ದಿನಾಂಕ 16-3-2004ರ ಶನಿವಾರ 5 – – 00 ಗಂಟೆಗೆ ಶ್ರೀವನ ಕಲ್ಲು ಗುರುಮಲ್ಲೇಶ್ವರ ನೆಲಮಂಗಲ ..50 ನೇ ಜಾತ್ರಾ ಮಹೋತ್ಸವದ ವಿಚಾರ ಸಂಕಿರಣದಲ್ಲಿ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಎನ್ ಎಸ್ ಎಸ್ ಅಧಿಕಾರಿಗಳು ಹಾಗೂ ಪ್ರಾಂಶಪಾಲರಾದ ಡಾ. ಶೀಲಾ ದೇವಿ ಎಸ್ ಮಳೀಮಠರವರು ವಿಚಾರಸಂಕಿರಣದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಅಲ್ಲಿನ ವೃದ್ಧಾಶ್ರಮಕ್ಕೂ ಭೇಟಿ ನೀಡಿದರು.. ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳೀಮಠರವರು ವಿಚಾರ ಗೋಷ್ಠಿಯಲ್ಲಿಕನ್ನಡ ಮತ್ತು ಸಂಸ್ಕೃತ – ಒಂದು ಆಯಾಮ ಎಂಬ ವಿಷಯವನ್ನು ಕುರಿತು ವಿಷಯ ಮಂಡಿಸಿದರು ಕನ್ನಡ ಮತ್ತು ಸಂಸ್ಕೃತ ವಿಷಯ ಬಂದಾಗ ಕನ್ನಡವು ತನ್ನದೇ ಆದ ಮೌಖಿಕ ಪರಂಪರೆಯಿಂದ ಸರಳಗನ್ನಡದ ಮೂಲಕ ಜೀವಂತವಾಗಿದೆಯಂದು ಅಭಿಪ್ರಾಯ ವ್ಯಕ್ತಿಪಡಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕು ಕಾವ್ಯ ಎಂ ಸುಶ್ರಾವ್ಯ ಕಂಠದಿಂದ ಭಕ್ತಿಗೀತೆ ಹಾಡಿದರು. ಎನ್ಎಸ್ಎಸ ಅಧಿಕಾರಿಶ್ರೀಗಿರೀಶ ವೈ ಸಹ ಕಾರ್ಯಕ್ರಮಾಧಿಕಾರಿ ಶ್ರೀಗಿರೀಶ ಪಿ ಹೆಚ್ ಸಭೆಗೆ ಶುಭಕೋರಿದರು. ಅಲ್ಲಿರುವ ವೃದ್ಧಾಶ್ರಮದ ವೃದ್ದರಿಗೆ ಹಣ್ಣು ವಿತರಿಸುವುದರ ಮೂಲಕ ವೃದ್ಧರ ಸೇವೆಯನ್ನು ದೇವರಿಗೆ ಅರ್ಪಿಸುವ ಭಕ್ತಿ ಶಕ್ತಿಯಾಗಿ ಹೊರಹೊಮ್ಮಿದ ಅಧ್ಯಾಪಕರ ಚಟುವಟಿಕೆ ಶೈಕ್ಷಣಿಕ ಹಾಗೂ ಸಾಮಾಜಿಕ ಮಹತ್ವ ಪಡೆದುಕೊಂಡಿತು. ಜಾತ್ರೆಯಲ್ಲಿ ಗುರು ಮಲ್ಲೇಶ್ವರ ಮೆರವಣಿಗೆ ಹಾಗೂ ವೀರಭದ್ರ ಕುಣಿತ ಆಕರ್ಷಕವಾಗಿತ್ತು. ಗ್ರಾಮದ ಅನೇಕ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ವಿಚಾರಸಂಕಿರಣವನ್ನು ಯಶಸ್ವಿಗೊಳಿಸಿದರು.

ಜಾಹೀರಾತುಗಳಿಗೆ ಸಂಪರ್ಕಿಸಿ.  R hanumanthu

9845085793.    7349337989

Leave a Reply

Your email address will not be published. Required fields are marked *