರ್ ವಹಿಸಿದ್ದು, ಕಾರ್ಯಕ್ರಮ ದಲ್ಲಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ಪುನೀತ್ ಬಿ.ಆರ್., ಶಾಲೆಯ ಖಜಾಂಚಿ ಎ.ಡಿ.ಪವನ್ ಕುಮಾರ್, ವಿಶೇಷ ಅಧಿಕಾರಿ ಸೌಮ್ಯ ವೈ.ಎ., ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿದ್ದರು.